ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲಿಗೆ ಹಸಿರು ಬಾವುಟ

ಚಿಕ್ಕಬಳ್ಳಾಪುರ, ಮಾರ್ಚ್‌ 04: ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲು ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ನಾಳೆಯಿಂದ (ಮಾರ್ಚ್ 05) ಸಂಚಾರ ಆರಂಭಿಸಲಿದೆ.

ಯಶವಂತಪುರ-ದೇವನಹಳ್ಳಿ ಡೇಮೂ ರೈಲು ಸಂಚಾರವನ್ನು ಚಿಕ್ಕಬಳ್ಳಾಪುರದ ವರೆಗೆ ಇತ್ತೀಗಷ್ಟೆ ವಿಸ್ತರಣೆ ಮಾಡಲಾಗಿತ್ತು. ಈಗ ಇದೇ ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಬಂದಿರುವುದು ಚಿಕ್ಕಬಳ್ಳಾಪುರ ಭಾಗದ ರೈಲು ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.

ಹೊಸ ರೈಲು, ಯಶವಂತಪುರ ದಿಂದ ಹೊರಟು-ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ- ಶಿಡ್ಲಘಟ್ಟ-ಕೋಲಾರ-ರೇಣುಗುಂಟಾ-ತಿರುಪತಿ-ವಿಜಯವಾಡ-ಮಹಾರಾಷ್ಟ್ರದ ನಾಗಪುರವನ್ನು ಹಾದು ದೆಹಲಿ ತಲುಪಲಿದೆ.

Train to Delhi from Yashwanthpura-Chikkaballapur will green flaged March 05

ನ್ಯಾರೋಗೇಜ್‌ನಿಂದಾಗಿ ಹಲವು ರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರೈಲುಗಳ ಕೊರತೆ ಎದುರಾಗಿತ್ತು. ಈಗ ಬ್ರಾಡ್‌ಗೇಜ್ ಆದ ಕಾರಣ ರೈಲುಗಳ ಸಂಚಾರ ಹೆಚ್ಚಾಗುತ್ತಿದೆ.

ಈ ಹೊಸ ರೈಲಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ನಾಳೆ ಬೆಳಿಗ್ಗೆ 10:30ಕ್ಕೆ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಹಸಿರು ಬಾವುಟ ತೋರಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+