ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲಿಗೆ ಹಸಿರು ಬಾವುಟ
ಚಿಕ್ಕಬಳ್ಳಾಪುರ, ಮಾರ್ಚ್ 04: ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲು ನಿಜಾಮುದ್ದೀನ್ ಎಕ್ಸ್ಪ್ರೆಸ್ ನಾಳೆಯಿಂದ (ಮಾರ್ಚ್ 05) ಸಂಚಾರ ಆರಂಭಿಸಲಿದೆ.
ಭಾರತೀಯ ರೈಲ್ವೆ ಲಗೇಜ್ ನಿಯಮ, ನೀವು ತಿಳಿಯಲೇ ಬೇಕಾದ ಸಂಗತಿಗಳು
ಯಶವಂತಪುರ-ದೇವನಹಳ್ಳಿ ಡೇಮೂ ರೈಲು ಸಂಚಾರವನ್ನು ಚಿಕ್ಕಬಳ್ಳಾಪುರದ ವರೆಗೆ ಇತ್ತೀಗಷ್ಟೆ ವಿಸ್ತರಣೆ ಮಾಡಲಾಗಿತ್ತು. ಈಗ ಇದೇ ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಬಂದಿರುವುದು ಚಿಕ್ಕಬಳ್ಳಾಪುರ ಭಾಗದ ರೈಲು ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.
ಮಾರ್ಚ್ನಿಂದ ಶಿವಮೊಗ್ಗದಿಂದ ತಿರುಪತಿಗೆ ಎಕ್ಸ್ಪ್ರೆಸ್ ರೈಲು
ಹೊಸ ರೈಲು, ಯಶವಂತಪುರ ದಿಂದ ಹೊರಟು-ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ- ಶಿಡ್ಲಘಟ್ಟ-ಕೋಲಾರ-ರೇಣುಗುಂಟಾ-ತಿರುಪತಿ-ವಿಜಯವಾಡ-ಮಹಾರಾಷ್ಟ್ರದ ನಾಗಪುರವನ್ನು ಹಾದು ದೆಹಲಿ ತಲುಪಲಿದೆ.
ನ್ಯಾರೋಗೇಜ್ನಿಂದಾಗಿ ಹಲವು ರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರೈಲುಗಳ ಕೊರತೆ ಎದುರಾಗಿತ್ತು. ಈಗ ಬ್ರಾಡ್ಗೇಜ್ ಆದ ಕಾರಣ ರೈಲುಗಳ ಸಂಚಾರ ಹೆಚ್ಚಾಗುತ್ತಿದೆ.
ಬೆಂಗಳೂರಲ್ಲಿ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, ಹೇಗಿರುತ್ತೆ?
ಈ ಹೊಸ ರೈಲಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ನಾಳೆ ಬೆಳಿಗ್ಗೆ 10:30ಕ್ಕೆ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಹಸಿರು ಬಾವುಟ ತೋರಲಿದ್ದಾರೆ.