ಪೀಠಾಧಿಪತಿಗಳು ಮಠದಿಂದ ಹೊರಬಂದು ಜನಸೇವೆ ಮಾಡಲಿ: ಉಪರಾಷ್ಟ್ರಪತಿ
ಚಿಕ್ಕಬಳ್ಳಾಪುರ, ನವೆಂಬರ್ 23: ಪೀಠಾಧೀಶರು ಮಠದಿಂದ ಹೊರ ಬಂದು ಜನಸೇವೆಯನ್ನು ಮಾಡಲಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಆಯೋಜಿಸಿರುವ ವಿಶ್ವ ಯುವ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. ಇಡೀ ಪ್ರಪಂಚವೇ ಭಾರತದತ್ತ ನೋಡುತ್ತಿದೆ.
ಕಾರಣ ಭಾರತದ ಸಂಸ್ಕೃತಿ, ಸಂಪ್ರದಾಯಗಳು ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ, ಪೀಠಾದೀಶರು, ಮಠಾಧಿಪತಿಗಳು ಮಠಗಳನ್ನು ಬಿಟ್ಟು ಜನರ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.

ಯಾವ ಜಾತಿಯೂ ಶ್ರೇಷ್ಠವಲ್ಲ, ಯಾವ ಜಾತಿಯೂ ಕೀಳಲ್ಲ, ಎಲ್ಲರೂ ಒಂದೇ ಎಲ್ಲರೂ ಭಾರತೀಯರು ಇಂತಹ ಭಾವನೆ ನಮ್ಮಲ್ಲಿರಬೇಕು. ಪ್ರೀತಿ ಮತ್ತು ಸೇವೆ ಭಾರತದ ನೀತಿ, ಭಾರತವು ಸಾಕಷ್ಟು ಶ್ರೀಮಂತ ರಾಷ್ಟ್ರವಾಗಿತ್ತು, ನಾವು ಯಾವ ರಾಷ್ಟ್ರದ ಮೇಲೂ ದಾಳಿ ಮಾಡಿರಲಿಲ್ಲ, ಕಾರಣ ಭಾರತೀಯರು ಸಹನಾಮಯಿ, ಪ್ರೀತಿ ಹಂಚುವವರು ಎಂದು ಭಾರತೀಯರನ್ನು ಕೊಂಡಾಡಿದರು.












Click it and Unblock the Notifications