ಚಿಕ್ಕಬಳ್ಳಾಪುರ ಎಲೆಕ್ಟ್ರಿಷಿಯನ್ ಗೆ 'ಇಟಲಿ ಗೆಳತಿ'ಯಿಂದ 33 ಲಕ್ಷ ವಂಚನೆ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 20: ಗೆಳತಿಯನ್ನು ಮದುವೆಯಾಗಿ, ಇಟಲಿಯಲ್ಲಿ ಸಂತೋಷವಾಗಿ ಜೀವನ ನಡೆಸುವ ಕನಸು ಕಂಡಿದ್ದ ಚಿಕ್ಕಬಳ್ಳಾಪುರದ 45 ವರ್ಷದ ಎಲೆಕ್ಟ್ರಿಷಿಯನ್ ಗೆ 33 ಲಕ್ಷ ರುಪಾಯಿ ವಂಚನೆಯಾಗಿದೆ. ಇದೀಗ ಈ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರದ ಟೀಚರ್ಸ್ ಕಾಲೋನಿಯ ಆರ್. ಕೆ. ಮುನಿರಾಜ ಮೋಸ ಹೋದವರು.
ಸಿಹಿಯಾದ ಮಾತುಗಳಿಂದ ಬಲೆಗೆ ಕೆಡವಿಕೊಂಡ ವಂಚಕಿ ಸಾಲಕ್ಕೆ ಸಿಲುಕಿಸಿದಳು ಎಂದು ಪರಿತಪಿಸುತ್ತಿದ್ದಾರೆ ಮುನಿರಾಜ. ಪತ್ನಿ ಜತೆಗೆ ವಿಚ್ಛೇದನ ಆದ ಮೇಲೆ ವೈವಾಹಿಕ (ಮ್ಯಾಟ್ರಿಮೋನಿ) ವೆಬ್ ಸೈಟ್ ನಲ್ಲಿ ಮುನಿರಾಜ ನೋಂದಣಿ ಮಾಡಿಕೊಂಡಿದ್ದರು. ಮುನಿರಾಜ ಅವರಿಗೆ ದಕ್ಷ ಪಟೇಲ್ ಹೆಸರಿನಲ್ಲಿ ಆನ್ ಲೈನ್ ನಲ್ಲಿ ಪರಿಚಯ ಮಾಡಿಕೊಂಡಿದ್ದಾಳೆ.
ನಿರಂತರವಾಗಿ ಚಾಟಿಂಗ್ ನಡೆಸಿದ ಮೇಲೆ ಮುನಿರಾಜ ಅವರನ್ನು ಮದುವೆ ಆಗುವುದಾಗಿ ದಕ್ಷ ಆಸಕ್ತಿ ತೋರಿಸಿದ್ದಾಳೆ. ''ನಮ್ಮಿಬ್ಬರ ಮದುವೆಗೆ ತಂದೆ- ತಾಯಿಯನ್ನು ಒಪ್ಪಿಸ್ತೀನಿ. ನಾವು ತುಂಬ ಶ್ರೀಮಂತರು. ಭಾರತಕ್ಕೆ ನಾನು ಬರುವುದಕ್ಕೆ ಮುಂಚೆ ನಿಮ್ಮ ಖಾತೆಗೆ ಹದಿನೈದು ಕೋಟಿ ಹಣ ಹಾಕ್ತೀನಿ" ಎಂದು ಕೂಡ ಹೇಳಿದ್ದಾಳೆ.

"ನಾನು ಒಂದೂವರೆ ಕೋಟಿ ರುಪಾಯಿಯಷ್ಟು ಹಣವನ್ನು ವಿದೇಶೀ ಕರೆನ್ಸಿಯಲ್ಲಿ ತೆಗೆದುಕೊಂಡು ಭಾರತಕ್ಕೆ ಬರುತ್ತಿದ್ದೇನೆ" ಎಂದು ಸೆಪ್ಟೆಂಬರ್ ಎಂಟನೇ ತಾರೀಕು ಮುನಿರಾಜ ಅವರಿಗೆ ಹೇಳಿದ್ದಾಳೆ. ಆ ನಂತರ ಕರೆ ಮಾಡಿದ ಆಕೆ, ದೊಡ್ಡ ಮೊತ್ತದ ಹಣದ ಜತೆಗೆ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದಿದ್ದಾರೆ. ಕ್ಲಿಯರೆನ್ಸ್ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕೆ ಹಣ ನೀಡಬೇಕಿದೆ. ಅದಕ್ಕೆ ಭಾರತೀಯ ರುಪಾಯಿ ಬೇಕು ಎಂದು ಆಕೆ ಹೇಳಿದ್ದಾಳೆ.
ಆ ನಂತರ ಮುನಿರಾಜ ಅವರು ಸಾಲ ಮಾಡಿ, ತಾವು ಉಳಿತಾಯ ಮಾಡಿದ್ದ ಐದು ಲಕ್ಷ ಡ್ರಾ ಮಾಡಿ ಒಟ್ಟು ಮೂವತ್ಮೂರು ಲಕ್ಷ ರುಪಾಯಿಯನ್ನು ಆಕೆ ಹೇಳಿದ ಬ್ಯಾಂಕ್ ಖಾತೆಗಳಿಗೆ ಮುನಿರಾಜ ಡೆಪಾಸಿಟ್ ಮಾಡಿದ್ದಾರೆ. ಆ ನಂತರ ಮಹಿಳೆಯ ಫೋನ್ ರಿಂಗಣಿಸುವುದೇ ನಿಂತಿದೆ. ಮುನಿರಾಜ ಅವರು ಬ್ಯಾಂಕ್ ನ ಬ್ರ್ಯಾಂಚ್ ಮ್ಯಾನೇಜರ್ ನ ಭೇಟಿ ಆದಾಗ, "ನೀವು ಮೋಸ ಹೋಗಿದ್ದೀರಿ" ಎಂದು ಅವರು ತಿಳಿಸಿದ್ದಾರೆ.
"ತಿಂಗಳಿಗೆ ಒಂದು ಲಕ್ಷ ರುಪಾಯಿ ಬಡ್ಡಿಗೆ ಸಾಲ ತಂದಿದ್ದೆ. ಇದನ್ನು ಮೂರ್ಖತನ ಅನ್ನಿ ಅಥವಾ ದುರಾಸೆ ಅನ್ನಿ. ಆದರೆ ನಾನು ಎಲ್ಲ ಕಳೆದುಕೊಂಡಿದ್ದೇನೆ. ಅವಳು ಬಹಳ ಒಳ್ಳೆಯವಳು ಅಂದುಕೊಂಡು ಹರಕು- ಮುರುಕು ಇಂಗ್ಲಿಷ್ ನಲ್ಲೇ ಅವಳ ಜತೆ ಮಾತನಾಡುತ್ತಿದ್ದೆ. ಅಪರಿಚಿತರ ಜತೆ ಆನ್ ಲೈನ್ ನಲ್ಲಿ ಮಾತನಾಡುವಾಗ, ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು" ಎನ್ನುತ್ತಾರೆ ಮುನಿರಾಜ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications