ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವೀಟ್ ಮೂಲಕ ಆಶೀರ್ವಾದ ಕೋರಿದ ಶಾಸಕ ಕೆ. ಸುಧಾಕರ್

|
Google Oneindia Kannada News

ಚಿಕ್ಕಬಳ್ಳಾಪುರ, ನವೆಂಬರ್ 13 : ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂಕೋರ್ಟ್‌ ಇಂದು ತೀರ್ಪು ನೀಡಲಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ಜನರ ಆಶೀರ್ವಾದ ಕೇಳಿದ್ದಾರೆ.

ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಬುಧವಾರ ಬೆಳಗ್ಗೆ 10.30ಕ್ಕೆ ಅನರ್ಹ ಶಾಸಕರ ಅರ್ಜಿಯ ತೀರ್ಪು ಪ್ರಕಟಿಸಲಿದೆ. ಅನರ್ಹಗೊಂಡ ಶಾಸಕರು ಈಗಾಗಲೇ ದೆಹಲಿಗೆ ತಲುಪಿದ್ದು, ತೀರ್ಪಿಗಾಗಿ ಕಾದು ಕುಳಿತಿದ್ದಾರೆ.

Karnataka MLAs Disqualification Case Verdict Live Updates : ಅನರ್ಹ ಶಾಸಕರ ತೀರ್ಪುKarnataka MLAs Disqualification Case Verdict Live Updates : ಅನರ್ಹ ಶಾಸಕರ ತೀರ್ಪು

Chikkaballapur Disqualified MLA Dr Sudhakar Tweet

ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಬುಧವಾರ ಬೆಳಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, "ನನಗೆ ನಿಮ್ಮ ಆಶೀರ್ವಾದ ಬೇಕಾಗಿದೆ. ನನ್ನ ವಿಜಯೋತ್ಸವಕ್ಕೆ ಪ್ರಾರ್ಥಿಸಿ"ಎಂದು ಕರೆ ನೀಡಿದ್ದಾರೆ.

ಅನರ್ಹರ ತೀರ್ಪು; ಶಾಸಕರ ಜೊತೆಗಿದ್ದಾರೆ ಉಪ ಮುಖ್ಯಮಂತ್ರಿ ಅನರ್ಹರ ತೀರ್ಪು; ಶಾಸಕರ ಜೊತೆಗಿದ್ದಾರೆ ಉಪ ಮುಖ್ಯಮಂತ್ರಿ

ಡಾ. ಕೆ. ಸುಧಾಕರ್ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡನೆ ಮಾಡುವಾಗ ವಕೀಲರು, ಶಾಸಕರು ಪಕ್ಷವನ್ನು ಬಿಟ್ಟಿಲ್ಲ. ಮುಖ್ಯಮಂತ್ರಿಗಳ ಕಾರ್ಯ ವೈಖರಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಅವರಿಗೆ ಶಾಸಕತ್ವ ಬೇಕಾಗಿರಲಿಲ್ಲ ಎಂದು ವಾದಿಸಿದ್ದರು.

ನಾನು ಬೇರೆ ಪಕ್ಷ ಸೇರಿಲ್ಲ, ಸುಪ್ರೀಂಕೋರ್ಟ್ ತೀರ್ಪಿನ ಕಾರಣ ವಿಪ್ ಅನ್ವಯವಾಗುವುದಿಲ್ಲ. ಸ್ಪೀಕರ್ ಕಳಿಸಿದ ನೋಟಿಸ್‌ಗೆ ಉತ್ತರ ನೀಡಲು 7 ದಿನದ ಬದಲು 3 ದಿನ ಮತ್ರ ಸಮಯ ನೀಡಿದ್ದು ಸರಿಯಲ್ಲ ಮುಂಬೈ ಪ್ರವಾಸಕ್ಕೂ ರಾಜೀನಾಮೆಗೆ ಸಂಬಂಧವಿಲ್ಲ ಎಂದು ವಾದ ಮಂಡಿಸಿದ್ದರು.

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದೆ. ಅನರ್ಹ ಶಾಸಕರು ಚುನಾವಣಾ ಕಣಕ್ಕಿಳಿಯಬಹುದೇ? ಎಂಬುದು ತೀರ್ಪಿನ ಮೇಲೆ ನಿಂತಿದೆ.

English summary
Ahead of the supreme court verdict Chikkaballapur disqualified MLA Dr.K.Sudhakar tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X