ಟ್ವಿಟ್ಟರಲ್ಲಿ #madrasday ಟ್ರೆಂಡಿಂಗ್, 379ನೇ HBD
ಚೆನ್ನೈ, ಆಗಸ್ಟ್ 22: ತಮಿಳುನಾಡಿನ ರಾಜಧಾನಿ ಮದ್ರಾಸ್ (ಈಗಿನ ಅಧಿಕೃತ ಹೆಸರು ಚೆನ್ನೈ) ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 379ನೇ ವರ್ಷಾಚರಣೆ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಟ್ವಿಟ್ಟರ್ ನಲ್ಲಿ ಮದ್ರಾಸ್ ಇತಿಹಾಸ, ಹಿರಿಮೆ, ಗರಿಮೆ, ಹಳೆ ನೆನಪುಗಳ ಮೆಲುಕು ಹಾಕಲಾಗುತ್ತಿದೆ.
ಬ್ರಿಟಿಷರ ಕಾಲದ ಪ್ರಮುಖ ಬಂದರು ಪಟ್ಟಣವಾಗಿದ್ದ ಮದ್ರಾಸ್, ಭಾರತದ ಇತಿಹಾಸದೊಡನೆ ಹಾಸುಹೊಕ್ಕಿದೆ. ಆಗಸ್ಟ್ 22, 1639ರಂದು ಸ್ಥಳೀಯ ನಾಯಕ ಜನಾಂಗಕ್ಕೆ ಸೇರಿದ್ದ ಭೂಮಿಯನ್ನು ಖರೀದಿಸಿದ ಅಂದಿನ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಡೆ, ಸೇಂಟ್ ಜಾರ್ಜ್ ಕೋಟೆ ಕಟ್ಟಿದ. ಮದ್ರಾಸ್ ಎಂದು ಪುನರ್ ನಾಮಕರಣ ಮಾಡಿದ ಎಂದು ಇತಿಹಾಸದ ಪುಟಗಳು ಹೇಳುತ್ತವೆ.
ಚೆನ್ನಪಟ್ಟಿನಮ್, ಮದ್ರಾಸಟ್ನಂ ಎಂದು ಕರೆಯಲಾಗುತ್ತಿದ್ದ ಪಟ್ಟಣದ ಪ್ರಮುಖ ಕಟ್ಟಡವಾಗಿದ್ದ ಫೋರ್ಟ್ ಸೈಂಟ್ ಜಾರ್ಜ್ ಈಗ ತಮಿಳುನಾಡಿನ ಅಸೆಂಬ್ಲಿಯಾಗಿ ಮಾರ್ಪಾಟ್ಟಾಗಿದೆ.
ಸಣ್ಣ ಪುಟ್ಟ ಗ್ರಾಮೀಣ ಭಾಗಗಳನ್ನು ಹೊಂದಿಕೊಂಡಿದ್ದ ಮದ್ರಾಸ್ ನಂತರ ದೇಶದ ವಿವಿಧ ಭಾಗದ ಜನರಿಗೆ ಆಶ್ರಯ ತಾಣವಾಗಿದೆ. ಭಾರತದ ಪ್ರಮುಖ ಮೆಟ್ರೋ ಸಿಟಿಗೆ ಇತ್ತೀಚೆಗೆ ಮೆಟ್ರೋ ರೈಲು ಸಂಪರ್ಕ ಕೂಡಾ ಸಿಕ್ಕಿದೆ.

ಪುರಾತನ ಕಟ್ಟಡಗಳ ರಕ್ಷಣೆ
ಮದ್ರಾಸ್ ಗೆ ಮೊದಲು ಕಾಲಿರಿಸಿದ ಪೋರ್ಚುಗೀಸರು ಕಟ್ಟಿದ ಸೇಂಟ್ ಥಾಮಸ್ ಮೌಂಟ್ ಚರ್ಚ್ ಸೇರಿದಂತೆ ಹತ್ತು ಹಲವು ಪುರಾತನ ಕಟ್ಟಡಗಳ ರಕ್ಷಣೆಗಾಗಿ ಹೆರಿಟೇಜ್ ವಾಕ್ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 19ರಿಂದ ಮದ್ರಾಸ್ ಡೇ ಅಂಗವಾಗಿ 150ಕ್ಕೂ ಅಧಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪಾರಂಪರಿಕ ಕಟ್ಟಡ ಉಳಿಸುವುದು, ಪರಿಸರ ರಕ್ಷಣೆ ಮುಂತಾದ ಕಾರ್ಯಕ್ರಮಗಳು ಗಮನ ಸೆಳೆದಿವೆ.

ಹಲವು ಉದ್ಯಮಗಳ ತವರು ಚೆನ್ನೈ
ಸಂಗೀತ, ಸಾಹಿತ್ಯ, ಸಿನಿಮಾ, ಲಲಿತಕಲೆ, ಜವಳಿ, ಆರೋಗ್ಯ, ಆಟೋಮೊಬೈಲ್ ಅಲ್ಲದೆ, ಐಟಿ ಉದ್ಯಮಕ್ಕೂ ಚೆನ್ನೈ ಪ್ರಮುಖ ಕೇಂದ್ರವಾಗಿದೆ.
|
ಚೆನ್ನೈ ಎಂಬ ಹೆಸರಿನ ಬಗ್ಗೆ ಚರ್ಚೆ
'ಚೆನ್ನ' ಎಂಬುದು ತಮಿಳು ಪದವಲ್ಲ, ಮದ್ರಾಸ್ ಕೂಡಾ ಇಂಗ್ಲೀಷರು ಕೊಟ್ಟ ಹೆಸರು. ಹಾಗಾದರೆ ಇದು ಯಾವ ಭಾಷೆಯದ್ದು ಎಂಬ ಪ್ರಶ್ನೆಗೆ ಉತ್ತರಿಸಿ, ಗುರು ಪ್ರಸಾದ್ ಎಂಬುವರು ಪೆರಿಯಾರ್ ಅವರು ಕನ್ನಡಿಗ, ಹಾಗಾಗಿ ಚೆನ್ನೈ ಎಂಬ ಹೆಸರಿನ ಮೂಲ ಪದ ಚೆನ್ನ ಕೂಡಾ ಕನ್ನಡ ಎಂದಿದ್ದಾರೆ.
|
ಚೆನ್ನೈನಲ್ಲಿ ಏನಿದೆ ಏನಿಲ್ಲ ಎಲ್ಲವೂ ಇದೆ
ನಗರದ ಒಂದು ಪಕ್ಷಿನೋಟ ಇರುವ ಚಿತ್ರಗಳನ್ನು ಹಂಚಿಕೊಂಡ ಚೆನ್ನೈ ಪ್ರಿಯರು.
|
ಮದ್ರಾಸ್ ಡೇಗೆ ಶುಭಹಾರೈಕೆಗಳ ಮಹಾಪೂರ
ಮದ್ರಾಸ್ ಡೇಗೆ ಶುಭಹಾರೈಕೆಗಳ ಮಹಾಪೂರವೆ ಹರಿದು ಬರುತ್ತಿದೆ. ನಗರದ ವೈವಿಧ್ಯ ಪರಿಸರವನ್ನು ಸಾರುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.
1942rರಲ್ಲೆ ಮದ್ರಾಸ್ ನಗರ ಹೇಗಿತ್ತು?
1942ರಲ್ಲಿ ಮದ್ರಾಸ್ ನಗರ ಹೇಗಿತ್ತು? ಎಂಬುದ ಬಗ್ಗೆ ಸಾಕ್ಷ್ಯಚಿತ್ರ ಇಲ್ಲಿದೆ
|
ಅಂದಿನ ಮದ್ರಾಸ್ ,ಇಂದಿನ ಚೆನ್ನೈ
ಅಂದಿನ ಮದ್ರಾಸ್ ,ಇಂದಿನ ಚೆನ್ನೈ ಕಟ್ಟಡಗಳ ಸ್ವರೂಪ ಹೇಗೆ ಬದಲಾಗಿವೆ ಎಂಬುದನ್ನು ತೋರಿಸುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications