ಟ್ವಿಟ್ಟರಲ್ಲಿ #madrasday ಟ್ರೆಂಡಿಂಗ್, 379ನೇ HBD
ಚೆನ್ನೈ, ಆಗಸ್ಟ್ 22: ತಮಿಳುನಾಡಿನ ರಾಜಧಾನಿ ಮದ್ರಾಸ್ (ಈಗಿನ ಅಧಿಕೃತ ಹೆಸರು ಚೆನ್ನೈ) ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 379ನೇ ವರ್ಷಾಚರಣೆ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಟ್ವಿಟ್ಟರ್ ನಲ್ಲಿ ಮದ್ರಾಸ್ ಇತಿಹಾಸ, ಹಿರಿಮೆ, ಗರಿಮೆ, ಹಳೆ ನೆನಪುಗಳ ಮೆಲುಕು ಹಾಕಲಾಗುತ್ತಿದೆ.
ಬ್ರಿಟಿಷರ ಕಾಲದ ಪ್ರಮುಖ ಬಂದರು ಪಟ್ಟಣವಾಗಿದ್ದ ಮದ್ರಾಸ್, ಭಾರತದ ಇತಿಹಾಸದೊಡನೆ ಹಾಸುಹೊಕ್ಕಿದೆ. ಆಗಸ್ಟ್ 22, 1639ರಂದು ಸ್ಥಳೀಯ ನಾಯಕ ಜನಾಂಗಕ್ಕೆ ಸೇರಿದ್ದ ಭೂಮಿಯನ್ನು ಖರೀದಿಸಿದ ಅಂದಿನ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಡೆ, ಸೇಂಟ್ ಜಾರ್ಜ್ ಕೋಟೆ ಕಟ್ಟಿದ. ಮದ್ರಾಸ್ ಎಂದು ಪುನರ್ ನಾಮಕರಣ ಮಾಡಿದ ಎಂದು ಇತಿಹಾಸದ ಪುಟಗಳು ಹೇಳುತ್ತವೆ.
ಚೆನ್ನಪಟ್ಟಿನಮ್, ಮದ್ರಾಸಟ್ನಂ ಎಂದು ಕರೆಯಲಾಗುತ್ತಿದ್ದ ಪಟ್ಟಣದ ಪ್ರಮುಖ ಕಟ್ಟಡವಾಗಿದ್ದ ಫೋರ್ಟ್ ಸೈಂಟ್ ಜಾರ್ಜ್ ಈಗ ತಮಿಳುನಾಡಿನ ಅಸೆಂಬ್ಲಿಯಾಗಿ ಮಾರ್ಪಾಟ್ಟಾಗಿದೆ.
ಸಣ್ಣ ಪುಟ್ಟ ಗ್ರಾಮೀಣ ಭಾಗಗಳನ್ನು ಹೊಂದಿಕೊಂಡಿದ್ದ ಮದ್ರಾಸ್ ನಂತರ ದೇಶದ ವಿವಿಧ ಭಾಗದ ಜನರಿಗೆ ಆಶ್ರಯ ತಾಣವಾಗಿದೆ. ಭಾರತದ ಪ್ರಮುಖ ಮೆಟ್ರೋ ಸಿಟಿಗೆ ಇತ್ತೀಚೆಗೆ ಮೆಟ್ರೋ ರೈಲು ಸಂಪರ್ಕ ಕೂಡಾ ಸಿಕ್ಕಿದೆ.

ಪುರಾತನ ಕಟ್ಟಡಗಳ ರಕ್ಷಣೆ
ಮದ್ರಾಸ್ ಗೆ ಮೊದಲು ಕಾಲಿರಿಸಿದ ಪೋರ್ಚುಗೀಸರು ಕಟ್ಟಿದ ಸೇಂಟ್ ಥಾಮಸ್ ಮೌಂಟ್ ಚರ್ಚ್ ಸೇರಿದಂತೆ ಹತ್ತು ಹಲವು ಪುರಾತನ ಕಟ್ಟಡಗಳ ರಕ್ಷಣೆಗಾಗಿ ಹೆರಿಟೇಜ್ ವಾಕ್ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 19ರಿಂದ ಮದ್ರಾಸ್ ಡೇ ಅಂಗವಾಗಿ 150ಕ್ಕೂ ಅಧಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪಾರಂಪರಿಕ ಕಟ್ಟಡ ಉಳಿಸುವುದು, ಪರಿಸರ ರಕ್ಷಣೆ ಮುಂತಾದ ಕಾರ್ಯಕ್ರಮಗಳು ಗಮನ ಸೆಳೆದಿವೆ.

ಹಲವು ಉದ್ಯಮಗಳ ತವರು ಚೆನ್ನೈ
ಸಂಗೀತ, ಸಾಹಿತ್ಯ, ಸಿನಿಮಾ, ಲಲಿತಕಲೆ, ಜವಳಿ, ಆರೋಗ್ಯ, ಆಟೋಮೊಬೈಲ್ ಅಲ್ಲದೆ, ಐಟಿ ಉದ್ಯಮಕ್ಕೂ ಚೆನ್ನೈ ಪ್ರಮುಖ ಕೇಂದ್ರವಾಗಿದೆ.
|
ಚೆನ್ನೈ ಎಂಬ ಹೆಸರಿನ ಬಗ್ಗೆ ಚರ್ಚೆ
'ಚೆನ್ನ' ಎಂಬುದು ತಮಿಳು ಪದವಲ್ಲ, ಮದ್ರಾಸ್ ಕೂಡಾ ಇಂಗ್ಲೀಷರು ಕೊಟ್ಟ ಹೆಸರು. ಹಾಗಾದರೆ ಇದು ಯಾವ ಭಾಷೆಯದ್ದು ಎಂಬ ಪ್ರಶ್ನೆಗೆ ಉತ್ತರಿಸಿ, ಗುರು ಪ್ರಸಾದ್ ಎಂಬುವರು ಪೆರಿಯಾರ್ ಅವರು ಕನ್ನಡಿಗ, ಹಾಗಾಗಿ ಚೆನ್ನೈ ಎಂಬ ಹೆಸರಿನ ಮೂಲ ಪದ ಚೆನ್ನ ಕೂಡಾ ಕನ್ನಡ ಎಂದಿದ್ದಾರೆ.
|
ಚೆನ್ನೈನಲ್ಲಿ ಏನಿದೆ ಏನಿಲ್ಲ ಎಲ್ಲವೂ ಇದೆ
ನಗರದ ಒಂದು ಪಕ್ಷಿನೋಟ ಇರುವ ಚಿತ್ರಗಳನ್ನು ಹಂಚಿಕೊಂಡ ಚೆನ್ನೈ ಪ್ರಿಯರು.
|
ಮದ್ರಾಸ್ ಡೇಗೆ ಶುಭಹಾರೈಕೆಗಳ ಮಹಾಪೂರ
ಮದ್ರಾಸ್ ಡೇಗೆ ಶುಭಹಾರೈಕೆಗಳ ಮಹಾಪೂರವೆ ಹರಿದು ಬರುತ್ತಿದೆ. ನಗರದ ವೈವಿಧ್ಯ ಪರಿಸರವನ್ನು ಸಾರುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.
1942rರಲ್ಲೆ ಮದ್ರಾಸ್ ನಗರ ಹೇಗಿತ್ತು?
1942ರಲ್ಲಿ ಮದ್ರಾಸ್ ನಗರ ಹೇಗಿತ್ತು? ಎಂಬುದ ಬಗ್ಗೆ ಸಾಕ್ಷ್ಯಚಿತ್ರ ಇಲ್ಲಿದೆ
|
ಅಂದಿನ ಮದ್ರಾಸ್ ,ಇಂದಿನ ಚೆನ್ನೈ
ಅಂದಿನ ಮದ್ರಾಸ್ ,ಇಂದಿನ ಚೆನ್ನೈ ಕಟ್ಟಡಗಳ ಸ್ವರೂಪ ಹೇಗೆ ಬದಲಾಗಿವೆ ಎಂಬುದನ್ನು ತೋರಿಸುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications