ತಮಿಳುನಾಡಿನಲ್ಲಿ ಭೀಕರ ಅಪಘಾತ: ಕಾಸರಗೋಡಿನ 7 ಮಂದಿ ಬಲಿ
ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಕರೂರು ಬಳಿ ಸ್ಕಾರ್ಪಿಯೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕರೂರು(ತಮಿಳುನಾಡು), ಮೇ 13: ವೆಲಾಂಕಣಿಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಕರೂರು ಬಳಿ ಸ್ಕಾರ್ಪಿಯೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಇಂದು (ಮೇ 13) ಬೆಳಿಗ್ಗೆ ನಡೆದಿದೆ.[ಕೆಎಸ್ಆರ್ಟಿಸಿ ಬಸ್ ಹರಿದು ಮೈಸೂರಿನಲ್ಲಿ ಎರಡು ಬಲಿ]

ಮೃತಪಟ್ಟವರನ್ನು ಕಾಸರಗೋಡಿನ ಕಯ್ಯಾರ್ ನಿವಾಸಿಗಳಾದ ಆಲ್ವಿನ್ ಮೊಂಟಿರೋ, ಅವರ ಪತ್ನಿ ಪ್ರೆಮಾ, ಆಲ್ವಿನ್ ಸಹೋದರ ಹೆರಾಲ್ಡ್, ಅವರ ಪತ್ನಿ ಪ್ರಿಸಿಲ್ಲ, ಕ್ಯಾಥರೀನ್, ಶರೋನ್ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ.












Click it and Unblock the Notifications