ಗುಡಿಸಲಲ್ಲಿ ವಾಸ, ಮಣ್ಣಿನ ಒಲೆಯಲ್ಲಿ ಅಡುಗೆ; ಇದು ಅಭ್ಯರ್ಥಿಯ ಆಸ್ತಿ!
ಚೆನ್ನೈ, ಮಾರ್ಚ್ 23: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿ ಮೌಲ್ಯ ಘೋಷಣೆ ಮಾಡಿದ್ದಾರೆ. ಅದರಲ್ಲಿ ಬಹುಪಾಲು ಮಂದಿ ಕೋಟ್ಯಧಿಪತಿಗಳೇ ಆಗಿದ್ದಾರೆ. ಆದರೆ ಸಿಪಿಐನಿಂದ ಸ್ಪರ್ಧಿಸುತ್ತಿರುವ ಕೆ. ಮಾರಿಮುತ್ತು ಎಂಬ ಅಭ್ಯರ್ಥಿ ವಿವರ ಅಚ್ಚರಿ ಹುಟ್ಟಿಸುತ್ತದೆ.
ಗುಡಿಸಲಿನಲ್ಲಿ ಜೀವಿಸುತ್ತಾ, ಕೆಲವೇ ಸಾವಿರ ರೂಪಾಯಿಯನ್ನು ಕೈಯಲ್ಲಿಟ್ಟುಕೊಂಡಿರುವುದಾಗಿ ಘೋಷಿಸಿರುವ ಕೆ. ಮಾರಿಮುತ್ತು ತಮ್ಮ ಕ್ಷೇತ್ರದಲ್ಲಿರುವ ಬಡವರ ಕನಸುಗಳನ್ನು ನನಸು ಮಾಡುವ ಭರವಸೆಯೊಂದಿಗೆ ಚುನಾವಣೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ತಿರುತಿರೈಪೂಂಡಿ 1971ರಿಂದಲೂ ಸಿಪಿಐ ಭದ್ರಕೋಟೆಯಾಗಿದ್ದು, 2016ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಿ. ಅದಾಲರಸನ್ ಇಲ್ಲಿ ಸ್ಥಾನ ಗೆದ್ದಿದ್ದರು. ಸಿಪಿಐ ಈಗ ಡಿಎಂಕೆ ಜೊತೆ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ. ಎಐಎಡಿಎಂಕೆಯ ಸಿ ಸುರೇಶ್ ಕುಮಾರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಮುಂದೆ ಓದಿ...

ತಿರುತಿರೈಪೂಂಡಿಯಿಂದ ಮಾರಿಮುತ್ತು ಕಣದಲ್ಲಿ
234 ವಿಧಾನಸಭೆ ಕ್ಷೇತ್ರಗಳಿಗೆ ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಒಕ್ಕೂಟದ ಮೈತ್ರಿಯಲ್ಲಿ ಸಿಪಿಐ ಆರು ಸ್ಥಾನಗಳಿಂದ ಸ್ಪರ್ಧಿಸುತ್ತಿದೆ. ತಿರುವಾರೂರು ಜಿಲ್ಲೆಯ ಕಾಯ್ದಿರಿಸಿದ ತಿರುತಿರೈಪೂಂಡಿಯಿಂದ ಮಾರಿಮುತ್ತು ಅವರನ್ನು ಕಣಕ್ಕಿಳಿಸಲಾಗಿದೆ.

ಮಾರಿಮುತ್ತು ಆಸ್ತಿ ಮೌಲ್ಯ
ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮದೇ ಜೊತೆಗಾರರು ಕೋಟಿ ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಘೋಷಿಸಿದ್ದಾರೆ. ಹಲವು ಪ್ರತಿಸ್ಪರ್ಧಿಗಳು ಐಷಾರಾಮಿ ಕಾರುಗಳನ್ನೂ ಹೊಂದಿದ್ದಾರೆ. ಆದರೆ ಮಾರಿಮುತ್ತು ಗುಡಿಸಲಿನಲ್ಲಿ ನೆಲೆಸಿದ್ದು, ಬಡ ಜನರ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ಮಾರಿಮುತ್ತು ಅವರ ಪತ್ನಿ 75 ಸೆಂಟ್ ಭೂಮಿ ಹೊಂದಿದ್ದು, 3000 ಸಾವಿರ ರೂ ನಗದು ಇಟ್ಟುಕೊಂಡಿದ್ದಾರೆ. ಬ್ಯಾಂಕ್ನಲ್ಲಿ 58,156 ರೂಪಾಯಿಗಳಿವೆ. ಚರಾಸ್ತಿ 79,304 ರೂ ಇದ್ದು, ಸ್ಥಿರಾಸ್ತಿ ಮೌಲ್ಯ 1.75 ಲಕ್ಷವಾಗಿದೆ. ಮಾರಿಮುತ್ತುಗೆ ಯಾವುದೇ ಸ್ಥಿರಾಸ್ತಿ ಇಲ್ಲ.

"ತನ್ನ ಪರಿಹಾರದ ಹಣವನ್ನು ಬೇರೊಬ್ಬರಿಗೆ ನೀಡಿದ್ದರು"
ನನ್ನ ಕ್ಷೇತ್ರದ ಜನರು ಬಡವರಾಗಿದ್ದಾರೆ. ಅವರಿಗೆ ಮನೆಗಳನ್ನು ನಿರ್ಮಿಸಲು ಬೇರೆ ಮಾರ್ಗಗಳಿಲ್ಲ. ಹೀಗಾಗಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳುತ್ತಾರೆ ಮಾರಿಮುತ್ತು. 1994ರಿಂದ ಇವರು ಸಕ್ರಿಯ ರಾಜಕೀಯದಲ್ಲಿದ್ದು, ಮಾರಿಮುತ್ತು ಕುಟುಂಬ ಕಡುವಾಕುಡಿ ಗ್ರಾಮದಲ್ಲಿದೆ. ಎಲ್ಪಿಜಿ ಅನಿಲ ಪಡೆಯಲೂ ಸಾಧ್ಯವಾಗದ ಕಾರಣ ಮಣ್ಣಿನ ಒಲೆಯಲ್ಲೇ ಅಡುಗೆ ಮಾಡುತ್ತಿದ್ದಾರೆ.
ಎರಡು ವರ್ಷದ ಹಿಂದೆ ಗಾಜಾ ಚಂಡಮಾರುತದಿಂದಾಗಿ ತನ್ನ ಗುಡಿಸಲನ್ನೇ ಮಾರಿಮುತ್ತು ಕಳೆದುಕೊಂಡಿದ್ದರು. ಸ್ವಯಂಸೇವಾ ಸಂಸ್ಥೆಯೊಂದು ಐವತ್ತು ಸಾವಿರ ರೂಪಾಯಿಗಳನ್ನು ನೀಡಿದ್ದು, ಪರಿಹಾರದಿಂದ ಹೊರಗುಳಿದಿದ್ದ ಹಳ್ಳಿಯ ಇನ್ನೊಬ್ಬ ವ್ಯಕ್ತಿಗೆ ಆ ಹಣವನ್ನು ಕೊಟ್ಟು ಮನೆ ದುರಸ್ತಿಗೆ ನೆರವಾಗಿದ್ದರು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.
"ಕೃಷಿ ಭೂಮಿ ರಕ್ಷಣೆ ನನ್ನ ಜವಾಬ್ದಾರಿ"
ತಾನು ಅಧಿಕಾರಕ್ಕೆ ಬಂದರೆ ಕೃಷಿ ಭೂಮಿಯನ್ನು ರಕ್ಷಿಸುತ್ತೇನೆ ಹಾಗೂ ಕ್ಷೇತ್ರದಲ್ಲಿ ಉದ್ಯೋಗ ಖಾತ್ರಿ ತರುತ್ತೇನೆ ಎಂದು ಹೈಡ್ರೋಕಾರ್ಬನ್ ಯೋಜನೆ ವಿರುದ್ಧದ ಆಂದೋಲನಗಳಲ್ಲಿ ಮುಂದಿದ್ದ ಮಾರಿಮುತ್ತು ಭರವಸೆ ನೀಡಿದ್ದಾರೆ. ತನ್ನ ಕ್ಷೇತ್ರದ ಬಡಜನರ ಉದ್ಧಾರ ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications