ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಕಾರಿನ ಮೇಲೆ ಅಪರಿಚಿತರಿಂದ ದಾಳಿ ಯತ್ನ
ಚೆನ್ನೈ,
ಮಾರ್ಚ್
15:
ತಮಿಳುನಾಡು
ವಿಧಾನಸಭಾ
ಚುನಾವಣೆ
ಹೊಸ್ತಿಲಿನಲ್ಲಿ
ನಟ
ಹಾಗೂ
ಮಕ್ಕಳ
ನೀಧಿಮಯ್ಯಂ
ಪಕ್ಷದ
ಮುಖ್ಯಸ್ಥ
ಕಮಲ್
ಹಾಸನ್
ಅವರ
ಕಾರಿನ
ಮೇಲೆ
ಅಪರಿಚಿತರು
ದಾಳಿ
ನಡೆಸಿದ
ಘಟನೆ
ಭಾನುವಾರ
ರಾತ್ರಿ
11.14ರ
ವೇಳೆಗೆ
ನಡೆದಿದೆ.
ತಮಿಳುನಾಡಿನ
ಕಾಂಚಿಪುರಂ
ಜಿಲ್ಲೆಯ
ಗಾಂಧಿ
ರಸ್ತೆಯಲ್ಲಿ
ಕಮಲ್
ಹಾಸನ್
ಅವರು
ಪ್ರಯಾಣಿಸುತ್ತಿದ್ದ
ಕಾರಿಗೆ
ಅಡ್ಡಗಟ್ಟಿದ
ಅಪರಿಚಿತರು
ಕಾರಿನ
ಗ್ಲಾಸ್
ಒಡೆಯಲು
ಪ್ರಯತ್ನಿಸಿದ್ದಾರೆ.
ಆದರೆ
ಕಾರಿಗೆ
ಯಾವುದೇ
ರೀತಿ
ಧಕ್ಕೆ
ಆಗಿಲ್ಲ.
ಈ
ಸಂಬಂಧ
ಇನ್ನೂ
ಎಫ್ಐಆರ್
ದಾಖಲಾಗಿಲ್ಲ
ಎಂದು
ಹಿರಿಯ
ಪೊಲೀಸ್
ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ತಮಿಳುನಾಡು
ಚುನಾವಣೆ;
ತಮ್ಮ
ಸ್ಪರ್ಧಾ
ಕಣ
ಘೋಷಿಸಿದ
ಕಮಲ
ಹಾಸನ್
ಭಾನುವಾರವಷ್ಟೇ
ಕಮಲ್
ಹಾಸನ್
ಅವರು
ಕಾಂಚಿಪುರಂ
ವಿಧಾನಸಭಾ
ಕ್ಷೇತ್ರದ
ಮಕ್ಕಳ
ನೀಧಿಮಯ್ಯಂ
ಪಕ್ಷದ
ಅಭ್ಯರ್ಥಿ
ಎಸ್
ಕೆಪಿ
ಗೋಪಿನಾಥ್
ಪರವಾಗಿ
ಪ್ರಚಾರ
ನಡೆಸಿದ್ದರು.
ಸಾರ್ವಜನಿಕ
ಸಭೆಯನ್ನು
ಉದ್ದೇಶಿಸಿ
ಮಾತನಾಡಿ
ವಾಪಸ್ಸಾಗುತ್ತಿದ್ದ
ಸಂದರ್ಭದಲ್ಲಿ
ಈ
ಘಟನೆ
ನಡೆದಿದೆ
ಎಂದು
ತಿಳಿದು
ಬಂದಿದೆ.
ಈ
ಘಟನೆಗೆ
ಸಂಬಂಧಿಸಿದಂತೆ
ವಿಷ್ಣುಕಾಂಚಿ
ಠಾಣೆಯಲ್ಲಿ
ಪ್ರಕರಣ
ದಾಖಲಿಸಲಾಗಿದೆ.
ಕುತಂತ್ರ
ರಾಜಕಾರಣಕ್ಕೆ
ಬೆದರುವುದಿಲ್ಲ:
ತಮಿಳುನಾಡಿನ
ಕಾಂಚಿಪುರಂ
ಬಳಿ
ನಮ್ಮ
ನಾಯಕ
ಕಮಲ್
ಹಾಸನ್
ಕಾರನ್ನು
ಅಡ್ಡಗಟ್ಟಿ
ಗ್ಲಾಸ್
ಒಡೆಯುವುದಕ್ಕೆ
ಪ್ರಯತ್ನಿಸಿದ
ಆರೋಪಿಯನ್ನು
ಹಿಡಿದು
ಪೊಲೀಸರಿಗೆ
ಒಪ್ಪಿಸಲಾಗಿದೆ
ಎಂದು
ಮಕ್ಕಳ
ನೀಧಿಮಯ್ಯಂ
ಪಕ್ಷದ
ಕಾರ್ಯದರ್ಶಿ
ಎ
ಜಿ
ಮೌರ್ಯ
ಟ್ವಿಟರ್
ನಲ್ಲಿ
ಬರೆದುಕೊಂಡಿದ್ದಾರೆ.
ಅಲ್ಲದೇ,
ಇಂಥ
ಕುತಂತ್ರ
ರಾಜಕಾರಣಕ್ಕೆ
ನಾವು
ಬೆದರುವುದಿಲ್ಲ.
ಸೋಮವಾರ
ಕೋಯಂತ್ತೂರಿನಲ್ಲಿ
ಕಮಲ್
ಹಾಸನ್
ಅವರು
ಪ್ರಚಾರ
ನಡೆಸಲಿದ್ದಾರೆ
ಎಂದು
ಮೌರ್ಯ
ಟ್ವೀಟ್
ಮಾಡಿದ್ದಾರೆ.
காஞ்சிபுரத்தில் எங்கள் தலைவரின் கார் கண்ணாடியை உடைத்து தாக்க முயன்றவர் காவல்துறையிடம் ஒப்படைக்கப்பட்டுள்ளார்.
— A.G. Mourya IPS (Rtd) 🔦 (@MouryaMNM) March 14, 2021
நேர்மையின் பயணத்தை குள்ளநரித்தனத்தால் எதிர்கொள்பவர்களைக் கண்டு அஞ்சமாட்டோம்.
தலைவரின் இடிமுழக்கம் நாளை கோவையில்.
விரைவில் கோட்டையில்.#KamalHaasan @maiamofficial pic.twitter.com/XJfYlCcZ6A
ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಏಪ್ರಿಲ್.06ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ.02ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.