ಪನ್ನೀರ್ ಗೆ ಬಹುತೇಕ ಶಾಸಕರ ಬೆಂಬಲ, ಶಶಿಗೆ ಮುಖಭಂಗ!
ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ತಡ ಮಾಡುತ್ತಿರುವುದರಿಂದ ಶಶಿಕಲಾ ಅವರು ರಾಜಭವನದ ಮುಂದೆ ಧರಣಿ ಕೂಡಲು ನಿರ್ಧರಿಸಿರುವುದರಿಂದ ಮತ್ತು ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆಗಳು ಇರುವುದರಿಂದ ಭಾರೀ ಬಂದೋಬಸ್ತ್ ಮಾಡಲಾಗಿದೆ.
ಚೆನ್ನೈ, ಫೆಬ್ರವರಿ 11 : ಶಶಿಕಲಾ ನಟರಾಜನ್ ಮತ್ತು ಓ ಪನ್ನೀರ್ ಸೆಲ್ವಂ ಬಣಗಳ ನಡುವೆ ಭಾರೀ ಚಟುವಟಿಕೆಗಳು ನಡೆದಿದ್ದು, ಪನ್ನೀರ್ ಸೆಲ್ವಂ ಅವರಿಗೆ 65 ಶಾಸಕರು ಮತ್ತು ಹೆಚ್ಚಿನ ಸಂಸದರ ಬೆಂಬಲ ದೊರೆತಿದ್ದು, ಪನ್ನೀರ್ ಕೈ ಮೇಲಾಗಿದೆ.
ಎಐಎಡಿಎಂಕೆಯ ಎಲ್ಲ ಶಾಸಕರನ್ನು ಗೋಲ್ಡನ್ ಬೇ ರೆಸಾರ್ಟಿನಲ್ಲಿ ಕೂಡಿಟ್ಟಿದ್ದ ಶಶಿಕಲಾ ನಟರಾಜನ್ ಅವರಿಗೆ ಭಾರೀ ಹೊಡೆತ ಬಿದ್ದಿದೆ. ಶಶಿಕಲಾ ಅವರ ಆಟಗಳು ಒಂದೊಂದಾಗಿ ಬಯಲಾಗುತ್ತಿರುವುದರಿಂದ ಸಹಜವಾಗಿ, ತಮ್ಮ ಭವಿಷ್ಯದ ದೃಷ್ಟಿಯಿಂದ ಶಾಸಕರು ಪನ್ನೀರ್ ಪರ ವಾಲುತ್ತಿದ್ದಾರೆ.[ಶಶಿಕಲಾ ಕ್ಯಾಂಪ್ ನಿಂದ ಮತ್ತೊಂದು ವಿಕೆಟ್ ಡೌನ್]
ಶಶಿಕಲಾ ನಟರಾಜನ್ ಅವರನ್ನೇ ಪಕ್ಷದಿಂದ ಕಿತ್ತುಹಾಕಿರುವುದರಿಂದ ಎಐಎಡಿಎಂಕೆ ಶಾಸಕಾಂಗ ಪಕ್ಷಕ್ಕೆ ನೂತನ ನಾಯಕನನ್ನು ಆಯುವ ನಿಚ್ಚಳ ಸಾಧ್ಯತೆಗಳು ಕಾಣಿಸುತ್ತವೆ. ಕೆಎಸ್ ಸೆಂಗೊಟೈಯನ್ ಮತ್ತು ಎಡಪಾಡಿ ಪಳನಿಸಾಮಿಯ ಹೆಸರುಗಳು ಕೇಳಿಬರುತ್ತಿವೆ. [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]

ಈ ನಡುವೆ, ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ತಡ ಮಾಡುತ್ತಿರುವುದರಿಂದ ಶಶಿಕಲಾ ಅವರು ರಾಜಭವನದ ಮುಂದೆ ಧರಣಿ ಕೂಡಲು ನಿರ್ಧರಿಸಿರುವುದರಿಂದ ಮತ್ತು ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆಗಳು ಇರುವುದರಿಂದ ಭಾರೀ ಬಂದೋಬಸ್ತ್ ಮಾಡಲಾಗಿದೆ.[ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಎಐಎಡಿಎಂಕೆ ಶಾಸಕರಿಗೆ ಪೊಲೀಸರ ಕ್ವೆಶ್ಚನ್ ಅವರ್]
ಪೋಯೆಸ್ ಗಾರ್ಡನ್ ನಲ್ಲಿ ಈ ಮೊದಲು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿದ್ದ ಶಶಿಕಲಾ, ನಮ್ಮ ಸಹನೆಗೂ ಒಂದು ಮಿತಿಯಿದೆ. ರಾಜ್ಯಪಾಲರು ಕೂಡಲೆ ನಿರ್ಧಾರ ಪ್ರಕಟಿಸದಿದ್ದರೆ ಏನು ಮಾಡಬೇಕೋ ಅದನ್ನು ಮಾಡಲೇಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ.
ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಸಿ ಪೊನ್ನಿಯಣ್ಣನ್ ಶಶಿಕಲಾ ಬಣದಿಂದ ಜಿಗಿದು ಪನ್ನೀರ್ ಸೆಲ್ವಂ ಕೂಟವನ್ನು ಸೇರಿಕೊಂಡಿರುವುದರಿಂದ ಶಶಿಕಲಾಗೆ ಭಾರೀ ಹಿನ್ನಡೆಯಾದಂತಾಗಿದೆ. ಜೊತೆಗೆ ಸಂಸದರಾದ ಪಿಆರ್ ಸುಂದರಂ, ಕೆ ಅಶೋಕ್ ಕುಮಾರ್ ಅವರು ಕೂಡ ಪನ್ನೀರ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಂಬಿದುರೈ ಅವರನ್ನು ಹೊರತುಪಡಿಸಿ ಎಲ್ಲ ಸಂಸದರು ಪನ್ನೀರ್ ಸೆಲ್ವಂ ಅವರಿಗೇ ಬೆಂಬಲ ಸೂಚಿಸಲಿದ್ದಾರೆ ಎಂದು ಸುಂದರಂ ಮತ್ತು ಅಶೋಕ್ ಕುಮಾರ್ ಹೇಳಿರುವುದು ಪನ್ನೀರ್ ಅವರಿಗೆ ಆನೆ ಬಲ ಬಂದಂತಾಗಿದೆ. [ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications