ಹಠಾತ್ ತಿರುವು: ಚಿನ್ನಮ್ಮ ವಿರುದ್ಧ ತಿರುಗಿಬಿದ್ದ 35 ಶಾಸಕರು!
ಏತನ್ಮಧ್ಯೆ, ಎಐಡಿಎಂಕೆಯ ಕಟ್ಟಾ ವಿರೋಧಿ ಪಕ್ಷವಾದ ಡಿಎಂಕೆ ಪಕ್ಷವು ಪನ್ನೀರ್ ಸೆಲ್ವಂ ಅವರು ಸದನದಲ್ಲಿ ತಮ್ಮ ಬಹುಮತ ಸಾಬೀತುಪಡಿಸುವ ಸಂದರ್ಭ ಬಂದೊದಗಿದರೆ, ತಮ್ಮ ಪಕ್ಷವು ಪನ್ನೀರ್ ಅವರನ್ನೇ ಬೆಂಬಲಿಸುತ್ತದೆ ಎಂದು ತಿಳಿಸಿದೆ.
ಚೆನ್ನೈ, ಫೆಬ್ರವರಿ 9: ಗುರುವಾರ ಸಂಜೆಯಷ್ಟೇ, ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಬೆಂಬಲಕ್ಕೆ ನಿಂತಿರುವ 130 ಶಾಸಕರು ಸಹಿಯುಳ್ಳ ಪತ್ರವನ್ನು ಅವರಿಗೆ ನೀಡಿ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಕೋರಿದ್ದ ಎಐಡಿಎಂಕೆ ಮಹಾ ಕಾರ್ಯದರ್ಶಿ ಶಶಿಕಲಾ ಅವರ ಅದೃಷ್ಟ ಒಂದು ಗಂಟೆ ಕಳೆಯುವಷ್ಟರಲ್ಲೇ ತಿರುಗುಮುರುಗಾಗಿದೆ.[ಕೇಂದ್ರಕ್ಕೆ ವರದಿ ಸಲ್ಲಿಸಿದ ತಮಿಳುನಾಡು ಗವರ್ನರ್]
ಕುದುರೆ ವ್ಯಾಪರಕ್ಕೊಳಗಾಗಬಾರದೆಂದು ಮುನ್ನಚ್ಚರಿಕೆ ಕ್ರಮವಾಗಿ ಸುಮಾರು 120ಕ್ಕೂ ಹೆಚ್ಚು ಶಾಸಕರನ್ನು ರೆಸಾರ್ಟ್ ಒಂದರಲ್ಲಿ ಕೂಡಿಟ್ಟಿದ್ದ ಶಶಿಕಲಾ, ಆ ಶಾಸಕರಲ್ಲಿ ಸುಮಾರು 35 ಮಂದಿ ತಿರುಗಿಬಿದ್ದಿದ್ದಾರೆ. ತಮ್ಮನ್ನು ಬಲವಂತವಾಗಿ ಕರೆಯಿಸಿ ಇಲ್ಲಿ ಕೂಡಿಟ್ಟಿರುವುದಾಗಿ ತಿರುಗಿಬಿದ್ದಿರುವ ಆ ಮೂವತ್ತೈದು ಶಾಸಕರು, ಪನ್ನೀರ್ ಸೆಲ್ವಂ ಬಣಕ್ಕೇ ತಮ್ಮ ಬೆಂಬಲವೆಂದು ಘೋಷಿಸಿದ್ದಾರೆ.[ರಾಜ್ಯಪಾಲರ ಮುಂದೆ ಸರ್ಕಾರ ರಚಿಸುವ ಪ್ರಸ್ತಾವನೆಯಿಟ್ಟ ಶಶಿಕಲಾ]
ಇದರಿಂದ, ಶಶಿಕಲಾ ಅವರ ಸರ್ಕಾರ ರಚಿಸುವ ಪ್ರಸ್ತಾವನೆಗೆ ಹಾಗೂ ಆ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೇರುವ ಆಸೆಗೆ ಭಂಗ ಬಂದಂತಾಗಿದೆ. ಹೀಗೆ, ಗಂಟೆಗೊಂಡು ಹೊಸ ತಿರುವು ಕಾಣುತ್ತಿರುವ ತಮಿಳುನಾಡಿನ ರಾಜಕೀಯ ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.[ರಾಜ್ಯಪಾಲರ ಭೇಟಿ ನಂತರ ಧರ್ಮಕ್ಕೆ ಗೆಲುವೆಂದ ಪನ್ನೀರ್ ಸೆಲ್ವಂ]
ಏತನ್ಮಧ್ಯೆ, ಎಐಡಿಎಂಕೆಯ ಕಟ್ಟಾ ವಿರೋಧಿ ಪಕ್ಷವಾದ ಡಿಎಂಕೆ ಪಕ್ಷವು ಪನ್ನೀರ್ ಸೆಲ್ವಂ ಅವರು ಸದನದಲ್ಲಿ ತಮ್ಮ ಬಹುಮತ ಸಾಬೀತುಪಡಿಸುವ ಸಂದರ್ಭ ಬಂದೊದಗಿದರೆ, ತಮ್ಮ ಪಕ್ಷವು ಪನ್ನೀರ್ ಅವರನ್ನೇ ಬೆಂಬಲಿಸುತ್ತದೆ ಎಂದು ತಿಳಿಸಿದೆ.