ಪುದುಚೇರಿಯಲ್ಲಿ #RahulInsultsDalit ಟ್ರೆಂಡಿಂಗ್

ಚೆನ್ನೈ, ಡಿ. 09: ನ್ಯಾಷನಲ್ ಹೆರಾಲ್ಡ್ ನಿಂದ ಉಂಟಾಗಿರುವ ತೊಂದರೆಯ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಚೆನ್ನೈಯಲ್ಲಿ ಪ್ರವಾಹ ಪರಿಸ್ಥಿತಿ ಕಾಣಲು ಹೋಗಿದ್ದ ರಾಹುಲ್ ಅವರು ದಲಿತ ನಾಯಕರ ಕೈಯಲ್ಲಿ ಚಪ್ಪಲಿ ನೀಡಿ ಭಾರಿ ಪ್ರಮಾದ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿ ತಮಿಳುನಾಡಿನ ಕಾಂಗ್ರೆಸ್ಸಿಗರು ಅತಿಯಾದ ಸ್ವಾಮಿಭಕ್ತಿ ತೋರಿಸಿದರು. ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವರೊಬ್ಬರು ಚಪ್ಪಲಿಯನ್ನು ನೀಡಿ ಭಕ್ತಿ ಪ್ರದರ್ಶಿಸಿದ ಘಟನೆ ನಡೆದಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗುಲ್ಲೆದ್ದಿದೆ.

Former Union Minister Holds Slippers for Rahul Gandhi in Flooded Puducherry

ಪುದುಚೇರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ತಾವು ಹಾಕಿಕೊಂಡಿದ್ದ ಶೂವನ್ನು ಬಿಚ್ಚಿಟ್ಟು ಬರಿಗಾಲಿನಲ್ಲಿ ನಡೆಯಲು ಮುಂದಾಗಿದ್ದಾರೆ.

ರಾಹುಲ್ ಅವರು ಬರಿಗಾಲಿನಲ್ಲಿ ನಡೆಯಲು ಮುಂದಾಗಿದ್ದು ಕಂಡ ಮಾಜಿ ಕೇಂದ್ರ ಸಚಿವರ ವಿ. ನಾರಾಯಣ ಸ್ವಾಮಿ ಅವರು ರಾಹುಲ್ ಗೆ ತಾವು ತೊಟ್ಟಿದ್ದ ಚಪ್ಪಲಿಯನ್ನು ಬಿಟ್ಟು ರಾಹುಲ್ ಕಾಲಿಗೆ ತೊಡಿಸಲು ಹೋಗಿದ್ದಾರೆ.


ನಾರಾಯಣ ಸ್ವಾಮಿ ಅವರ ಸ್ವಾಮಿಭಕ್ತಿ ವಿಡಿಯೋ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ವೀಡಿಯೋದಲ್ಲಿ ಇರುವುದಷ್ಟೇ ಸತ್ಯವಲ್ಲ. ರಾಹುಲ್ ಅವರು ಶೂ ವನ್ನು ತಮ್ಮ ಕೈಯಲ್ಲೇ ಹಿಡಿದು ಓಡಾಡಿದರು. ಭದ್ರತಾ ಸಿಬ್ಬಂದಿಗಳ ಕೈಗೂ ನೀಡುತ್ತಿರಲಿಲ್ಲ.

ನಾನು ಸೌಜನ್ಯಕ್ಕಾಗಿ ಅವರಿಗೆ ನನ್ನ ಚಪ್ಪಲಿಯನ್ನು ನೀಡಿದೆ ಅದರಲ್ಲಿ ತಪ್ಪೇನಿಲ್ಲ ಎಂದು ನಾರಾಯಣ ಸ್ವಾಮಿ ಸಮರ್ಧಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+