ಆರ್ ಕೆ ನಗರ ಉಪಚುನಾವಣೆ: ಇ.ಮದುಸೂಧನ್ ನಾಮಪತ್ರ ಸಲ್ಲಿಕೆ
ಚೆನ್ನೈ, ಮಾರ್ಚ್. 23 : ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಓ. ಪನ್ನೀರ್ ಸೆಲ್ವಂ ಬಣದ ಇ. ಮದುಸೂಧನ್ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.
ಇನ್ನೊಂದೆಡೆ ಶಶಿಕಲಾ ಬಣದಿಂದ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನು ಕಣಕ್ಕಿಸಲಾಗಿದೆ. ಶಶಿಕಲಾ ಮತ್ತು ಓ ಪನ್ನೀರ್ ಸೆಲ್ವಂ ಅವರ ಪ್ರತಿಷ್ಠೆಯಾಗಿರುವ ಈ ಉಪಚುನವಾಣೆ ಭಾರೀ ಪೈಪೋಟಿಯಿಂದ ಕೂಡಿದೆ.[ಪನ್ನೀರ್ ಸೆಲ್ವಂ ಬಣಕ್ಕೆ ವಿದ್ಯುತ್ ಕಂಬ, ಶಶಿಕಲಾ ಬಣಕ್ಕೆ ಆಟೋ ರಿಕ್ಷಾ ಚಿಹ್ನೆ]
ಆರ್ ಕೆ ನಗರದ ಉಪಚುನಾವಣೆಗೆ ಶಶಿಕಲಾ ಬಣಕ್ಕೆ ಆಟೋ ರಿಕ್ಷಾ ಮತ್ತು ಸೆಲ್ವಂ ಬಣಕ್ಕೆ ವಿದ್ಯುತ್ ಕಂಬ ಚಿಹ್ನೆಗಳನ್ನು ಚುನಾವಣೆ ಆಯೋಗ ನೀಡಿದೆ. ಇಂದು(ಮಾ.22) ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು ಹಿಂಪಡೆಯಲು ಮಾರ್ಚ್ 27 ಕೊನೆಯ ದಿನವಾಗಿದೆ.[ಆರ್ ಕೆ ನಗರ ಕ್ಷೇತ್ರ ಚುನಾವಣೆ, ರಜನಿ ಬೆಂಬಲ ಯಾರಿಗೆ?]
ಏಪ್ರಿಲ್ 12ರಂದು ಆರ್ ನಗರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು ಏಪ್ರಿಲ್ 15ರಂದು ಫಲಿತಾಂಶ ಪ್ರಕಟವಾಗಲಿದೆ.