ಕುರುಹುಗಳಿಲ್ಲದೆಯೇ ಎಟಿಎಂ ದರೋಡೆ: ಬ್ಯಾಂಕ್ ಅಧಿಕಾರಿಗಳಿಗೆ ತಲೆಬಿಸಿ
ಚೆನ್ನೈ, ಜೂ.22: ಚೆನ್ನೈನ ವೇಲಾಚೇರಿ, ತಾರಮಣಿ, ವಲಸರವಕ್ಕಂ ಮತ್ತು ರಾಮಪುರಂನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗಳಲ್ಲಿ ದರೋಡೆ ಮಾಡಲಾಗಿದೆ ಎಂದು ಗ್ರೇಟರ್ ಚೆನ್ನೈ ಪೊಲೀಸರಿಗೆ ಅನೇಕ ದೂರುಗಳು ಬಂದಿದೆ. ಆದರೆ ಎಟಿಎಂಗಳು ಯಾವುದೇ ರೀತಿಯ ಹಾನಿಗೊಳಗಾದ ಲಕ್ಷಣಗಳು ಕಂಡು ಬಂದಿಲ್ಲ. ಯಾವುದೇ ದರೋಡೆಯ ಕುರುಹುಗಳು ಇಲ್ಲ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಗೊಂದಲಕ್ಕೊಳಗಾಗಿದ್ದಾರೆ.
ಬ್ಯಾಂಕ್ ಅಧಿಕಾರಿಗಳು, ವಾಡಿಕೆಯಂತೆ, ಎಟಿಎಂಗಳಲ್ಲಿ ಠೇವಣಿ ಇರಿಸಿದ ಹಣ ಮತ್ತು ಹಿಂಪಡೆದ ಹಣವು ಹೊಂದಿಕೆಯಾಗುವುದಿಲ್ಲ ಎಂಬುವುದು ಗಮನಕ್ಕೆ ಬಂದ ಬಳಿಕ ಈ ದರೋಡೆ ಪ್ರಕರಣವು ಬೆಳಕಿಗೆ ಬಂದಿದೆ. ಎಟಿಎಂಗಳಲ್ಲಿ ಠೇವಣಿ ಇರಿಸಿದ ಹಣ ಮತ್ತು ಹಿಂಪಡೆದ ಹಣದ ನಡುವೆ ಲಕ್ಷಾಂತರ ರು. ವ್ಯತ್ಯಾಸ ಕಂಡು ಬಂದ ಸಂದರ್ಭ ಹಿನ್ನೆಲೆ ಈ ಬಗ್ಗೆ ಹೆಚ್ಚಿನ ಗಮನ ವಹಿಸಲಾಗಿದೆ.
ಪೊಲೀಸರಿಗೆ ಈ ಬಗ್ಗೆ ಯಾವುದೇ ಕುರುಹುಗಳು ಹೇಗೆ ದೊರೆತಿಲ್ಲ ಎಂಬುದನ್ನು ತಿಳಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಎಲ್ಲಾ ಎಸ್ಬಿಐ ನಗದು ಠೇವಣಿ ಯಂತ್ರಗಳ ನಡುವಿನ ಸಾಮಾನ್ಯ ಅಂಶ ಒಂದಿದೆ, ಅದೇ ಜಪಾನಿನ ಸಂಸ್ಥೆಯೊಂದು ಇದನ್ನು ತಯಾರಿಸಿದೆ ಎಂಬುವುದು ಈ ತನಿಖೆಯಿಂದ ಕಂಡು ಬಂದಿದೆ.

ಪೊಲೀಸರ ಆರಂಭಿಕ ತನಿಖೆಯು ದರೋಡೆಕೋರರು ನಗದು ಠೇವಣಿ ಯಂತ್ರದಲ್ಲಿನ ದೋಷವನ್ನು ಗುರುತಿಸಿದ್ದಾರೆ ಎಂದು ಸೂಚಿಸುತ್ತದೆ. ಒಮ್ಮೆ ನೀವು ನಿಮ್ಮ ಪಿನ್ ಅನ್ನು ನಮೂದಿಸಿದ ಬಳಿಕ ಹಣ ಬಂದಾಗ ಗ್ರಾಹಕರು ನಿರ್ದಿಷ್ಟ ಸಮಯದದೊಳಗೆ ಅಂದರೆ 20 ಸೆಕೆಂಡುಗಳಲ್ಲಿ ಹಣವನ್ನು ತೆಗೆದುಕೊಳ್ಳಬೇಕು ಇಲ್ಲವಾದರೆ ಹಣವು ಪುನಃ ಯಂತ್ರದೊಳಗೆ ಹೋಗುತ್ತದೆ.
ಹಣ ಬಂದಾಗ ಕೈಯಲ್ಲಿ ಹಿಡಿದು ಹಣವನ್ನು ಹಿಂತೆಗೆದುಕೊಳ್ಳುವಾಗ ಸೆನ್ಸಾರ್ ಅನ್ನು ನಿಲ್ಲಿಸಲು ದರೋಡೆಕೋರರು ತಂತ್ರವನ್ನು ಬಳಸಿದ್ದಾರೆಂದು ಆರೋಪಿಸಲಾಗಿದೆ. ಹಣವನ್ನು ಯಂತ್ರದಲ್ಲೇ ಹಿಡಿದುಕೊಳ್ಳುವುದರಿಂದ 20 ಸೆಕೆಂಡುಗಳ ಬಳಿಕ ಹಣವು ವಾಪಾಸ್ ಹೋಗುತ್ತದೆ. ಆ ಸಂದರ್ಭದಲ್ಲೇ ಈ ಆರೋಪಿಗಳು ಹಣವನ್ನು ಪಡೆದಿದ್ದಾರೆ. ಆದರೆ ಯಂತ್ರದಲ್ಲಿ ಹಣವನ್ನು ತೆಗೆದ ಬಗ್ಗೆ ಯಾವುದೇ ಮಾಹಿತಿ ಇರದಂತೆ ತಂತ್ರ ಬಳಸಿದ್ದಾರೆ ಎಂದು ದೂರಲಾಗಿದೆ.
ಪೊಲೀಸರು ಹಲವಾರು ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆಹಚ್ಚಿದ್ದಾರೆ. ಇಬ್ಬರು ಯಂತ್ರಗಳ ಸುತ್ತಲೂ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗುರುತಿಸಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಿಲ್ಲ.
ಏತನ್ಮಧ್ಯೆ, ಜಪಾನಿನ ಸಂಸ್ಥೆಯು ತಯಾರಿಸಿದ ಎಟಿಎಂ ಠೇವಣಿ ಯಂತ್ರಗಳನ್ನು ಹೊಂದಿರುವ ಬ್ಯಾಂಕುಗಳು ಈ ದೋಷದ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ದರೋಡೆಕೋರರಿಗೆ ಈ ದೋಷದ ಬಗ್ಗೆ ಹೇಗೆ ತಿಳಿದಿದೆ ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications