ಕಾರ್ತಿ, ಚಿದಂಬರಂ ವಿರುದ್ಧ ಇರೋ ಆರೋಪಗಳೇನು?
ಕಾರ್ತಿ ಚಿದಂಬರಂಗೆ ಸೇರಿದ ಐಎನ್ಎಕ್ಸ್ ಮೀಡಿಯಾ ವಿರುದ್ಧ ಈಗಾಗಲೇ ಅವ್ಯವಹಾರದ ಆರೋಪಗಳು ಕೇಳಿಬಂದಿದ್ದವು. ವಿದೇಶಿ ಬಂಡವಾಳ ನಿಯಮಗಳಿಗೆ ವಿರುದ್ಧವಾಗಿ ಐಎನ್ಎಕ್ಸ್ ನಲ್ಲಿ ಹೂಡಿಕೆಗಳಾಗಿವೆ ಎಂಬುದೇ ಪ್ರಮುಖ ಆರೋಪ.
ನವದೆಹಲಿ, ಮೇ 16: ಮಂಗಳವಾರ ಬೆಳಗ್ಗೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಪಟ್ಟ ನಿವಾಸ ಹಾಗೂ ಕಚೇರಿಗಳು ಸೇರಿದಂತೆ ಸುಮಾರು 16 ಕಡೆ ಸಿಬಿಐ ರೈಡ್ ಆಗಿದೆ.
ಕಾರ್ತಿ ಚಿದಂಬರಂಗೆ ಸೇರಿದ ಐಎನ್ಎಕ್ಸ್ ಮೀಡಿಯಾ ವಿರುದ್ಧ ಈಗಾಗಲೇ ಅವ್ಯವಹಾರದ ಆರೋಪಗಳು ಕೇಳಿಬಂದಿದ್ದವು. ವಿದೇಶಿ ಬಂಡವಾಳ ನಿಯಮಗಳಿಗೆ ವಿರುದ್ಧವಾಗಿ ಐಎನ್ಎಕ್ಸ್ ನಲ್ಲಿ ಹೂಡಿಕೆಗಳಾಗಿವೆ ಎಂಬುದು ಆ ಆರೋಪದ ಮುಖ್ಯ ತಿರುಳು.[ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರನ ನಿವಾಸಗಳ ಮೇಲೆ ಸಿಬಿಐ ದಾಳಿ]

ಇದಲ್ಲದೆ, ಹಲವಾರು ಲೋಪಗಳ ಮಧ್ಯೆಯೂ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯ ನಿರಾಕ್ಷೇಪಣಾ ಪತ್ರವು ಐಎನ್ಎಕ್ಸ್ ಗೆ ಸಿಕ್ಕಿದ್ದು ಪ್ರಶ್ನಾರ್ಹವಾಗಿತ್ತು. ಹಾಗಾಗಿ, ಈ ಪ್ರಕರಣ ಸಿಬಿಐ ಮೆಟ್ಟಿಲೇರಿ, ಸಿಬಿಐ ಆ ಬಗ್ಗೆ ಎಫ್ ಐಆರ್ ಅನ್ನೂ ದಾಖಲಿಸಿತ್ತು.
ಅಲ್ಲದೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ (ಇಡಿ) ಕೂಡ ಐಎನ್ಎಕ್ಸ್ ವಿರುದ್ಧ ತನಿಖೆ ಕೈಗೆತ್ತಿಕೊಂಡಿದೆ.
ಇದೊಂದೇ ಅಲ್ಲ, ಕಾರ್ತಿ ಚಿದಂಬರಂ ಅವರಿಗೆ ಸಂಬಂಧಪಟ್ಟ ಕೆಲ ಕಂಪನಿಗಳಲ್ಲಿ ಇಂಥ ಅವ್ಯವಹಾರಗಳು ಆಗಿರುವುದು ಸರ್ವೇ ಸಾಮಾನ್ಯವಾಗಿರುವುದನ್ನು ಸಿಬಿಐ ತನ್ನ ತನಿಖೆಯ ವೇಳೆ ಗಮನಿಸಿದೆ.
ಇದರ ಜಾಡು ಹಿಡಿದು ಹೋಗಿದ್ದ ಸಿಬಿಐಗೆ ಕಾರ್ತಿಗೆ ಸೇರಿದ್ದ ಕಂಪನಿಯೊಂದರಲ್ಲಿ ಸುಮಾರು 45 ಕೋಟಿ ರು. ಅವ್ಯವಹಾರವಾಗಿರುವುದು ತಿಳಿದುಬಂದಿತ್ತು. ಹಾಗಾಗಿ, ಆ ಕಂಪನಿಯ ನಿರ್ದೇಶಕರುಗಳ ಮಂಡಳಿಗೆ ಹಾಗೂ ಕಾರ್ತಿ ಚಿದಂಬರಂ ಅವರಿಗೆ ಸಿಬಿಐ ಕಳೆದ ತಿಂಗಳು ನೋಟಿಸ್ ಜಾರಿಗೊಳಿಸಿತ್ತು.
ಈ ಎಲ್ಲಾ ಕಂಪನಿಗಳ ಅವ್ಯವಹಾರಗಳ ನೇರ ಲಾಭ ಕಾರ್ತಿ ಚಿದಂಬರಂ ಅವರಿಗೆ ಆಗಿದೆ ಎಂದು ಸಿಬಿಐ ಹೇಳುತ್ತಿದೆ. ಹೀಗಾಗಿ, ಕಾರ್ತಿ ಬೆನ್ನು ಬಿದ್ದಿರುವ ಸಿಬಿಐ, ಅವರಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳ ಬಗ್ಗೆ ತನಿಖೆ ಆರಂಭಿಸಿತ್ತು. ಅದರಲ್ಲೊಂದು ಏರ್ ಸೆಲ್ - ಮ್ಯಾಕ್ಸಿಕ್ ಅವ್ಯವಹಾರವೂ ಒಂದು.
ಕಳೆದ ವರ್ಷ ಆಗಸ್ಟ್ ನಲ್ಲೂ ಕಾರ್ತಿಗೆ ಸಂಬಂಧಪಟ್ಟ ಕಂಪನಿಗಳ ಮೇಲೆ ಕೇಂದ್ರ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಆಗ, ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಂಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಇತರ ಕಂಪನಿಗಳ ಮೇಲೂ ದಾಳಿ ನಡೆದಿತ್ತು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications