ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಟಿವಿ ದಿನಕರನ್ ಬೆಂಬಲಿತ ಕರ್ನಾಟಕ ಎಐಎಡಿಎಂಕೆ ಮುಖ್ಯಸ್ಥನ ಉಚ್ಛಾಟನೆ

By Sachhidananda Acharya
|
Google Oneindia Kannada News

ಚೆನ್ನೈ, ಡಿಸೆಂಬರ್ 25: ಆರ್.ಕೆ ನಗರ ಉಪಚುನಾವಣೆಯಲ್ಲಿ ಶಶಿಕಲಾ ನಟರಾಜನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಜಯ ಸಾಧಿಸುತ್ತಿದ್ದಂತೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಕ್ರುದ್ಧರಾಗಿದ್ದಾರೆ.

ದಿನಕರನ್ ಬೆಂಬಲಿತ 9 ಎಐಎಡಿಎಂಕೆಯ ಪ್ರತಿನಿಧಿಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಆರ್.ಕೆ ನಗರ ಉಪಚುನಾವಣೆ, ಟಿಟಿವಿ ದಿನಕರನ್ ಗೆ ಭರ್ಜರಿ ಜಯಆರ್.ಕೆ ನಗರ ಉಪಚುನಾವಣೆ, ಟಿಟಿವಿ ದಿನಕರನ್ ಗೆ ಭರ್ಜರಿ ಜಯ

ಇಂದು ಚೆನ್ನೈನಲ್ಲಿ ನಡೆದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಒ ಪನ್ನೀರ್ ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಪಾಲ್ಗೊಂಡಿದ್ದರು.

AIADMK to sack 6 office bearers supporting Dhinakaran

ಭಾನುವಾರ ಹೊರಬಿದ್ದ ಆರ್.ಕೆ ನಗರ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ 40,707 ಸಾವಿರ ಮತಗಳಿಂದ ಎಐಎಡಿಎಂಕೆ ಅಭ್ಯರ್ಥಿ ಇ ಮಧುಸೂದನ್ ರನ್ನು ಸೋಲಿಸಿದ್ದರು. ಈ ಗೆಲುವಿಗೆ ಸಹಕರಿಸಿದ್ದಾರೆ ಎಂಬ ಆರೋಪದ ಮೇಲೆ ಆರು ಪದಾಧಿಕಾರಿಗಳನ್ನು ಪಕ್ಷದಿಂದ ಕಿತ್ತು ಹಾಕಲಾಗಿದೆ.

ಮೂರು ತಿಂಗಳಲ್ಲಿ ಎಡಪ್ಪಾಡಿ ಪಳನಿಸ್ವಾಮಿ ಸರಕಾರ ಪತನ: ದಿನಕರನ್ಮೂರು ತಿಂಗಳಲ್ಲಿ ಎಡಪ್ಪಾಡಿ ಪಳನಿಸ್ವಾಮಿ ಸರಕಾರ ಪತನ: ದಿನಕರನ್

ಉಚ್ಛಾಟಿತರಲ್ಲಿ ಟಿಟಿವಿ ದಿನಕರನ್ ರ ಪ್ರಮುಖ ಬೆಂಬಲಿಗರಾದ ಪಿ ವೆಟ್ರಿವೇಲ್, ತಂಗತಮಿಲ್ ಸೆಲ್ವನ್, ಎಂ. ರಂಗಸ್ವಾಮಿ, ವಿ.ಪಿ. ಕಲೈರಾಜನ್, ಎನ್.ಜಿ. ಪರ್ತಿಬನ್, ವಿ. ಮುತೈಯ, ವಿ.ಎ ಪುಗುಳೇಂದಿ, ನಂಚಿಲ್ ಸಂಪತ್ ಮತ್ತು ಸಿ.ಆರ್. ಸರಸ್ವತಿ ಸೇರಿದ್ದಾರೆ.

English summary
The ruling AIADMK in Tamil Nadu today decided to sack six office-bearers supporting sidelined party leader TTV Dhinakaran, a day after he won the RK Nagar bypoll here with a thumping margin of 40,000 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X