ಟಿಟಿವಿ ದಿನಕರನ್ ಬೆಂಬಲಿತ ಕರ್ನಾಟಕ ಎಐಎಡಿಎಂಕೆ ಮುಖ್ಯಸ್ಥನ ಉಚ್ಛಾಟನೆ
ಚೆನ್ನೈ, ಡಿಸೆಂಬರ್ 25: ಆರ್.ಕೆ ನಗರ ಉಪಚುನಾವಣೆಯಲ್ಲಿ ಶಶಿಕಲಾ ನಟರಾಜನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಜಯ ಸಾಧಿಸುತ್ತಿದ್ದಂತೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಕ್ರುದ್ಧರಾಗಿದ್ದಾರೆ.
ದಿನಕರನ್ ಬೆಂಬಲಿತ 9 ಎಐಎಡಿಎಂಕೆಯ ಪ್ರತಿನಿಧಿಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಆರ್.ಕೆ ನಗರ ಉಪಚುನಾವಣೆ, ಟಿಟಿವಿ ದಿನಕರನ್ ಗೆ ಭರ್ಜರಿ ಜಯ
ಇಂದು ಚೆನ್ನೈನಲ್ಲಿ ನಡೆದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಒ ಪನ್ನೀರ್ ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಪಾಲ್ಗೊಂಡಿದ್ದರು.
ಭಾನುವಾರ ಹೊರಬಿದ್ದ ಆರ್.ಕೆ ನಗರ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ 40,707 ಸಾವಿರ ಮತಗಳಿಂದ ಎಐಎಡಿಎಂಕೆ ಅಭ್ಯರ್ಥಿ ಇ ಮಧುಸೂದನ್ ರನ್ನು ಸೋಲಿಸಿದ್ದರು. ಈ ಗೆಲುವಿಗೆ ಸಹಕರಿಸಿದ್ದಾರೆ ಎಂಬ ಆರೋಪದ ಮೇಲೆ ಆರು ಪದಾಧಿಕಾರಿಗಳನ್ನು ಪಕ್ಷದಿಂದ ಕಿತ್ತು ಹಾಕಲಾಗಿದೆ.
ಮೂರು ತಿಂಗಳಲ್ಲಿ ಎಡಪ್ಪಾಡಿ ಪಳನಿಸ್ವಾಮಿ ಸರಕಾರ ಪತನ: ದಿನಕರನ್
ಉಚ್ಛಾಟಿತರಲ್ಲಿ ಟಿಟಿವಿ ದಿನಕರನ್ ರ ಪ್ರಮುಖ ಬೆಂಬಲಿಗರಾದ ಪಿ ವೆಟ್ರಿವೇಲ್, ತಂಗತಮಿಲ್ ಸೆಲ್ವನ್, ಎಂ. ರಂಗಸ್ವಾಮಿ, ವಿ.ಪಿ. ಕಲೈರಾಜನ್, ಎನ್.ಜಿ. ಪರ್ತಿಬನ್, ವಿ. ಮುತೈಯ, ವಿ.ಎ ಪುಗುಳೇಂದಿ, ನಂಚಿಲ್ ಸಂಪತ್ ಮತ್ತು ಸಿ.ಆರ್. ಸರಸ್ವತಿ ಸೇರಿದ್ದಾರೆ.