ಕ್ಯಾರಿ ಬ್ಯಾಗ್ಗೆ 14 ರೂ.: ಡೊಮಿನೊಸ್ಗೆ ಬಿತ್ತು 10 ಲಕ್ಷ ರೂ. ದಂಡ
ಚಂಡೀಗಢ, ಡಿಸೆಂಬರ್ 19: ಗ್ರಾಹಕರಿಗೆ ಹೆಚ್ಚಿನ ದರ ವಿಧಿಸುವ ಮೂಲಕ ಹಲವು ಸಲ ದಂಡ ತೆರಬೇಕಾದ ಶಿಕ್ಷೆ ಅನುಭವಿಸಿರುವ ಡೊಮಿನೊಸ್ ಪಿಜ್ಜಾ ಮತ್ತೆ ಎಡವಟ್ಟು ಮಾಡಿಕೊಂಡಿದೆ.
ಇಬ್ಬರು ವಿಭಿನ್ನ ಗ್ರಾಹಕರಿಗೆ ಕ್ಯಾರಿ ಬ್ಯಾಗ್ಗಾಗಿ 14 ರೂ. ಪಡೆದುಕೊಂಡಿದ್ದ ಡೊಮಿನೊಸ್ ಪಿಜ್ಜಾ ಭಾರೀ ದಂಡ ತೆರುವಂತಾಗಿದೆ. ಡೊಮಿನೊಸ್ ಪಿಜ್ಜಾದ ಮಾಲೀಕ ಸಂಸ್ಥೆ ಜುಬಿಲಿಯಂಟ್ ಫುಡ್ ವರ್ಕ್ಸ್ ಲಿಮಿಟೆಡ್ನ ಮನವಿಯನ್ನು ಚಂಡೀಗಢ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ವಜಾಗೊಳಿಸಿದೆ. ಕ್ಯಾರಿ ಬ್ಯಾಗ್ಗೆ 14 ರೂ. ದರ ವಿಧಿಸಿದ್ದ ಸಂಸ್ಥೆಯು ಇಬ್ಬರು ಗ್ರಾಹಕರಿಗೂ ಆ ಹಣವನ್ನು ಮರುಪಾವತಿ ಮಾಡುವಂತೆ ಸೂಚಿಸಿದೆ.
ಅಲ್ಲದೆ, ಗ್ರಾಹಕರಿಗೆ ಕಿರುಕುಳ, ಮಾನಸಿಕ ನೋವು ಮತ್ತು ವ್ಯಾಜ್ಯದ ವೆಚ್ಚವಾಗಿ ತಲಾ 1500 ರೂ. ಪರಿಹಾರ ನೀಡುವಂತೆ ಕೂಡ ಆದೇಶಿಸಿದೆ. ನಿಯಮಾವಳಿಗಳನ್ನು ಮೀರಿ ಗ್ರಾಹಕರಿಗೆ ತೊಂದರೆ ನೀಡಿದ್ದಕ್ಕಾಗಿ 9,80,000 ರೂ. ದಂಡವನ್ನು ಪಿಜಿಐ ಚಂಡೀಗಢ ನಿರ್ವಹಿಸುತ್ತಿರುವ ಬಡ ರೋಗಿಗಳ ಕಲ್ಯಾಣ ನಿಧಿಗೆ (ಪಿಪಿಡಬ್ಲ್ಯೂಎಫ್) ಠೇಚಣಿ ರೂಪದಲ್ಲಿ ಇರಿಸುವಂತೆ ಸಹ ನಿರ್ದೇಶಿಸಲಾಗಿದೆ.

ಜಿತೇಂದರ್ ಬನ್ಸಾಲ್ ಎಂಬ ಗ್ರಾಹಕರಿಂದ ಡೊಮಿನೊಸ್, ಕ್ಯಾರಿ ಬ್ಯಾಗ್ಗೆ 14 ರೂ. ಹಣ ಪಡೆದುಕೊಂಡಿತ್ತು. ಇದರ ವಿರುದ್ಧ ಅವರು ಜುಲೈನಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು. ವೇದಿಕೆಯು ಸಂಸ್ಥೆಗೆ ಐದು ಲಕ್ಷ ರೂ. ದಂಡ ವಿಧಿಸಿತ್ತು. ಇದರ ವಿರುದ್ಧ ಮೇಲಿನ ಆಯೋಗಕ್ಕೆ ಮನವಿ ಸಲ್ಲಿಸಿದ್ದ ಸಂಸ್ಥೆ, ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ದರ ವಿಧಿಬಾರದು ಎಂದು ಮಾರಾಟಗಾರರನ್ನು ತಡೆಯಲು ಯಾವುದೇ ಕಾನೂನು ಇಲ್ಲ ಎಂದು ವಾದಿಸಿತ್ತು.
ವಕೀಲರಾಗಿರುವ ಪಂಕಜ್ ಚಾಂದ್ಗೋಥಿಯಾ ನ.13ರಂದು ಕ್ಯಾರಿ ಬ್ಯಾಗ್ಗೆ 14 ರೂ ವಿಧಿಸಿದ್ದ ಸಂಸ್ಥೆ ವಿರುದ್ಧ ಜಿಲ್ಲಾ ಗ್ರಾಹಕ ವ್ಯವಹಾರಗಳ ವ್ಯಾಜ್ಯ ಪರಿಹಾರ ವೇದಿಕೆ-IIಗೆ ದೂರು ನೀಡಿದ್ದರು. ಈ ದೂರು ಕೂಡ ಆಯೋಗದ ಮೆಟ್ಟಿಲೇರಿತ್ತು. ಇಲ್ಲಿಯೂ ಸಂಸ್ಥೆ ದಂಡದ ಮೊತ್ತ ತೆರುವಂತಾಗಿದೆ.
ಕಾನೂನಿನ ಪ್ರಕಾರ ಕ್ಯಾರಿ ಬ್ಯಾಗ್ಗೆ ಹಣ ನೀಡುವಂತೆ ಗ್ರಾಹಕರಿಗೆ ಹೇಳುವಂತಿಲ್ಲ. 2019ರ ಫೆಬ್ರವರಿಯಲ್ಲಿ ಕೂಡ ಇದೇ ರೀತಿಯ ಪ್ರಕರಣದಲ್ಲಿ ಡೊಮಿನೋಸ್ ದಂಡ ತೆತ್ತಿತ್ತು. ಆದರೆ ಆ ತಪ್ಪನ್ನು ಮತ್ತೆ ಮಾಡುವ ಮೂಲಕ ಪುನಃ ಭಾರಿ ದಂಡ ಕಟ್ಟುವಂತಾಗಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications