ಗಡಿಜಿಲ್ಲೆ ಚಾಮರಾಜನಗರದ 189 ಹಳ್ಳಿ ಇತಿಹಾಸ ಬರೆದ ಗ್ರಾಮ ಲೆಕ್ಕಿಗ
ಚಾಮರಾಜನಗರ, ಅಕ್ಟೋಬರ್ 11: ಸರ್ಕಾರಿ ನೌಕರಿ ಅಂದ್ರೆ ಗಂಟೆ ಹೊಡಿ ಸಂಬಳ ತಗೋ ಎಂಬ ಮಾತಿಗೆ ಅಪವಾದವಾಗಿ ತನ್ನೂರು ಬಿಟ್ಟು ನೂರಾರು ಕಿಮೀ ಬಂದು ನೆಲೆಸಿರುವ ಈ ಗ್ರಾಮ ಲೆಕ್ಕಿಗ ಚರಿತ್ರೆ ಬರೆಯುವ ಸಾಹಸದಲ್ಲಿ ತೊಡಗಿದ್ದು ಅದರಲ್ಲೂ ಯಶಸ್ವಿಯೂ ಆಗುತ್ತಿದ್ದಾರೆ.
ಬಳ್ಳಾರಿಯಿಂದ ವಿಭಜನೆಗೊಂಡು ಈಗ ವಿಜಯನಗರ ಜಿಲ್ಲೆಗೆ ಒಳಪಟ್ಟ ಈಚಲಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ 6 ತಾಸು ಕೆಲಸವಷ್ಟೇ ಎಂಬ ಮನಸ್ಥಿತಿ ಹೊರಬಿಟ್ಟು ಚಾಮರಾಜನಗರ ತಾಲೂಕಿನ ಪ್ರತಿ ಹಳ್ಳಿಗಳ ಇತಿಹಾಸ ಹೇಳಲು ಮುಂದಾಗಿದ್ದಾರೆ.
'ಚಾಮರಾಜನಗರ ದರ್ಶನಂ' ನಲ್ಲಿ 189 ಹಳ್ಳಿಗಳ ಚರಿತ್ರೆ
ಚಾಮರಾಜನಗರ ತಾಲೂಕಿನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ಹೇಳಲು ಶ್ರೀಧರ್ ಮುಂದಾಗಿದ್ದು, ಈ ಕೃತಿಗೆ 'ಚಾಮರಾಜನಗರ ದರ್ಶನಂ' ಎಂದು ಹೆಸರಿಟ್ಟಿದ್ದಾರೆ. ಸಂಪೂರ್ಣ ಮಾಹಿತಿಯುಳ್ಳ ಪುಸ್ತಕ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

ಪ್ರತಿ ಊರಿಗೆ ಭೇಟಿ ಕೊಡುವ ಶ್ರೀಧರ್ ಆ ಊರಿಗೆ ಹೆಸರು ಏಕೆ ಬಂತು, ಈ ಹಿಂದಿನ ಹೆಸರು ಏನಾಗಿತ್ತು. ಗ್ರಾಮದಲ್ಲಿ ಸಿಗುವ ಶಾಸನಗಳಲ್ಲಿ ಊರಿನ ಬಗ್ಗೆ ಏನೆಂದು ಉಲ್ಲೇಖಿಸಲಾಗಿದೆ ಎಂಬುದನ್ನು ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಜೊತೆಗೆ ಊರಲ್ಲಿರುವ ಮತದಾರರು, ಜನಸಂಖ್ಯೆ, ದೇವಾಲಯಗಳು, ದೇವಾಲಯಗಳ ಶೈಲಿ, ಯಾವ ಕಾಲದ್ದು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಜೊತೆಗೆ ಗ್ರಾಮದಲ್ಲಿರುವ ಹಿರಿಯರ ಜೊತೆಗೆ ಊರಿನ ಇತಿಹಾಸದ ಬಗ್ಗೆ, ಊರಿನ ವಿಶೇಷತೆ, ಹಬ್ಬ ಹರಿದಿನ ಆಚರಣೆಗಳ ಬಗ್ಗೆ ಚರ್ಚಿಸಿ ಅವರಿಂದಲೂ ಮಾಹಿತಿಯನ್ನು ಕಲೆಯಾಕುತ್ತಿದ್ದಾರೆ. ಊರಲ್ಲಿರುವ ಕೆರೆಗಳ ಮಾಹಿತಿಯನ್ನು ಕೃತಿಯಲ್ಲಿ ಕಟ್ಟಿಕೊಡಲು ತಯಾರಿ ನಡೆಸಿದ್ದಾರೆ,
ಶ್ರೀಧರ್ ಇದಕ್ಕಾಗಿ ಕಳೆದ 6-8 ತಿಂಗಳುಗಳು ಕಾಲ ಚರಿತ್ರೆ ಬರೆಯಲು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದು, ಶಾಸನಗಳನ್ನು ಕಂಡು, ಎಫಿಗ್ರಾಪಿ ಕರ್ನಾಟಕವನ್ನು ಓದಿಕೊಂಡು ಈ ಇತಿಹಾಸ ಸಾರುವ ಪುಸ್ತಕವನ್ನು ಸಿದ್ಧಪಡಿಸುತ್ತಿದ್ದಾರೆ.

ಇನ್ನು ಪುಸ್ತಕದಲ್ಲಿ ಚಾಮರಾಜನಗರದ ಭಾಷೆಯ ಸೊಗಡು, ಅದ್ಭುತವಾದ ಫೋಟೋಗಳನ್ನು ಬಳಸಲಾಗುತ್ತಿದೆ. ದೂರದ ಹೈದರಾಬಾದ್ ಕರ್ನಾಟಕದಿಂದ ಬಂದು ತಾವೂ ಕಾರ್ಯ ನಿರ್ವಹಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಚರಿತ್ರೆ ಹೇಳಲು ಹೊರಟಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications