ಚಾಮರಾಜನಗರ: ಪ್ರಚಾರದ ವೇಳೆ ಮಾದಪ್ಪನ ಹಾಡು ಹೇಳಿ ಮತದಾರರ ಗಮನ ಸೆಳೆದ ಬಿಜೆಪಿ ಅಭ್ಯರ್ಥಿ
ಚಾಮರಾಜನಗರ, ಏಪ್ರಿಲ್, 04: ಲೋಕಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಕೂಡ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ. ಹಾಗೆಯೇ ಚಾಮರಾಜನಗರ ಕ್ಷೇತ್ರದಲ್ಲಿ ಇಂದು (ಏಪ್ರಿಲ್ 04) ಬಿಜೆಪಿ ಅಭ್ಯರ್ಥಿ ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಾಮರಾಜನಗರ ಅಂದರೆ ಮೊದಲು ನೆನಪಾಗುವುದೇ ಮಲೆ ಮಹದೇಶ್ವರ. ಇನ್ನು ಇಲ್ಲಿಗೆ ಪ್ರತಿದಿನವೂ ಕೂಡ ಪ್ರವಾಸಿಗರು ಸೇರಿದಂತೆ ಸಾವಿರಾರು ಭಕ್ತರು ಭೇಟಿ ನೀಡುತ್ತಲೇ ಇರುತ್ತಾರೆ. ಹಾಗರೆಯೇ "ಮಹದೇಶ್ವರ" ಹಾಡನ್ನು ಭಕ್ತರು ಯಾವಾಗಲೂ ಸ್ಮರಿಸುತ್ತಲೇ ಇರುತ್ತಾರೆ. ಇದೀಗ ಈ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜು ಪ್ರಚಾರದ ವೇಳೆ ಈ ಹಾಡನ್ನು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ.

ಇಂದು ನಗರದಲ್ಲಿ ಬಿಜೆಪಿಯಿಂದ ಪ್ರಚಾರ ಸಭೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜು ಅವರು ಮಾದಪ್ಪನ ಹಾಡು ಹೇಳಿ ಮತದಾರರನ್ನು ಸೆಳೆಯುವ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ ಇವರು 75 ಹಾಡುಗಳ ಆಲ್ಬಂ ಹಾಡುಗಳನ್ನು ಹೊರತಂದಿದ್ದು, ನಾಮಿನೇಷನ್ ವೇಳೆಯೂ ವಿಜಯೇಂದ್ರ ರೋಡ್ ಶೋನಲ್ಲಿ ಹಾಡು ಹೇಳಿ ಮತದಾರರ ಗಮನ ಸೆಳೆಯುವ ಕೆಲಸವನ್ನು ಮಾಡಿದ್ದರು.












Click it and Unblock the Notifications