ಸೆ.25ರಂದು ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ
ಚಾಮರಾಜನಗರ, ಆಗಸ್ಟ್ 08 : ರಾಜ್ಯಮಟ್ಟದ 8ನೇ ವಿಶ್ವಕರ್ಮ ಜಯಂತ್ಯೋತ್ಸವವನ್ನು ಈ ಬಾರಿ ಚಾಮರಾಜನಗರದಲ್ಲಿ ಆಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಅಖಿಲ
ಕರ್ನಾಟಕ
ವಿಶ್ವಕರ್ಮ
ಮಹಾಸಭಾ
(ರಿ)
ರಾಜ್ಯಾಧ್ಯಕ್ಷರಾದ
ಕೆ.ಪಿ.ನಂಜುಂಡಿ
ಅವರು
ಈ
ಕುರಿತು
ಪ್ರಕಟಣೆ
ಬಿಡುಗಡೆ
ಮಾಡಿದ್ದಾರೆ.
ಸೆಪ್ಟೆಂಬರ್
25ರ
ಭಾನುವಾರದಂದು
ವಿಶ್ವಕರ್ಮ
ಜಯಂತ್ಯೋತ್ಸವ
ನಡೆಯಲಿದೆ.[ವಿಶ್ವಕರ್ಮ
ಮಹಾಸಭಾ
ವೆಬ್
ಸೈಟ್]
ಕರ್ನಾಟಕ ಸರ್ಕಾರ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತ್ಯೋತ್ಸವವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ ಎಂದು ಹೇಳಿದೆ. ಸೆಪ್ಟೆಂಬರ್ 25ರಂದು ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಸೆ.25ರ ಬೆಳಗ್ಗೆ 11ಗಂಟೆಗೆ 250 ಕೆಜಿ ತೂಕದ ಭಗವಾನ್ ವಿಶ್ವಕರ್ಮನ ಪುತ್ಥಳಿಯನ್ನು ಬೆಳ್ಳಿರಥದಲ್ಲಿ ಕೂರಿಸಿ ರಾಜ್ಯದ ಪ್ರಸಿದ್ಧ ಸಾಂಸ್ಕೃತಿ ಕಲಾತಂಡಗಳ ಜೊತೆ ಮೆರವಣಿಗೆ ನಡೆಸಲಾಗುತ್ತದೆ. ಈ ಮೆರವಣಿಗೆ ಸಮಯದಲ್ಲಿ ವಿಶೇಷ ಹೆಲಿಕಾಪ್ಟರ್ ಮೂಲಕ ಭಗವಾನ್ ವಿಶ್ವಮರ್ಮ ಮತ್ತು ಮೆರವಣಿಗೆಯಲ್ಲಿ ಇರುವವರ ಮೇಲೆ ಪುಷ್ಪವೃಷ್ಠಿ ಸುರಿಸಲಾಗುತ್ತದೆ.
2000 ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಬ್ಬ ವಿಶ್ವಕರ್ಮ ಬಂಧುಗಳು ಈ ಮೆರವಣಿಗೆ ಮತ್ತು ಜಯಂತ್ಯೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ
ಕಾಂತರಾಜು
-
9886479636
ಕುಮಾರ್
ಡಿ.
-9901205062
ಬಂಗಾರಸ್ವಾಮಿ
-
9164745348