ಟ್ವಿಟ್ಟರ್ ನಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗಿಲ್ಲ : ಟ್ರಾಯ್
ಬೆಂಗಳೂರು, ಜುಲೈ 30: ಟೆಲಿಕಾಂ ನಿಯಂತ್ರಕ (ಟ್ರಾಯ್) ಮುಖ್ಯಸ್ಥ ಆರ್.ಎಸ್. ಶರ್ಮಾ ಅವರು ಟ್ವಿಟ್ಟರ್ ನಲ್ಲಿ ಹಾಕಿದ ಹ್ಯಾಕಿಂಗ್ ಸವಾಲಿನ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ. ಶರ್ಮಾ ಅವರು ಆಧಾರ್ ಸಂಖ್ಯೆ ನೀಡಿ, ಮಾಹಿತಿ ಹ್ಯಾಕ್ ಮಾಡುವಂತೆ ಬಹಿರಂಗ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಸಂಶೋಧಕ ಎಲ್ಲಿಯೊಟ್ ಆಲ್ಡೆರ್ಸನ್ ಅವರು ಮಾಹಿತಿ ಬಹಿರಂಗಪಡಿಸಿದ್ದರು. ಮುಂದೇನಾಯ್ತು?. . .
ಟ್ವಿಟ್ಟರ್ ನಲ್ಲಿ ಆಧಾರ್ ಸವಾಲು ಟ್ರೆಂಡಿಂಗ್ ಆಗುತ್ತಿದ್ದಂತೆ ಈ ಕುರಿತಂತೆ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಖಾಸಗಿ ಮಾಹಿತಿ ಸೋರಿಕೆ ಬಗ್ಗೆ ಸ್ಪಷ್ಟನೆ ನೀಡಿದೆ. ಟ್ರಾಯ್ ಮುಖ್ಯಸ್ಥ ಆರ್.ಎಸ್. ಶರ್ಮಾ ಅವರ ಆಧಾರ್ ಸಂಖ್ಯೆ ಬಳಸಿ ಟ್ವಿಟ್ಟರ್ ನಲ್ಲಿ ಹಾಕಲಾಗಿರುವ ಅವರ ಕೆಲವು ವೈಯಕ್ತಿಕ ಮಾಹಿತಿಗಳು ಆಧಾರ್ ಡೇಟಾಬೇಸ್ನಿಂದ ತೆಗೆದಿರುವುದಲ್ಲ. ನಮ್ಮ ಸರ್ವರ್ಗಳು ಹ್ಯಾಕ್ ಆಗಿಲ್ಲ. ಸರ್ಕಾರಿ ಅಧಿಕಾರಿಯಾಗಿರುವ ಶರ್ಮಾ ಅವರ ಬಗ್ಗೆ ಈಗಾಗಲೇ ಕೆಲವು ವೆಬ್ಸೈಟ್ಗಳಲ್ಲಿರುವ ಅಲ್ಪಸ್ವಲ್ಪ ವೈಯಕ್ತಿಕ ಮಾಹಿತಿ ಸುಲಭವಾಗಿ ಸಿಗುತ್ತದೆ, ಇದನ್ನು ಹ್ಯಾಕ್ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಪ್ರಕಟಣೆ ಹೊರಡಿಸಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಖ್ಯಸ್ಥ ಆರ್.ಎಸ್. ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಆಧಾರ್ ಸಂಖ್ಯೆ ಬಹಿರಂಗಗೊಳಿಸಿ, ಇದರಿಂದ ತನಗೆ ಯಾವ ತೊಂದರೆ ನೀಡಲು ಸಾಧ್ಯವಿದೆ ಎಂದು ಟ್ವಿಟ್ ಲೋಕದಲ್ಲಿ ಸವಾಲು ಹಾಕಿದ್ದರು. ಒಂದು ವೇಳೆ ತನ್ನ ಆಧಾರ್ ಮಾಹಿತಿ ಹ್ಯಾಕ್ ಮಾಡಿ ಟ್ವೀಟ್ನಲ್ಲಿ ಹಾಕಿದರೂ ಅಂಥವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದ್ದರು.

ಎಲ್ಲಿಯೊಟ್ ಆಲ್ಡೆರ್ಸನ್ ಅವರಿಂದ ಹ್ಯ್
ಫ್ರೆಂಚ್ ಹ್ಯಾಕರ್ ರಾಬರ್ಟ್ ಬಾಪ್ಟಿಸ್ಟ್ ಅವರು ಎಲ್ಲಿಯೊಟ್ ಆಲ್ಡೆರ್ಸನ್ ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದು, ಭದ್ರತಾ ಸಂಶೋಧಕರಾಗಿ ಈ ಹ್ಯಾಕಿಂಗ್ ಸವಾಲನ್ನು ಸ್ವೀಕರಿಸಿದರು. ಆರ್.ಎಸ್. ಶರ್ಮಾ ಟ್ವೀಟ್ ಗೆ ಪ್ರತಿಕ್ರಿಯಿಸಿ, ಅವರಿಗೆ ಸಂಬಂಧಿತ ಹಲವು ವೈಯಕ್ತಿಕ ಮಾಹಿತಿಗಳನ್ನು ಹಾಕಿದ್ದರು.

ಆಧಾರ್ ಸಂಸ್ಥೆಯಿಂದ ಪ್ರತಿಕ್ರಿಯೆ
ಆಧಾರ್ ಸಂಖ್ಯೆ ಸಿಕ್ಕರೆ ವ್ಯಕ್ತಿಯ ಪ್ಯಾನ್, ಬ್ಯಾಂಕ್ ಖಾತೆ ಸಂಖ್ಯೆ, ಖಾಸಗಿ ಫೋನ್ ನಂಬರ್, ಜನ್ಮದಿನಾಂಕದಂಥ ಹಲವು ವೈಯಕ್ತಿಕ ಮಾಹಿತಿಗಳನ್ನು ಹ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ. ಆದರೆ, ಇದೆಲ್ಲವೂ ತಪ್ಪು ಮಾಹಿತಿ, ಶರ್ಮಾ ಅವರ ಹಳೆ ಮನೆ ವಿಳಾಸ ಎಂದು ಆಧಾರ್ ಸಂಸ್ಥೆ ಹೇಳಿದೆ.
|
ಭದ್ರತೆ ಬಗ್ಗೆ ಅಷ್ಟು ನಂಬಿಕೆ ಇದ್ದರೆ, ಮಾಹಿತಿ ಕೊಡಿ
13 ಸ್ತರದ ಭದ್ರತೆ ಬಗ್ಗೆ ಅಷ್ಟು ನಂಬಿಕೆ ಇದ್ದರೆ, ನಿಮ್ಮ ಆಧಾರ್ ವಿವರಗಳನ್ನು ಬಹಿರಂಗಪಡಿಸಿ ಎಂದು ಸವಾಲು
|
ಎಲ್ಲಿಯೋಟ್ ಅಲ್ಡರ್ಸನ್ ಅವರಿಂದ ಮಾಹಿತಿ
ಎಲ್ಲಿಯೋಟ್ ಅಲ್ಡರ್ಸನ್ ಅವರಿಂದ ಮಾಹಿತಿ ಬಹಿರಂಗ, ಶರ್ಮಾ ಅವರ ಆಧಾರ್ ಜತೆ ಜೋಡಣೆಯಾಗಿರುವ ಫೋನ್ ನಂಬರ್ ಇದೆ ಎಂದು ತಿಳಿಸಿದ ಅಲ್ಡರ್ಸನ್.
|
ಆಧಾರ್ ಸಂಖ್ಯೆ ಸವಾಲಿಗೆ ಇಲ್ಲಿದೆ ಉತ್ತರ
ರಾಮ್ ಸೇವಕ್ ಶರ್ಮ ಅವರೇ, ನಿಮ್ಮ ಆಧಾರ್ ಸಂಖ್ಯೆ ಬಹಿರಂಗಪಡಿಸುವ ಮೂಲಕ ನೀವು ನೀಡಿದ ಸವಾಲಿನಂತೆ, ನಿಮ್ಮ ಮಾಹಿತಿ ಬಹಿರಂಗಪಡಿಸುತ್ತಿದ್ದೇನೆ. ನಿಮ್ಮ ಬದಲಿ ಮೊಬೈಲ್ ಸಂಖ್ಯೆ, ವಿಳಾಸ ಎಲ್ಲವೂ ಇಲ್ಲಿದೆ. ಇಷ್ಟು ಸಾಕು
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications