ಟೈಟಾನ್ ವಾಚುಗಳ ಸ್ಥಾಪಕ ಕ್ಸೆರೆಕ್ಸ್ ದೇಸಾಯಿ ಇನ್ನಿಲ್ಲ
ಬೆಂಗಳೂರು, ಜೂನ್ 27: ಬೆಂಗಳೂರಿನ ಗಡಿಭಾಗದ ಹೊಸೂರಿನಲ್ಲಿ ಟೈಟಾನ್ ವಾಚು ಫ್ಯಾಕ್ಟರಿ ಸ್ಥಾಪಿಸಿ, ಟಾಟಾ ಸಂಸ್ಥೆಯನ್ನು ಅಧಿಕೃತವಾಗಿ ವಾಚುಗಳ ಉದ್ಯಮದಲ್ಲಿ ತೊಡಗುವಂತೆ ಮಾಡಿದ ಉದ್ಯಮಿ ಕ್ಸೆರೆಕ್ಸ್ ದೇಸಾಯಿ ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ. ಮಾರಣಾಂತಿಕ ಡೆಂಗ್ಯೂ ಅವರನ್ನು ಬಲಿ ತೆಗೆದುಕೊಂಡಿದೆ.
ವಾಚು ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಕ್ಸೆರೆಕ್ಸ್ ದೇಸಾಯಿ(79) ಅವರು ಕೆಲ ಕಾಲದಿಂದ ಹೊಟ್ಟೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. [ಪೊಲೀಸರ ಕಣ್ಣಿಗೆ 'ಸನ್ ಗ್ಲಾಸ್' ಹಾಕಿದ ಟೈಟಾನ್ ಐ]

ಜೆಆರ್ ಡಿ ಟಾಟಾ ಅವರಿಗೆ ಮೊದಲ ಬಾರಿಗೆ ವಾಚು ಉದ್ಯಮದಲ್ಲಿ ತೊಡಗಿಕೊಳ್ಳಲು ಸಲಹೆ ನೀಡಿದ ದೇಸಾಯಿ ಅವರು ಟಾಟಾ ಸಮೂಹದ ಮೂಲಕ ಈ ಹೊಸ ಸಾಹಸಕ್ಕೆ ಕೈ ಹಾಕಿದರು. ಇದಕ್ಕೂ ಮುನ್ನ ದೇಸಾಯಿ ಅವರು ಟಾಟಾ ಕೆಮಿಕಲ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಸಮೂಹದ ಹೊಟೆಲ್ , ಪ್ರೆಸ್ ಮುಂತಾದೆಡೆ ಅನುಭವ ಹೊಂದಿದ್ದರು. ಹೊಸೂರಿನ ಘಟಕ ಸ್ಥಾಪನೆಗಾಗಿ ಸರಿ ಸುಮಾರು 6 ವರ್ಷಗಳ ಕಾಲ ತಮಿಳುನಾಡು ಸರ್ಕಾರದೊಡನೆ ಸಂಧಾನ ನಡೆಸಿ ಯಶಸ್ವಿಯಾದ ದೇಸಾಯಿ ಅವರು ಬೆಳೆಸಿದ ಟೈಟಾನ್ ರೀಟೆಲ್ ನೆಟ್ವರ್ಕ್ ಇಂದು ದೇಶದ ವಿಸ್ತೃತ ಜಾಲವನ್ನು ಹೊಂದಿದೆ.[ಟೈಟಾನ್ ನಿಂದ ಫೈಬರ್ ಸರಣಿ ಹೊಸ ಗಡಿಯಾರ]
ಟೈಟಾನ್ ರೀಟೆಲ್ ನೆಟ್ವರ್ಕ್ ಕುರಿತು: 445ಕ್ಕೂ ಅಧಿಕ ಎಕ್ಸ್ಕ್ಲ್ಯೂಸಿವ್ ಮಳಿಗೆಯನ್ನು 180ಕ್ಕೂ ಅಧಿಕ ನಗರಗಳಲ್ಲಿ ಹೊಂದಿದ್ದು, ಟೈಟಾನ್ ಭಾರತದ ಬೃಹತ್ ವಾಚ್ ರೀಟೆಲರ್. ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಆಫ್ರಿಕ ಸೇರಿದಂತೆ 32 ದೇಶಗಳಲ್ಲಿ ಅಸ್ತಿತ್ವ ಹೊಂದಿದೆ. 700ಕ್ಕು ಅಧಿಕ ಅಧಿಕೃತ ಸೇವಾ ಕೇಂದ್ರಗಳನ್ನು ಹೊಂದಿದೆ. 2011-12ರಲ್ಲಿ 50 ಲಕ್ಷ ಗ್ರಾಹಕರ ಗಡಿ ತಲುಪಿತ್ತು. ಸಾಕಷ್ಟು ಗ್ರಾಹಕ ಸಂಬಂಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊಂದಿದ್ದು, 40 ಲಕ್ಷ ಸಕ್ರಿಯ ಗ್ರಾಹಕರನ್ನು ಹೊಂದಿದೆ.
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications