ಟೈಟಾನ್ ವಾಚುಗಳ ಸ್ಥಾಪಕ ಕ್ಸೆರೆಕ್ಸ್ ದೇಸಾಯಿ ಇನ್ನಿಲ್ಲ
ಬೆಂಗಳೂರು, ಜೂನ್ 27: ಬೆಂಗಳೂರಿನ ಗಡಿಭಾಗದ ಹೊಸೂರಿನಲ್ಲಿ ಟೈಟಾನ್ ವಾಚು ಫ್ಯಾಕ್ಟರಿ ಸ್ಥಾಪಿಸಿ, ಟಾಟಾ ಸಂಸ್ಥೆಯನ್ನು ಅಧಿಕೃತವಾಗಿ ವಾಚುಗಳ ಉದ್ಯಮದಲ್ಲಿ ತೊಡಗುವಂತೆ ಮಾಡಿದ ಉದ್ಯಮಿ ಕ್ಸೆರೆಕ್ಸ್ ದೇಸಾಯಿ ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ. ಮಾರಣಾಂತಿಕ ಡೆಂಗ್ಯೂ ಅವರನ್ನು ಬಲಿ ತೆಗೆದುಕೊಂಡಿದೆ.
ವಾಚು ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಕ್ಸೆರೆಕ್ಸ್ ದೇಸಾಯಿ(79) ಅವರು ಕೆಲ ಕಾಲದಿಂದ ಹೊಟ್ಟೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. [ಪೊಲೀಸರ ಕಣ್ಣಿಗೆ 'ಸನ್ ಗ್ಲಾಸ್' ಹಾಕಿದ ಟೈಟಾನ್ ಐ]

ಜೆಆರ್ ಡಿ ಟಾಟಾ ಅವರಿಗೆ ಮೊದಲ ಬಾರಿಗೆ ವಾಚು ಉದ್ಯಮದಲ್ಲಿ ತೊಡಗಿಕೊಳ್ಳಲು ಸಲಹೆ ನೀಡಿದ ದೇಸಾಯಿ ಅವರು ಟಾಟಾ ಸಮೂಹದ ಮೂಲಕ ಈ ಹೊಸ ಸಾಹಸಕ್ಕೆ ಕೈ ಹಾಕಿದರು. ಇದಕ್ಕೂ ಮುನ್ನ ದೇಸಾಯಿ ಅವರು ಟಾಟಾ ಕೆಮಿಕಲ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಸಮೂಹದ ಹೊಟೆಲ್ , ಪ್ರೆಸ್ ಮುಂತಾದೆಡೆ ಅನುಭವ ಹೊಂದಿದ್ದರು. ಹೊಸೂರಿನ ಘಟಕ ಸ್ಥಾಪನೆಗಾಗಿ ಸರಿ ಸುಮಾರು 6 ವರ್ಷಗಳ ಕಾಲ ತಮಿಳುನಾಡು ಸರ್ಕಾರದೊಡನೆ ಸಂಧಾನ ನಡೆಸಿ ಯಶಸ್ವಿಯಾದ ದೇಸಾಯಿ ಅವರು ಬೆಳೆಸಿದ ಟೈಟಾನ್ ರೀಟೆಲ್ ನೆಟ್ವರ್ಕ್ ಇಂದು ದೇಶದ ವಿಸ್ತೃತ ಜಾಲವನ್ನು ಹೊಂದಿದೆ.[ಟೈಟಾನ್ ನಿಂದ ಫೈಬರ್ ಸರಣಿ ಹೊಸ ಗಡಿಯಾರ]
ಟೈಟಾನ್ ರೀಟೆಲ್ ನೆಟ್ವರ್ಕ್ ಕುರಿತು: 445ಕ್ಕೂ ಅಧಿಕ ಎಕ್ಸ್ಕ್ಲ್ಯೂಸಿವ್ ಮಳಿಗೆಯನ್ನು 180ಕ್ಕೂ ಅಧಿಕ ನಗರಗಳಲ್ಲಿ ಹೊಂದಿದ್ದು, ಟೈಟಾನ್ ಭಾರತದ ಬೃಹತ್ ವಾಚ್ ರೀಟೆಲರ್. ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಆಫ್ರಿಕ ಸೇರಿದಂತೆ 32 ದೇಶಗಳಲ್ಲಿ ಅಸ್ತಿತ್ವ ಹೊಂದಿದೆ. 700ಕ್ಕು ಅಧಿಕ ಅಧಿಕೃತ ಸೇವಾ ಕೇಂದ್ರಗಳನ್ನು ಹೊಂದಿದೆ. 2011-12ರಲ್ಲಿ 50 ಲಕ್ಷ ಗ್ರಾಹಕರ ಗಡಿ ತಲುಪಿತ್ತು. ಸಾಕಷ್ಟು ಗ್ರಾಹಕ ಸಂಬಂಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊಂದಿದ್ದು, 40 ಲಕ್ಷ ಸಕ್ರಿಯ ಗ್ರಾಹಕರನ್ನು ಹೊಂದಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications