ಟಿಸಿಎಸ್ ಈಗ ವಿಶ್ವದ ನಂಬರ್ ಒನ್ ಸಾಫ್ಟ್ ವೇರ್ ಕಂಪನಿ
ಬೆಂಗಳೂರು, ಜನವರಿ 25: ಟಾಟಾ ಗ್ರೂಪ್ ಸಮೂಹದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಭಾರತದಲ್ಲಿ ನಂ.1 ಸಾಫ್ಟ್ ವೇರ್ ರಫ್ತು ಸಂಸ್ಥೆ ಎಂಬುದು ಟೆಕ್ ಕ್ಷೇತ್ರದಲ್ಲಿ ಎಲ್ಲರಿಗೂ ತಿಳಿದಿದೆ. ಸೋಮವಾರ(ಜ. 25) ದಂದು ಟಿಸಿಎಸ್ ವಿಶ್ವದ ನಂ. 1 ಸಾಫ್ಟ್ ವೇರ್ ಸಂಸ್ಥೆ ಎನಿಸೊಂಡಿದೆ.
ವಿಶ್ವದ ಹೆಚ್ಚು ಮೌಲ್ಯಯುತ ಐಟಿ ಸಂಸ್ಥೆ ಎನಿಸಿಕೊಂಡಿದ್ದ ಆಕ್ಸೆಂಚರ್ ಸಂಸ್ಥೆ(168.57B)ಯನ್ನು ಟಿಸಿಎಸ್ ಹಿಂದಿಕ್ಕಿದೆ. ಸೋಮವಾರ ಟಿಸಿಎಸ್ ಮಾರುಕಟ್ಟೆ ಮೌಲ್ಯ 169.9 ಬಿಲಿಯನ್ ಡಾಲರ್ ಏರಿಕೆ ಕಂಡಿದೆ.
ಮಾರುಕಟ್ಟೆ ಮೌಲ್ಯ ದಿಢೀರ್ ಏರಿಕೆ ಕಾಣುತ್ತಿದ್ದಂತೆ ಟಿಸಿಎಸ್ ಮಾರುಕಟ್ಟೆ ಮೌಲ್ಯ ಜನವರಿ 25ರ ಮಧ್ಯಾಹ್ನದ ವೇಳೆಗೆ 12,43,540.29 ಕೋಟಿ ರೂಪಾಯಿ ನಷ್ಟಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಂತರ 12 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಕ್ಯಾಪ್ ಹೊಂದಿದ ಕಂಪನಿ ಎಂಬ ದಾಖಲೆಗೂ ಟಿಸಿಎಸ್ ಪಾತ್ರವಾಗಿದೆ.

2018ರಲ್ಲಿ ಐಬಿಎಂ ಟಾಪ್ ಸ್ಥಾನದಲ್ಲಿತ್ತು. ಟಿಸಿಎಸ್ ಸೇರಿದಂತೆ ಉಳಿದ ಐಟಿ ಸಂಸ್ಥೆಗಳಿಗಿಂತ ಈ ಪುರಾತನ ಸಂಸ್ಥೆ ಶೇ 300 ರಷ್ಟು ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿತ್ತು. ಆದರೆ, 2019ರ ಏಪ್ರಿಲ್ ನಲ್ಲಿ ಟಿಸಿಎಸ್ ಮೊದಲ ಬಾರಿಗೆ 100 ಬಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿರುವ ಐಟಿ ಸಂಸ್ಥೆಗಳ ಸಾಲಿಗೆ ಸೇರ್ಪಡೆಗೊಂಡಿತ್ತು.
ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭ 8,701 ಕೋಟಿ ರೂಪಾಯಿ ಗಳಿಸಿತ್ತು. ಟಿಸಿಎಸ್ ಷೇರುಗಳು ಬಿಎಸ್ಇಯಲ್ಲಿ 3,287. 40 ರು ನಂತೆ ಟ್ರೆಂಡ್ ಆಗಿದ್ದು, 0.45 ರಷ್ಟು ಕುಸಿತ ಕಂಡಿದೆ. ಎನ್ಎಸ್ಇಯಲ್ಲಿ 3,303 ರು ನಂತೆ ವಹಿವಾಟು ಅಂತ್ಯಗೊಳಿಸಿದೆ.
ಟಾಪ್ 10 ಐಟಿ ಕಂಪನಿಗಳ ಪೈಕಿ ಟಾಪ್ 4 ಕಂಪನಿಗಳ ಮೌಲ್ಯ ಒಟ್ಟುಗೂಡಿಸಿದರೆ ಕಳೆದ ವಾರ 1,15,758.53 ಕೋಟಿ ರು ನಷ್ಟಿತ್ತು. ರಿಲಯನ್ಸ್, ಟಿಸಿಎಸ್, ಹಿಂದೂಸ್ತಾನ್ ಲಿವರ್, ಬಜಾಜ್ ಫೈನಾನ್ಸ್ ಸದ್ಯ ಮಾರುಕಟ್ಟೆ ಮೌಲ್ಯ ಹೆಚ್ಚಳ ಕಂಡ ಕಂಪನಿಗಳಾಗಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications