ಟಾಟಾ ಮೋಟಾರ್ಸ್ ಷೇರುಗಳ ಭರ್ಜರಿ ಏರಿಕೆ: ಶೇಕಡಾ 9ರಷ್ಟು ಹೆಚ್ಚಳ
ನವದೆಹಲಿ, ಜನವರಿ 12: ಕೋವಿಡ್-19 ಪ್ರಭಾವದಿಂದಾಗಿ ಇಳಿಕೆಗೊಂಡಿದ್ದ ಆಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್, ಮೂರನೇ ತ್ರೈಮಾಸಿಕದಲ್ಲಿ ಚೇತರಿಕೆ ಕಂಡ ಬಳಿಕ ಈ ವರ್ಷ ಶೇಕಡಾ 9ರಷ್ಟು ಹೆಚ್ಚಳ ಕಂಡುಬಂದಿದ್ದು, 252.40 ರೂಪಾಯಿವರೆಗೂ ಗರಿಷ್ಠ ಹೆಚ್ಚಳ ದಾಖಲಿಸಿದೆ.
ಕಂಪನಿಯ ವಿದೇಶಿ ಅಂಗಸಂಸ್ಥೆ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) 2020 ರ ಅಂತ್ಯದ ಮಾರಾಟದಲ್ಲಿ ಎರಡನೇ ತ್ರೈಮಾಸಿಕದಲ್ಲಿ ಚೇತರಿಕೆಯೊಂದಿಗೆ ಗುರುತಿಸಿದ ನಂತರ ಟಾಟಾ ಮೋಟಾರ್ಸ್ ಶೇಕಡಾ 9ಕ್ಕೂ ಹೆಚ್ಚು ಹೆಚ್ಚಳ ದಾಖಲಿಸಿದೆ.
31 ಡಿಸೆಂಬರ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚಿಲ್ಲರೆ ಮಾರಾಟವು 1.28 ಲಕ್ಷ ವಾಹನಗಳಾಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಮಾರಾಟವಾದ 1.13 ಲಕ್ಷ ವಾಹನಗಳಿಗಿಂತ ಶೇಕಡಾ 13.1ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಶೇಕಡಾ 9 ರಷ್ಟು ಕಡಿಮೆಯಾಗಿದೆ.

ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಚೀನಾ ಮಾರಾಟವು ಶೇಕಡಾ 20.2ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಶೇಕಡಾ 19.1 ರಷ್ಟು ಏರಿಕೆಯಾಗಿದೆ. ಇತರ ಪ್ರದೇಶಗಳಲ್ಲಿನ ಚಿಲ್ಲರೆ ಮಾರಾಟವು ಚೇತರಿಸಿಕೊಳ್ಳುತ್ತಲೇ ಇದೆ ಮತ್ತು ಉತ್ತರ ಅಮೆರಿಕಾದಲ್ಲಿ (ಶೇಕಡಾ 31.7 ರಷ್ಟು), ವಿದೇಶ ಮಾರುಕಟ್ಟೆಗಳಲ್ಲಿ (ಶೇಕಡಾ 26.6ರಷ್ಟು) ಮತ್ತು ಯುರೋಪ್ನಲ್ಲಿ (ಶೇಕಡಾ 20.5ರಷ್ಟು) ಹಿಂದಿನ ತ್ರೈಮಾಸಿಕದಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ.
ಆದಾಗ್ಯೂ, ಈ ಪ್ರದೇಶಗಳಲ್ಲಿನ ಮಾರಾಟವು ಕೋವಿಡ್-19 ರ ಪೂರ್ವದ ಮಟ್ಟಕ್ಕೆ ಇನ್ನೂ ಚೇತರಿಸಿಕೊಂಡಿಲ್ಲ. ಒಂದು ವರ್ಷದ ಹಿಂದೆ ಉತ್ತರ ಅಮೆರಿಕಾದಲ್ಲಿ (ಶೇಕಡಾ 17.2ರಷ್ಟು ಕುಸಿತ), ಸಾಗರೋತ್ತರ (ಶೇಕಡಾ 20ರಷ್ಟು ಕುಸಿತ), ಯುರೋಪ್ (ಶೇಕಡಾ 16.3ರಷ್ಟು ಕುಸಿತ) ಮತ್ತು ಬ್ರಿಟನ್ (8.9ರಷ್ಟು ಕುಸಿದಿತ್ತು).
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications