ವಿಶ್ವದರ್ಜೆಯ ಸಾಫ್ಟ್ ವೇರ್ ಪ್ರತಿಭೆಗಳಿಗೆ ಟಾಟಾ ಕೇಂದ್ರ ವೇದಿಕೆ
ಬೆಂಗಳೂರು, ಅ.8: ಜಾಗತಿಕ ಇಂಜಿನಿಯರಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ಡಿಜಿಟಲ್ ಸೇವಾ ಕಂಪನಿ ಟಾಟಾ ಟೆಕ್ನಾಲಜೀಸ್ ಮತ್ತು ಡ್ರೈವ್ಲೈನ್ ಸಿಸ್ಟಮ್ & ಅತ್ಯಾಧುನಿಕ ಇ-ಪವರ್ಟ್ರೇನ್ ಟೆಕ್ನಾಲಜಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಕೆಎನ್ ಆಟೊಮೋಟಿವ್, ಅತ್ಯಾಧುನಿಕ, ಜಾಗತಿಕ ಇ-ಸಂಚಾರ ಸಾಫ್ಟ್ ವೇರ್ ಇಂಜಿನಿಯರಿಂಗ್ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಿವೆ.
ಈ ಹೊಸ ಕೇಂದ್ರವು ಟಾಟಾ ಟೆಕ್ನಾಲಜಿಯ ಎಲೆಕ್ಟ್ರಿಕ್ ಹಾಗೂ ಎಂಬೇಡೆಡ್ ಸಿಸ್ಟಮ್ಗಳ ಪರಿಣತಿ ಮತ್ತು ಜಿಕೆಎನ್ ಆಟೊಮೋಟಿವ್ನ ಮುಂದಿನ ಪೀಳಿಗೆಯ ಇ-ಡ್ರೈವ್ ತಂತ್ರಜ್ಞಾನಗಳತ್ತ ಕೆಲಸ ಮಾಡಲು ಭಾರತದ ಸಾಫ್ಟ್ ವೇರ್ ಇಂಜಿನಿಯರಿಂಗ್ ಪ್ರತಿಭೆಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಬಳಸಿಕೊಂಡು. ಭವಿಷ್ಯದ ಸುಸ್ಥಿರ ಇ-ಸಂಚಾರ ವ್ಯವಸ್ಥೆಯನ್ನು ಮರುರೂಪಿಸಲಿದೆ.
12650 ಚದರ ಅಡಿ ವಿಸ್ತೀರ್ಣದ ಈ ಕೇಂದ್ರವು ಡಿಸೈನ್ ಸ್ಟುಡಿಯೊ, ಲ್ಯಾಬ್ ಸ್ಟೇಷನ್, ಮೀಟಿಂಗ್ ಮತ್ತು ಸಮ್ಮೇಳನ ಸಭಾಂಗಣ, ಸುಕ್ಷೇಮ ಕೇಂದ್ರವನ್ನು ಒಳಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಅಸಾಧಾರಣ ಸವಾಲುಗಳು ಎದುರಾಗಿರುವ ಹೊರತಾಗಿಯೂ, ಈ ಕೇಂದ್ರದ ರೂಪುರೇಷೆಯಿಂದ ಹಿಡಿದು ನಿರ್ಮಾಣದವರೆಗೆ ಎಲ್ಲ ಕಾಮಗಾರಿಗಳನ್ನು ಕೇವಲ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಇದು ಹಂತಹಂತವಾಗಿ ಆರಂಭವಾಗಲಿದ್ದು, ಟಾಟಾ ಟೆಕ್ನಾಲಜೀಸ್ನ ಎಲ್ಲ ಕೇಂದ್ರಗಳಂತೆ ಕಟ್ಟುನಿಟ್ಟಾಗಿ ನೈರ್ಮಲ್ಯ, ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರ ಕಾಪಾಡುವ ನಿಯಮಗಳನ್ನು ಅನುಸರಿಸಲಾಗುತ್ತದೆ.

2020ರ ಕೊನೆಯ ಒಳಗಾಗಿ 100ಕ್ಕೂ ಹೆಚ್ಚು ವಿಶ್ವದರ್ಜೆಯ ಸಾಫ್ಟ್ ವೇರ್ ಇಂಜಿನಿಯರ್ ಮತ್ತು ಬೆಂಬಲ ಸಿಬ್ಬಂದಿಯ ತಂಡವನ್ನು ರೂಪಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟೆಕ್ನಾಲಜೀಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ವಾರ್ರನ್ ಹ್ಯಾರೀಸ್, "ಎಂಜಿನಿಯರಿಂಗ್ ಎ ಬೆಟರ್ ವಲ್ರ್ಡ್' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಟಾಟಾ ಟೆಕ್ನಾಲಜೀಸ್, ಜಾಗತಿಕ ಓಇಎಂಗಳು ಮತ್ತು ಒಂದನೇ ಸ್ತರದ ಉತ್ಪಾದಕರಿಗೆ ತನ್ನ ಉತ್ಪನ್ನ ವಿನ್ಯಾಸ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯದ ಮೂಲಕ ಉತ್ಪನ್ನ ಉತ್ಪನ್ನಗಳ ಉತ್ಪಾದನೆಗೆ ಸಶಕ್ತಗೊಳಿಸಲಿದೆ. ಜಿಕೆಎನ್ ಆಟೊಮೋಟಿವ್ ಜತೆಗಿನ ಸಹಭಾಗಿತ್ವದಿಂದಾಗಿ, ಸುಸ್ಥಿರ ಹಾಗೂ ಹಸಿರು ವಿಶ್ವವನ್ನು ಸಾಧಿಸಲು ನೆರವಾಗುವ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲು ಗಣನೀಯ ಕೊಡುಗೆ ನೀಡಲು ಸಾಧ್ಯವಾಗಲಿದೆ" ಎಂದು ಬಣ್ಣಿಸಿದರು.
ಜಿಕೆಎನ್ ಆಟೊಮೋಟಿವ್ನ ಸಿಇಓ ಲಿಯಾಮ್ ಬಟರ್ವರ್ಥ್, "ಇದು ಜಿಕೆಎನ್ ಆಟೊಮೋಟಿವ್ ಪಾಲಿಗೆ ಅತ್ಯಂತ ಮಹತ್ವದ ಉಪಕ್ರಮವಾಗಿದೆ. ಟಾಟಾ ಟೆಕ್ನಾಲಜೀಸ್ ಜತೆಗಿನ ಸಹಭಾಗಿತ್ವವು ನಮಗೆ ಭಾರತದಲ್ಲಿರುವ ವಿಶ್ವದರ್ಜೆಯ ಸಾಫ್ಟ್ ವೇರ್ ಎಂಜಿನಿಯರಿಂಗ್ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಟಾಟಾ ಟೆಕ್ನಾಲಜೀಸ್ನ ಉತ್ಪನ್ನ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮಹತ್ವದ ಹೆಜ್ಜೆ ಎನಿಸಲಿದೆ. ನಮ್ಮ ಇ-ಚಾಲನೆ ತಂತ್ರಜ್ಞಾನ ಹೀಗಾಗಲೇ ನಮ್ಮನ್ನು ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೆ ತಂದು ನಿಲ್ಲಿಸಿದ್ದು, ಈ ಉಪಕ್ರಮವು ನಮ್ಮ ಮತ್ತಷ್ಟು ಬೆಳವಣಿಗೆ ಮತ್ತು ವಿಸ್ತರಣೆಗೆ ಕಾರಣವಾಗಲಿದೆ ಹಾಗೂ ನಮ್ಮ ತಂತ್ರಜ್ಞಾನ ಸಾಮಥ್ರ್ಯವನ್ನು ಸುಧಾರಿಸಿಕೊಳ್ಳಲೂ ನೆರವಾಗಲಿದೆ" ಎಂದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications