ಸಿಂಡಿಕೇಟ್ ಬ್ಯಾಂಕಿನ ಷೇರು ಕುಸಿಯುತ್ತಿದೆ ಎಚ್ಚರ!
ಬೆಂಗಳೂರು, ಜುಲೈ 29: ಕರ್ನಾಟಕದ ಮಣಿಪಾಲ್ ಮೂಲದ ಸಿಂಡಿಕೇಟ್ ಬ್ಯಾಂಕಿಗೆ ಟೈಂ ಸರಿಯಿಲ್ಲ, ಸಿಂಡಿಕೇಟ್ ಬ್ಯಾಂಕ್ ಷೇರು ಹೊಂದಿರುವವರಿಗೂ ಇದು ಕೆಟ್ಟಕಾಲ. ಬ್ಯಾಂಕಿನ ಮೊದಲ ತ್ರೈಮಾಸಿಕ ಫಲಿತಾಂಶ ಡಲ್ ಆದ ಬೆನ್ನಲ್ಲೇ ಬುಧವಾರ ಷೇರುಗಳು ನೆಲಕ್ಕೆ ಕುಸಿಯುತ್ತಿವೆ.
ಸಿಂಡಿಕೇಟ್ ಬ್ಯಾಂಕ್ ತನ್ನ ಮೊದಲ ತ್ರೈಮಾಸಿಕ ವರದಿಯಲ್ಲಿ ಶೇ 38ರಷ್ಟು ನಿವ್ವಳ ಲಾಭದಲ್ಲಿ ನಷ್ಟ ಅನುಭವಿಸಿದೆ. ಹೀಗಾಗಿ ಬ್ಯಾಂಕಿನ ಷೇರುಗಳು ಬುಧವಾರ ಸುಮಾರು ಶೇ 9ರಷ್ಟು ಆರಂಭಿಕ ಕುಸಿತ ಕಂಡಿದೆ. ನಂತರ ಚೇತರಿಕೆಯ ಹಾದಿಯಲ್ಲಿದ್ದರೂ ಇಳಿಕೆ ಮುಂದುವರೆದಿದೆ.

ಬಿಎಸ್ ಇನಲ್ಲಿ 90.15ರು ಮೌಲ್ಯದಂತೆ 9.03% ಕುಸಿದಿದ್ದರೆ, ಎನ್ ಎಸ್ ಇನಲ್ಲಿ 9% ಕುಸಿತ ಕಂಡು 90 ರು ಆಸುಪಾಸಿನಲ್ಲಿ ವಹಿವಾಟು ನಡೆಸಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಈ ಪರಿಸ್ಥಿತಿ ಕಂಡು ಬಂದಿದ್ದು, ಕಳೆದ 52 ವಾರಗಳಲ್ಲೇ ಕಾಣದ ಕಡಿಮೆ ಮೊತ್ತಕ್ಕೆ ಷೇರುಗಳು ಕುಸಿದಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. [ಷೇರುಪೇಟೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ವಹಿವಾಟು ಅಂಕಿ ಅಂಶ]
ಸಿಂಡಿಕೇಟ್ ಬ್ಯಾಂಕಿನ ಮಾರುಕಟ್ಟೆ ಮೌಲ್ಯ ಕೂಡಾ 592.54 ಕೋಟಿ ರು ಕಳೆದುಕೊಂಡು 5,968.46 ಕೋಟಿ ರುಗೆ ಕುಸಿದಿದೆ.
ದೇಶದ ಅತ್ಯಂತ ಹಳೆಯ ವಾಣಿಜ್ಯ ಬ್ಯಾಂಕ್ ಗಳಲ್ಲಿ ಒಂದೆನಿಸಿರುವ ಸಿಂಡಿಕೇಟ್ ಬ್ಯಾಂಕ್ ತನ್ನ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ 301.98 ಕೋಟಿ ರು ನಂತೆ ಶೇ 38ರಷ್ಟು ಇಳಿಕೆ ಕಂಡಿತ್ತು. ಕಳೆದ ವರ್ಷ 2014-15ರಲ್ಲಿ ಏಪ್ರಿಲ್ -ಜೂನ್ ಅವಧಿಯಲ್ಲಿ 485.42 ಕೋಟಿ ರು ದಾಖಲಿಸಿತ್ತು.
ಜೂನ್ ತ್ರೈಮಾಸಿಕದಲ್ಲಿ 6,323.42 ಕೋಟಿ ರುಗೆ ಆದಾಯ ಏರಿಕೆಯಾಗಿದ್ದು ವರ್ಷದ ಕೆಳಗೆ 5,523 ಕೋಟಿ ರು ಪಡೆದುಕೊಂಡಿತ್ತು ಎಂದು ಬಿಎಸ್ ಇ ಗೆ ಸಂಸ್ಥೆ ತಿಳಿಸಿದೆ. (ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications