ಐಸಿಐಸಿಐ ಸಹಭಾಗಿತ್ವದಲ್ಲಿ 'ಸ್ವಿಗ್ಗಿ ಮನಿ' ಡಿಜಿಟಲ್ ವಾಲೆಟ್
ಬೆಂಗಳೂರು, ಜೂನ್ 30: ಭಾರತದಲ್ಲಿ ಮುಂಚೂಣಿಯಲ್ಲಿರುವ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್ ಫಾರ್ಮ್ ಸ್ವಿಗ್ಗಿ ತನ್ನದೇ ಆದ ಡಿಜಿಟಲ್ ವಾಲೆಟ್ 'ಸ್ವಿಗ್ಗಿ ಮನಿ'' ಪರಿಚಯಿಸಿದೆ. ಈ ಮೂಲಕ 'ಒಂದು ಕ್ಲಿಕ್ ಚೆಕೌಟ್ ಅನುಭವ'ವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ಈ ಸ್ವಿಗ್ಗಿ ಮನಿಯನ್ನು ಪರಿಚಯಿಸಲಾಗಿದ್ದು, ಸ್ವಿಗ್ಗಿಯ ಗ್ರಾಹಕರು ತಮ್ಮ ಹಣವನ್ನು ಈ ಪ್ಲಾಟ್ ಫಾರ್ಮ್ ನಲ್ಲಿ ಸಂಗ್ರಹಿಸಿಟ್ಟುಕೊಂಡು ಸ್ವಿಗ್ಗಿಯಲ್ಲಿನ ಎಲ್ಲಾ ಆಹಾರ ಪದಾರ್ಥಗಳ ಆರ್ಡರ್ ಗಳಿಗೆ ಬಳಸಿಕೊಳ್ಳಬಹುದಾಗಿದೆ.
ಐಸಿಐಸಿಐ ಬ್ಯಾಂಕಿನ ಇನ್ ಸ್ಟಾ ವಾಲೆಟ್ ಸರ್ವೀಸ್ ನಿಂದ ರಚಿಸಲಾಗಿರುವ ಈ ''ಸ್ವಿಗ್ಗಿ ಮನಿ''ಯನ್ನು ಎಪಿಐ ಇಂಟಗ್ರೇಷನ್ ನೊಂದಿಗೆ ಕ್ಲೌಡ್ ಪ್ಲಾಟ್ ಫಾರ್ಮ್ ನಲ್ಲಿ ರೂಪಿಸಲಾಗಿದೆ. ಇದು ಸ್ವಿಗ್ಗಿಯು ತನ್ನ ಗ್ರಾಹಕರಿಗೆ ಡಿಜಿಟಲ್ ವಾಲೆಟ್ ಅನ್ನು ತಕ್ಷಣವೇ ಸೃಷ್ಟಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಸ್ವಿಗ್ಗಿಯ ಗ್ರಾಹಕರು ಈಗಾಗಲೇ ಐಸಿಐಸಿಐ ಬ್ಯಾಂಕ್ ಗ್ರಾಹಕರಾಗಿದ್ದರೆ ಅವರು ತಕ್ಷಣವೇ ಈ ವಾಲೆಟ್ ಅನ್ನು ಬಳಸಬಹುದಾಗಿದೆ.
ಐಸಿಐಸಿಐ ಬ್ಯಾಂಕ್ ಗ್ರಾಹಕರಲ್ಲದವರು ಐಸಿಐಸಿಐ ಬ್ಯಾಂಕಿಗೆ ಸರ್ಕಾರ ನೀಡಿರುವ ಗುರುತಿನ ಚೀಟಿ ಮತ್ತು ಇತರೆ ವಿವರಗಳನ್ನು ನೀಡುವುದರೊಂದಿಗೆ ತಕ್ಷಣ ವಾಲೆಟ್ ಬಳಸಲು ಆರಂಭಿಸಬಹುದಾಗಿದೆ. ಅತ್ಯುತ್ತಮ ಕಾರ್ಯದಕ್ಷತೆ, ತ್ವರಿತವಾಗಿ ವ್ಯವಹಾರ ನಡೆಸಬಹುದು ಮತ್ತು ಇತರರಿಗಿಂತ ಅತ್ಯಂತ ವೇಗದಲ್ಲಿ ಕಾರ್ಯನಿರ್ವಹಣೆ ಮಾಡುವುದು ಸೇರಿದಂತೆ ಇನ್ನಿತರೆ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ.

ಸ್ವಿಗ್ಗಿ ಮನಿ' ಆಯ್ಕೆ ಮಾಡಿಕೊಳ್ಳುವ ಬಳಕೆದಾರರಿಗೆ ಇನ್ ಸ್ಟಂಟ್ ರೀಫಂಡ್ಸ್ ಮತ್ತು ಸುಲಭದ ಚೆಕೌಟ್ ಗಳು ಹಾಗೂ ಭವಿಷ್ಯದ ಫುಡ್ ಆರ್ಡರ್ ಗಳಿಗೆ ತಡೆರಹಿತವಾದ ಪಾವತಿ ಪ್ರಕ್ರಿಯೆಗಳನ್ನು ಪಡೆಯಬಹುದಾಗಿದೆ. ಸ್ವಿಗ್ಗಿ ಮನಿ' ಬಳಕೆದಾರರು ವಿವಿಧ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ತಮ್ಮ ವಾಲೆಟ್ ಅನ್ನು ಟಾಪ್ ಅಪ್ ಮಾಡಿಕೊಳ್ಳಬಹುದಾಗಿದೆ ಹಾಗೂ ಯಾವುದೇ ಬಹು ದೃಢೀಕರಣಗಳು ಇಲ್ಲದೇ ಒಂದೇ ಕ್ಲಿಕ್ ನಲ್ಲಿ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ಒಂದು ವೇಳೆ ವಾಲೆಟ್ ನಲ್ಲಿರುವ ಬ್ಯಾಲೆನ್ಸ್ ಗಿಂತ ಆರ್ಡರ್ ಮಾಡಿದ ಮೊತ್ತ ಹೆಚ್ಚಾದರೆ ಬಳಕೆದಾರರಿಗೆ ಸ್ಪ್ಲಿಟ್-ಪೇ' ಆಯ್ಕೆಯನ್ನು ನೀಡಲಾಗುತ್ತದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications