ಬೆಂಗಳೂರಿನ ಬಾಷ್ ಘಟಕದಲ್ಲಿ ಮುಷ್ಕರ
ಬೆಂಗಳೂರು, ಸೆ.16: ಅಟೋಮೋಟಿವ್ ಹಾಗೂ ಕೈಗಾರಿಕಾ ಉತ್ಪನ್ನ ಸೇವಾ ಸಂಸ್ಥೆ ಬಾಷ್ ನ ಬೆಂಗಳೂರು ಘಟಕದ ಕಾರ್ಮಿಕರು ಮುಷ್ಕರ ಹೂಡಿದ್ದಾರೆ. ಈ ಬಗ್ಗೆ ಬಾಂಬೆ ಷೇರು ವಿನಿಮಯ ಕೇಂದ್ರಕ್ಕೆ ಬಾಷ್ ಸಂಸ್ಥೆ ಮಾಹಿತಿ ನೀಡಿದೆ.
ಸೆ.16ರಿಂದ ಮುಷ್ಕರ ಹೂಡಲು ಯೂನಿಯನ್ ನಿರ್ಧರಿಸಿದೆ. ಅದರೆ, ಕಾರ್ಮಿಕರ ಒಕ್ಕೂಟ ಮುಂದಿಟ್ಟಿರುವ ಬೇಡಿಕೆಗಳು ಈಡೇರಿಸಲು ಕಷ್ಟಸಾಧ್ಯ. ಹಾಗೂ ಮುಷ್ಕರ ಕೂಡಾ ಅಕ್ರಮವಾಗಿದೆ ಎಂದು ಬಾಷ್ ಸಂಸ್ಥೆ ವಕ್ತಾರರು ಹೇಳಿದ್ದಾರೆ. ಕಾರ್ಮಿಕರ ಒಕ್ಕೂಟದ ಜೊತೆ ಮಾತುಕತೆ ಜಾರಿಯಲ್ಲಿದೆ. ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತರ ಮಧ್ಯಸ್ಥಿಕೆಯಲ್ಲಿ ಕಾರ್ಮಿಕರನ್ನು ಒಲಿಸಿಕೊಳ್ಳಲು ಬಾಷ್ ಸಂಸ್ಥೆ ಯತ್ನಿಸುತ್ತಿದೆ.
ಬಿಎಸ್ಇನಲ್ಲಿ ಮಂಗಳವಾರ ಮಧ್ಯಾಹ್ನ 12.56ರ ವೇಳೆಗೆ ಬಾಷ್ ಸಂಸ್ಥೆ ಷೇರುಗಳು 15074.00 ಮುಖಬೆಲೆಯಂತೆ ಶೇ 1.73 ರಷ್ಟು ಜಿಗಿತ ಕಂಡಿತ್ತು. ಇದೇ ಸಮಯಕ್ಕೆ ಎನ್ಎಸ್ಇಯಲ್ಲಿ 15050.00 ರು ನಂತೆ ಶೇ 1.09ರಷ್ಟು ಏರಿಕೆ ಕಂಡಿತ್ತು. ಬೆಂಗಳೂರು ಘಟಕದ ಮುಷ್ಕರದ ಬಿಸಿ ಷೇರುಗಳಿಗೆ ತಟ್ಟಿದ್ದಂತೆ ಕಾಣುತ್ತಿಲ್ಲ.

ಐಟಿ ಬಿಟಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ಹೊರಗುತ್ತಿಗೆ ಜಾಡ್ಯವನ್ನು ಆಟೋಮೊಬೈಲ್ ಕ್ಷೇತ್ರದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿರುವ ಬಾಷ್ ಕಂಪನಿ ಮ್ಯಾನೇಜ್ಮೆಂಟ್ ವಿರುದ್ಧ ನೌಕರರು ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಆದರೆ, 1992ರಲ್ಲಿ ನೌಕರರ ಯೂನಿಯನ್ ಜೊತೆ ಮ್ಯಾನೇಜ್ಮೆಂಟ್ ಮಾಡಿಕೊಂಡ ಒಪ್ಪಂದವನ್ನು ಮೀರಿಲ್ಲ ಎಂದು ಸಂಸ್ಥೆ ಹೇಳಿದೆ.
ಬಾಷ್ ಸಮೂಹದಲ್ಲಿ ರಾಬರ್ಟ್ ಬಾಷ್ GmbH ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. 60 ದೇಶಗಳಲ್ಲಿ ಸುಮಾರು 300,000 ಉದ್ಯೋಗಿಗಳನ್ನು ಸಂಸ್ಥೆ ಹೊಂದಿದೆ. ಅದರೆ, ಬಾಷ್ ಸಂಸ್ಥೆಯ ಹೂಡಿಕೆ, ವಿಸ್ತರಣಾ ಯೋಜನೆಯ ಲಾಭ ಮಹಾರಾಷ್ಟ್ರದ ನಾಸಿಕ್ ಘಟಕಕ್ಕೆ ಸಿಕ್ಕಿದೆ. ಬದಲಿಗೆ ಬೆಂಗಳೂರಿನ ಘಟಕ ಕಡೆಗಣಿಸಲಾಗಿದೆ ಎಂದು ತಿಳಿದು ಬಂದಿದೆ.
ಜರ್ಮನಿ ಮೂಲದ ಬಾಷ್ ಕಂಪನಿ ಇತ್ತೀಚೆಗೆ ಆಟೋಮೊಬೈಲ್ ಕ್ಷೇತ್ರದಿಂದ ಇತರೆ ಕ್ಷೇತ್ರಕ್ಕೂ ಜಿಗಿದಿದೆ. ಸಿಮನ್ಸ್ ಗೃಹೋಪಯೋಗಿ ಸಮೂಹದ ಜೊತೆ ಕೈ ಜೋಡಿಸಿ ತಮಿಳುನಾಡಿನಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ಕಣ್ಣಿನ ಪರೀಕ್ಷೆ ಸಾಧನಗಳನ್ನು ತಯಾರಿಸಲು ಬಾಷ್ ಮುಂದಾಗಿದ್ದು, ಸೀಮನ್ಸ್, ಜಿಇ, ಫಿಲಿಫ್ಸ್ ಕಂಪನಿಗಳ ಸಾಲಿಗೆ ಸೇರುತ್ತಿದೆ.
ಬಾಷ್ ಕಂಪನಿಗೆ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಿಂದ ಶೇ 84ರಷ್ಟು ಆದಾಯ ಬರುತ್ತಿದ್ದರೆ, ಉಳಿದ 16% ಪ್ಯಾಕೇಜಿಂಗ್, ಇಂಧನ, ಪವರ್ ಟೂಲ್ಸ್, ಇಲೆಕ್ಟ್ರಾನಿಕ್ ಸಾಧನ ಇನ್ನಿತರ ಕ್ಷೇತ್ರಗಳಿಂದ ಗಳಿಸುತ್ತಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications