Gold Silver Price: ಇಂದು ಬೆಳ್ಳಿ ದರ ದಾಖಲೆಯ ರೂ.50,000 ಕುಸಿತ, ಚಿನ್ನ ಇಳಿಕೆ ಆಗಿದ್ದೆಷ್ಟು? ಅಪ್ಡೇಟ್ಸ್
ಬೆಂಗಳೂರು: ಕೆಲವು ವಾರಗಳಿಂದ ನಿರಂತರವಾಗಿ ಏರುಗತ್ತಿಯನ್ನು ಮಾತ್ರವೇ ಕಂಡಿದ್ದ ಚಿನ್ನ-ಬೆಳ್ಳಿ ದರದಲ್ಲಿ ಮಹಾಕುಸಿತ ಸಂಭವಿಸಿದೆ. ಅದರಲ್ಲೂ ಒಂದೇ ದಿನಕ್ಕೆ ಬಿಳಿ ಲೋಹ ಬೆಳ್ಳಿ ದರವು ಬರೋಬ್ಬರಿ 50,000 ರೂಪಾಯಿ ಇಳಿಕೆ ಆಗಿದ್ದು, ಹೂಡಿಕೆದಾರರಿಗೆ ಶಾಕ್ ನೀಡಿದೆ. ಈ ಮೂಲಕ ಗ್ರಾಹಕರಿಗೆ ನಿಟ್ಟುಸಿರುವ ಬಿಡುವಂತಾಗಿದೆ. ಬೆಳ್ಳಿ ಐದು ದಿನದ ಹಿಂದೆ 4.10 ಲಕ್ಷ ರೂಪಾಯಿಗೆ ಏರಿಕೆ ಆಗಿತ್ತು. ಚಿನ್ನ ಬೆಳ್ಳಿಯ ಹೊಸ ದರದ ಮಾಹಿತಿ ಮುಂದಿದೆ.
ಜನವರಿ 30ರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಇಂದು ಫೆಬ್ರವರಿ 02ರಂದು ಸತತ ನಾಲ್ಕನೇ ದಿನವೂ ಬೆಳ್ಳಿ ಇಳಿಕೆಯ ಹಾದಿ ಹಿಡಿದಿದೆ. ಬೆಳ್ಳಿ ರೋಬ್ಬರಿ 50,000 ರೂಪಾಯಿ ಕುಸಿಯುವ ಮೂಲಕ ಒಂದು ಕೆಜಿಯ ದರವು 3,00,000 ರೂಪಾಯಿ ತಲುಪಿದೆ. ಈ ಹೊಸ ದರದಲ್ಲಿ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದ್ದು, ಅಧಿಕ ಲಾಭದ ಆಸೆಗೆ ಹೂಡಿಕೆ ಮಾಡಿದ್ದ ಹೂಡಿಕೆದಾರರು ನಾಲ್ಕು ದಿನದಿಂದ ನಷ್ಟಕ್ಕೀಡಾಗಿದ್ದಾರೆ. ಕೆಲವರು ಬೆಳ್ಳಿ, ಚಿನ್ನದ ಸಹವಾಸ ಸಾಕೆಂದು ಹೂಡಿಕೆಯನ್ನು ಹಿಂಪಡೆಯುತ್ತಿರುವುದು ಸಾಮಾನ್ಯವಾಗಿದೆ. ಗ್ರಾಹಕರಿಗೆ ದರ ಇಳಿಕೆ ಕೊಂಚ ನೆಮ್ಮದಿ ನೀಡಿದೆ.

ಇಂದು ಚಿನ್ನದ ಬೆಲೆ ಎಷ್ಟಿದೆ? ಇಳಿಕೆ ಆಗಿದ್ದೆಷ್ಟು?
ಇನ್ನೂ 24 ಕ್ಯಾರಟ್ ಅಪರಂಜಿ ಚಿನ್ನದ 10 ಗ್ರಾಂ ದರ ಇಂದು ಸೋಮವಾರ ಮತ್ತೆ 9050 ರೂಪಾಯಿ ಕುಸಿಯುವ ಮೂಲಕ 1,51,530 ರೂಪಾಯಿಗೆ ತಲುಪಿದೆ. ನೆನ್ನೆ ಭಾನುವಾರ (ಫೆಬ್ರವರಿ 1) ಇದರ ದರ 1,60, 580 ರೂಪಾಯಿ ಇತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಆಗುವ ಮುನ್ಸೂಚನೆ ಇದೆ.
22 ಕ್ಯಾರಟ್ ಆಭರಣ ಚಿನ್ನದ 10ಗ್ರಾಂ ಬೆಲೆ 8,300 ರೂಪಾಯಿ ಕುಸಿತ ಕಾಣುವ ಮೂಲಕ 1,38, ರೂಪಾಯಿಗೆ ಮುಟ್ಟಿದೆ. ಇದರ ಬೆಲೆ ನೆನ್ನೆ ಫೆಬ್ರವರಿ 1ರಂದು 1,47,200 ರೂಪಾಯಿ ಇತ್ತು. ಈ ಒಂದೇ ದಿನದಲ್ಲಿ ಭಾರೀ ಪ್ರಮಾಣದಲ್ಲಿ ಈ ಲೋಹಗಳ ದರದಲ್ಲಿ ವ್ಯತ್ಯಾಸವಾಗಿದೆ. ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ, ಹೂಡಿಕೆ, ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಚಿನ್ನದ ದರ ಇಳಿಕೆ ವಿವರ
ಜನವರಿ 30: 24k 1ಗ್ರಾಂ ದರ 965 ರೂ. ಇಳಿಕೆ, 22k 1ಗ್ರಾಂ ಬೆಲೆ 885 ರೂ.
ಜನವರಿ 31: 24k 1ಗ್ರಾಂ ದರ 862 ರೂ. ಇಳಿಕೆ, 22k 1ಗ್ರಾಂ ಬೆಲೆ 790 ರೂ.
ಫೆಬ್ರವರಿ 02: 24k 1ಗ್ರಾಂ ದರ 905 ರೂ. ಇಳಿಕೆ, 22k 1ಗ್ರಾಂ ಬೆಲೆ 830 ರೂ.
-
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
RCB: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಆಯೋಜನೆಗೆ ಆರ್ಸಿಬಿ ಒಪ್ಪಿಗೆ -
Dharavi Slum: ಏಷ್ಯಾದ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಬಡತನವೂ ಬಂಡವಾಳ, ಧಾರಾವಿ ಸಂಪೂರ್ಣ ವಿವರ ಇಲ್ಲಿದೆ -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್












Click it and Unblock the Notifications