ದುಬೈನಲ್ಲಿ ಶಾರುಖ್ ಖಾನ್, ಗೌರಿ ಖಾನ್ ಅವರಿಗಿದೆ 18,000 ಕೋಟಿ ರೂ. ಉದ್ಯಮ, ಇಲ್ಲಿದೆ ವಿವರ
ನವದೆಹಲಿ, ಅಕ್ಟೋಬರ್ 04: ಬಾಲಿವುಡ್ನ ಸೂಪರ್ಸ್ಟಾರ್ ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ, ಚಿತ್ರ ನಿರ್ಮಾಪಕಿ ಗೌರಿ ಖಾನ್ ಒಟ್ಟಿಗೆ ಅನೇಕ ವ್ಯಾಪಾರ ವಹಿವಾಟುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಅತ್ಯಂತ ಲಾಭದಾಯಕವಾಗಿದ್ದು, ಅದರರೊಂದಿಗೆ ಅವರು ದುಬೈನಲ್ಲಿ ಉದ್ಯಮವನ್ನು ನಡೆಸುತ್ತಿದ್ದಾರೆ.
2008 ರಲ್ಲಿ ಶಾರುಖ್ ಖಾನ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ದುಬೈನಲ್ಲಿ ಶತಕೋಟಿ ಮೌಲ್ಯದ ಬೀಚ್ನ ಮುಂಭಾಗದಲ್ಲಿ ಐಷಾರಾಮಿ ವಸತಿ ಸಂಕೀರ್ಣ ನಿರ್ಮಾಣದ ಬೃಹತ್ ಯೋಜನೆಯನ್ನು ಪ್ರಾರಂಭಿಸಲು ಹೊಸ ಉದ್ಯಮವನ್ನು ಆರಂಭಿಸಿದರು.

ಶಾರುಖ್ ಖಾನ್ ಅವರು 2012 ರಲ್ಲಿ ಸಿಗ್ನೇಚರ್ ಬೀಚ್ಫ್ರಂಟ್ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದರು. ಈ ಪ್ರದೇಶಕ್ಕೆ ಅವರದೇ ಹೆಸರನ್ನು ಇಟ್ಟು ಎಸ್ಆರ್ಕೆ ಬೌಲೆವಾರ್ಡ್ ಎಂದು ಕರೆಯಲಾಯಿತು. ಕಿಂಗ್ ಖಾನ್ ಅವರ ಚಲನಚಿತ್ರಗಳು ಯುಎಇಯಲ್ಲಿ ಪಡೆದ ಎಲ್ಲಾ ಪ್ರೀತಿಗಾಗಿ ಅವರಿಗೆ ಗೌರವಾರ್ಥವಾಗಿ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಯಿತು.
ಎಸ್ಆರ್ಕೆ ಬೌಲೆವಾರ್ಡ್ ರಾಸ್ ಅಲ್ ಖೈಮಾದ ಡಾನಾ ದ್ವೀಪಗಳಲ್ಲಿ ದುಬೈನ ಐಷಾರಾಮಿ ಪ್ರದೇಶದಲ್ಲಿದೆ. ಬ್ರಾಡ್ ಪಿಟ್, ಬೋರಿಸ್ ಬೆಕರ್ ಮತ್ತು ಟೈಗರ್ ವುಡ್ಸ್ ನಂತಹ ದೊಡ್ಡ ಕಂಪನಿಗಳು ಸಹ ಇದೇ ರೀತಿಯ ಒಪ್ಪಂದಗಳನ್ನು ಇಲ್ಲಿ ಮಾಡಿಕೊಂಡಿವೆ. ನಟ ಶಾರುಖ್ ಖಾನ್ ಕೂಡ ಅದೇ ಮಾದರಿಯಲ್ಲಿ ಉದ್ಯಮ ಆರಂಭಿಸಿದ್ದಾರೆ.
ಶಾರುಖ್ ಖಾನ್ ಬೌಲೆವಾರ್ಡ್ ದುಬೈನ ಐಷಾರಾಮಿ ಮತ್ತು ಉನ್ನತ ಮಟ್ಟದ ಕಮ್ಯೂನಿಟಿಯನ್ನು ಸೃಷ್ಟಿಸುವ ಐಷಾರಾಮಿ ಬೀಚ್ಫ್ರಂಟ್ ಪ್ರದೇಶದಲ್ಲಿ 10 ವಸತಿ ಕಟ್ಟಡಗಳ ಗುಂಪಾಗಿದೆ. ದುಬೈನಲ್ಲಿ ಶಾರುಖ್ ಖಾನ್ ಅವರ ಯೋಜನೆಯು USD 2.17 ಮಿಲಿಯನ್ ವೆಚ್ಚವನ್ನು ಹೊಂದಿತ್ತು, ಅದು 18,000 ಕೋಟಿ ರೂ. ಮೌಲ್ಯದ್ದಾಗಿದೆ.
ಬಾಲಿವುಡ್ ಸೂಪರ್ಸ್ಟಾರ್ ವಸತಿ ಪ್ರದೇಶದ ಯೋಜನೆಯನ್ನು ವಿನ್ಯಾಸಗೊಳಿಸಲು ಲಾಸ್ ಏಂಜಲೀಸ್ ವಾಸ್ತುಶಿಲ್ಪಿ ಟೋನಿ ಆಶೈ ಅವರೊಂದಿಗೆ ಕೈಜೋಡಿಸಿದರು. ಶಾರುಖ್ ಅವರ ಪತ್ನಿ ಗೌರಿ ಖಾನ್ ಅವರು ಕೂಡ ಪ್ರಸಿದ್ಧ ಒಳಾಂಗಣ ವಿನ್ಯಾಸಗಾರರೂ ಆಗಿದ್ದು, ಕಟ್ಟಡಗಳು ಮತ್ತು ಮನೆಗಳ ಒಳಾಂಗಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications