Dyavol Spirits: ರಾಡಿಕೊ ಖೈತಾನ್ ಜೊತೆ ಶಾರುಖ್ ಖಾನ್: SLAB ವೆಂಚರ್ಸ್ ‘ಡಿ’ಯಾವೋಲ್ ಸ್ಪಿರಿಟ್ಸ್’ ನಲ್ಲಿ 40 ಕೋಟಿ ಹೂಡಿಕೆ!
Dyavol Spirits: ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರು ಹೊಸ ಸಾಹಸವೊಂದಕ್ಕೆ ಕೈಹಾಕಿದ್ದಾರೆ. ಭಾರತದಲ್ಲಿ ಪ್ರಸಿದ್ಧಿ ಗಳಿಸಿರುವ ಮದ್ಯಪಾನ ಸಂಸ್ಥೆ ರಾಡಿಕೊ ಖೈತಾನ್ ಆಲ್ಕೋಬೆವ್ ಕಂಪನಿ 'ಡಿ'ಯಾವೋಲ್ ಸ್ಪಿರಿಟ್ಸ್'ದಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇದರಲ್ಲಿ ನಟ ಶಾರುಖ್ ಖಾನ್, ಅವರ ಮಗ ಆರ್ಯನ್ ಹಾಗೂ ಜೆರೋಧಾ ಬ್ರೋಕರೇಜ್ನ ನಿಖಿಲ್ ಕಾಮತ್ ಅವರು ಕೈ ಜೋಡಿಸಿದ್ದು. ಹೊಸ ಉದ್ಯಮ ಪ್ರಾರಂಭಿಸಿದ್ದಾರೆ.
ಡಿ'ಯಾವೋಲ್ ಬಿವಿ ಮತ್ತು ಡಿ'ಯಾವೋಲ್ ಇಂಡಿಯಾದಲ್ಲಿ ಶೇ. 47.5 ರಷ್ಟು ಷೇರು ಪಾಲನ್ನು ಪಡೆಯುವ ಉದ್ದೇಶದಿಂದ ರಾಡಿಕೊ ಖೈತಾನ್ ಬರೋಬ್ಬರಿ 40 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಅಲ್ಲದೇ ಇದು ಅತಿದೊಡ್ಡ ಷೇರು ಪ್ರಮಾಣವಾಗಿದೆ ಎಂದು ಹೇಳಲಾಗಿದೆ.

ರಾಡಿಕೊ ಖೈತಾನ್ ಶಾರುಖ್ ಖಾನ್, ಅವರ ಮಗ ಆರ್ಯನ್ ಹಾಗೂ ನಿಖಿಲ್ ಕಾಮತ್ ಅವರು ಶೇ. 47.5 ರಷ್ಟು ಪಾಲನ್ನು ಪಡೆಯುವುದಕ್ಕೆ 40 ಕೋಟಿ ಹೂಡಿಕೆ ಮಾಡುವುದರೊಂದಿಗೆ ಡಿ'ಯಾವೋಲ್ ಸ್ಪಿರಿಟ್ಸ್ ಎಂಬ ಹೊಸ ಉದ್ಯಮವನ್ನು ಘೋಷಿಸಿದ್ದಾರೆ. ಐಷಾರಾಮಿ ಬ್ರ್ಯಾಂಡ್ ಶೀಘ್ರದಲ್ಲೇ ರಾಡಿಕೊದ ವಿತರಣೆ ಹಾಗೂ ಡಿ'ಯಾವೋಲ್ ತಂಡದ ಹೊಸ ಸ್ಟೈಲ್ ಬಳಸಿಕೊಂಡು ಟಕಿಲಾವನ್ನು ಬಿಡುಗಡೆ ಮಾಡಲಿದೆ. ಈ ಸಂಸ್ಥೆಯು ಮದ್ಯ ಪ್ರಿಯರಿಗೆ ಖುಷಿ ಸುದ್ದಿ ಕೊಟ್ಟಿದ್ದು ಟಕಿಲಾ, ಸ್ಕಾಚ್ ಸೇರಿದಂತೆ ಪ್ರೀಮಿಯಂ ಸ್ಪಿರಿಟ್ಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದನ್ನು ಗುರಿ ಹಾಕಿಕೊಂಡಿರುವುದಾಗಿ ಹೇಳಿದೆ.
ಶಾರುಖ್ ಖಾನ್ ತಮ್ಮ ಮಗ ಆರ್ಯನ್ ಅವರೊಂದಿಗೆ ಡಿ'ಯಾವೋಲ್ ಅನ್ನು ಐಷಾರಾಮಿ ಬ್ರಾಂಡ್ ಆಗಿ ಪ್ರಾರಂಭಿಸಿದ್ದರು. ಇನ್ನು ಶಾರುಖ್ ಖಾನ್ ಅವರ ಮಗ ಆರ್ಯನ್ ಈಗಾಗಲೇ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ತಂದೆಯೊಂದಿಗೆ ಸೇರಿ ಮತ್ತೊಂದು ಹೊಸ ಉದ್ಯಮವನ್ನು ಶುರು ಮಾಡಿದ್ದಾರೆ. ಈ ಹೊಸ ಉದ್ಯಮವು ರಾಡಿಕೊದ ವಿತರಣೆ ಹಾಗೂ ಮಾರುಕಟ್ಟೆ ಮತ್ತು ಡಿ'ಯಾವೋಲ್ ತಂಡದ ಸ್ಕಿಲ್ ಒಳಗೊಂಡಿರಲಿದೆ. ಶೀಘ್ರದಲ್ಲೇ ಐಷಾರಾಮಿ ಟಕಿಲಾವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ರಾಡಿಕೊ ಖೈತಾನ್ನ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಖೈತಾನ್, ಐಷಾರಾಮಿ ಸ್ಪಿರಿಟ್ಸ್ ವಿಭಾಗದಲ್ಲಿ ಕಂಪನಿಗೆ ಇದು ದೀರ್ಘಾವಧಿಯ ಹೂಡಿಕೆಯಾಗಿದೆ ಎಂದಿದ್ದಾರೆ.
ಈ ಪಾಲುದಾರಿಕೆಯು ದೈನಂದಿನ, ಪ್ರಸ್ತುತ ಹಾಗೂ ಭವಿಷ್ಯದ ಸವಾಲನ್ನು ಎದುರಿಸುವ ಹಾಗೂ ಏನನ್ನಾದರೂ ಹೊಸದನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಬಾಲಿವುಡ್ ನಟ ಹಾಗೂ ಉದ್ಯಮಿ ಶಾರುಖ್ ಖಾನ್ ಅವರು ಹೇಳಿದ್ದಾರೆ. ಆದರೆ, ಅವರ ಮಗ ಆರ್ಯನ್ ಹೊಸ ಬ್ರ್ಯಾಂಡ್ ಅನ್ನು ನಿರ್ಮಿಸುವುದು ಮಹತ್ವಾಕಾಂಕ್ಷೆಯನ್ನು ಹಾಕಿಕೊಂಡಿರುವುದಾಗಿ ಹೇಳಿದ್ದಾರೆ.
ಬ್ರ್ಯಾಂಡ್ ಜಗತ್ತಿನ ಪ್ರಮುಖ ಎಲ್ಲಾ ಪ್ರದೇಶಗಳಲ್ಲೂ ಪ್ರಾರಂಭಿಸುವ ಉದ್ದೇಶವನ್ನು ಹೊಂದಿರುವುದಾಗಿ ಕಾಮತ್ ಅವರು ಹೇಳಿದ್ದಾರೆ. ಪ್ರೀಮಿಯಂ ಆಲ್ಕೋಹಾಲ್ ಹೊಸ ಇತಿಹಾಸ ಸೃಷ್ಟಿ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ











Click it and Unblock the Notifications