ಬಜೆಟ್ 2021: ಕರೆನ್ಸಿ ನೋಟುಗಳ ರದ್ದು ಬಗ್ಗೆ ಆರ್ಬಿಐ ಸ್ಪಷ್ಟನೆ
ನವದೆಹಲಿ, ಜನವರಿ 22: ನಕಲಿ ನೋಟುಗಳ ಹಾವಳಿ, ಹಳೆ ನೋಟು, ನಾಣ್ಯಗಳ ಚಲಾವಣೆ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರ ಅಪನಗದೀಕರಣವನ್ನು ಮತ್ತೊಮ್ಮೆ ಜಾರಿಗೆ ತರುತ್ತಿಲ್ಲ. 100 ರೂಪಾಯಿ ಮುಖಬೆಲೆಯ ಹಳೆ ಕರೆನ್ಸಿ ನೋಟುಗಳ ಚಲಾವಣೆಯನ್ನು ಹಂತಹಂತವಾಗಿ ಹಿಂಪಡೆಯಲು ನಿರ್ಧರಿಸಲಾಗಿದೆ. ಮಾರ್ಚ್ ತಿಂಗಳ ನಂತರ ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂದು ಆರ್ ಬಿ ಐ ಸಹಾಯಕ ಮಹಾಪ್ರಬಂಧಕ ಬಿಎಂ ಮಹೇಶ್ ಹೇಳಿದ್ದಾರೆ.
ಹಳೆ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು, ಹೊಸ ನೋಟು ಚಲಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹೇಶ್ ಹೇಳಿದರು.

100 ರೂಪಾಯಿ ಮುಖಬೆಲೆಯ ನೋಟುಗಳು ಕಳೆದ ಆರು ವರ್ಷಗಳಿಂದ ಮುದ್ರಣವಾಗುತ್ತಿಲ್ಲ. 100 ರೂ. ಮುಖಬೆಲೆಯ ಹೊಸ ನೋಟುಗಳು ಚಲಾವಣೆಯಲ್ಲಿರುತ್ತವೆ, ಹಳೆ ನೋಟುಗಳನ್ನು ಆರ್ ಬಿಐನಲ್ಲಿ ಬದಲಾಯಿಸಿಕೊಳ್ಳಬಹುದು ಎಂದರು.
100ರು, 10 ರು ಹಾಗೂ 5 ರು ನೋಟು, ನಾಣ್ಯಗಳನ್ನು ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ರದ್ದಾಗಲಿವೆ. 10 ರು ನಾಣ್ಯ ಚಲಾವಣೆಗೊಂಡು 15 ವರ್ಷ ಕಳೆದರೂ ಇನ್ನೂ ನಕಲಿ ನಾಣ್ಯದ ಸುಳ್ಳು ಸುದ್ದಿ ಹಬ್ಬುತ್ತಲೇ ಇದೆ. ಆರ್ ಬಿಐ ಅತ್ಯಂತ ತಲೆ ನೋವು ತಂದ ನಾಣ್ಯವೆಂದರೆ 10 ರು ಕಾಯಿನ್. ಹಲವು ಬಾರಿ ಈ ಬಗ್ಗೆ ಸ್ಪಷ್ಟನೆ ಕೊಟ್ಟರೂ ಗಾಳಿಸುದ್ದಿ ನಂಬಿ ಬ್ಯಾಂಕಿಗೆ 10 ರು ನಾಣ್ಯ ಹಿಂತಿರುಗಿಸಿದ್ದರಿಂದ ರಾಶಿಗಟ್ಟಲೆ ಸಂಗ್ರಹವಾಗಿದೆ.
Recommended Video
2019ರಲ್ಲಿ ಲ್ಯಾವೆಂಡರ್ ಬಣ್ಣದಲ್ಲಿ 100 ರು ನೋಟು ಗುಜರಾತಿನ ಪಠಾಣ್ ಸರಸ್ವತಿ ನದಿ ರಾಣಿ ಕಿ ವಾವ್ ಚಿತ್ರ ಇತ್ತು. ಆದರೆ, ಇದು ನಕಲಿ ನೋಟು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಚಲಾವಣೆಯಲ್ಲಿ ವ್ಯತ್ಯಯ ಉಂಟಾಯಿತು ಎಂದರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications