ನವೆಂಬರ್ನಲ್ಲಿ ಪ್ರಮುಖ ಕಂಪನಿಗಳ ಕಾರುಗಳ ಮಾರಾಟದಲ್ಲಿ ಹೆಚ್ಚಳ: ಟಾಟಾ ಮೋಟಾರ್ಸ್ ಶೇ. 26ರಷ್ಟು ಏರಿಕೆ
ನವದೆಹಲಿ, ಡಿಸೆಂಬರ್ 01: ನವೆಂಬರ್ ತಿಂಗಳಿನಲ್ಲಿ ಮಾರುತಿ ಸೇರಿದಂತೆ ಇತರೇ ಕಾರು ಕಂಪನಿಗಳು ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಮಾರುತಿ, ಮಹೀಂದ್ರಾ ಮತ್ತು ಇತರ ಹಲವು ಕಂಪನಿಗಳ ಮಾರಾಟವು 2019 ರ ನವೆಂಬರ್ಗೆ ಹೋಲಿಸಿದರೆ 2020ರ ನವೆಂಬರ್ನಲ್ಲಿ ಹೆಚ್ಚಳವನ್ನು ದಾಖಲಿಸಿದೆ.
ಮೊದಲನೆಯದಾಗಿ, ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಕಳೆದ ತಿಂಗಳು ತನ್ನ ಮಾರಾಟವನ್ನು ಶೇಕಡಾ 1.7 ರಷ್ಟು ಹೆಚ್ಚಿಸಿದೆ. ಮಾರುತಿ ಹಿಂದಿನ ತಿಂಗಳಲ್ಲಿ 1,53,223 ವಾಹನಗಳನ್ನು ಮಾರಾಟ ಮಾಡಿದ್ದು, 2019 ರ ನವೆಂಬರ್ನಲ್ಲಿ 150,630 ಮಾರಾಟವಾಗಿದೆ.

ಮಾರುತಿ ದೇಶೀಯ ಮಾರಾಟ 1.44 ಲಕ್ಷಕ್ಕೆ ಏರಿಕೆ
ಆದಾಗ್ಯೂ, ಹಬ್ಬದ ಋತುವಿನ ಪ್ರಕಾರ, ಈ ಸಂಖ್ಯೆಗಳು ಅಂದಾಜಿನ ಪ್ರಕಾರ ಇರುವುದಿಲ್ಲ. ಇದರ ದೇಶೀಯ ಮಾರಾಟವು 1.43 ಲಕ್ಷ ಯುನಿಟ್ಗಳಿಂದ 1.44 ಲಕ್ಷ ಯುನಿಟ್ಗಳಷ್ಟಿತ್ತು. ಇದರ ನಡುವೆ ರಫ್ತು ಶೇಕಡಾ 29.7 ರಷ್ಟು ಏರಿಕೆಯಾಗಿದೆ. ಆದರೆ ದೇಶೀಯ ಪ್ರಯಾಣಿಕರ ಕಾರು ಮಾರಾಟವು ಶೇ. 2.4ರಷ್ಟು ಇಳಿದು 1.35 ಲಕ್ಷಕ್ಕೆ ತಲುಪಿದೆ.

ಮಹೀಂದ್ರಾ ಕಾರುಗಳ ಮಾರಾಟವು ಶೇಕಡಾ 4 ರಷ್ಟು ಹೆಚ್ಚಳ
ಇನ್ನು ಮಹೀಂದ್ರಾ ಮತ್ತು ಮಹೀಂದ್ರಾ ಪ್ರಕಾರ, 2020 ರ ನವೆಂಬರ್ ತಿಂಗಳಲ್ಲಿ ಅದರ ಒಟ್ಟು ವಾಹನ ಮಾರಾಟ 42,731 ಯುನಿಟ್ಗಳಾಗಿವೆ. ಕಳೆದ ವರ್ಷ ನವೆಂಬರ್ನಲ್ಲಿ 41,235 ಯುನಿಟ್ಗಳನ್ನು ಮಾರಾಟ ಮಾಡಿದ್ದು, ಸುಮಾರು ಶೇಕಡಾ 4 ರಷ್ಟು ಹೆಚ್ಚಾಗಿದೆ.

ಟಾಟಾ ಮೋಟಾರ್ಸ್ ಕಾರುಗಳ ಭರ್ಜರಿ ಮಾರಾಟ
ಟಾಟಾ ಮೋಟಾರ್ಸ್ ಕಾರು ಮಾರಾಟದಲ್ಲಿ ಭಾರೀ ಏರಿಕೆ ಕಂಡಿದ್ದು, 21,600 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಪ್ರಯಾಣಿಕರ ವಾಹನ ವಿತರಣೆಯು ದ್ವಿಗುಣಗೊಂಡಿದ್ದರಿಂದ ನವೆಂಬರ್ನಲ್ಲಿ ದೇಶೀಯ ಮಾರಾಟದಲ್ಲಿ ಶೇಕಡಾ 26ರಷ್ಟು ಏರಿಕೆ ದಾಖಲಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 38,057 ಕ್ಕೆ ಹೋಲಿಸಿದರೆ ಈ ವರ್ಷ 47,859 ವಾಹನಗಳನ್ನು ಮಾರಾಟ ಮಾಡಿದೆ ಎಂದು ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನ ಮಾರಾಟವು ಶೇಕಡಾ 108ರಷ್ಟು ಏರಿಕೆ ಕಂಡು 21,641ಕ್ಕೆ ತಲುಪಿದೆ. ವಾಣಿಜ್ಯ ವಾಹನಗಳ ಮಾರಾಟ ಶೇಕಡಾ 9ರಷ್ಟು ಕುಸಿದು 27,982ಕ್ಕೆ ತಲುಪಿದೆ.

ಬಜಾಜ್ ಆಟೋ ಮಾರಾಟದಲ್ಲಿ ಏರಿಕೆ
ಬಜಾಜ್ ಆಟೋ ನವೆಂಬರ್ನಲ್ಲಿ ಒಟ್ಟು ಮಾರಾಟದಲ್ಲಿ ಶೇ. 5 ರಷ್ಟು ಏರಿಕೆ ಕಂಡು 4.22 ಲಕ್ಷ ಯುನಿಟ್ಗಳಿಗೆ ತಲುಪಿದೆ. ಇದರ ಒಟ್ಟು ಮೋಟಾರ್ಸೈಕಲ್ ಮಾರಾಟವು ಶೇಕಡಾ 12 ರಷ್ಟು ಏರಿಕೆಯಾಗಿ 3,84,993 ಕ್ಕೆ ತಲುಪಿದೆ. ಒಟ್ಟು ವಾಣಿಜ್ಯ ವಾಹನಗಳ ಮಾರಾಟವು ಶೇಕಡಾ 38 ರಷ್ಟು ಕುಸಿದು 37,247 ಕ್ಕೆ ತಲುಪಿದೆ. ಆದರೆ ರಫ್ತು ಶೇ. 14 ರಷ್ಟು ಏರಿಕೆಯಾಗಿ 2.23 ಲಕ್ಷ ಯೂನಿಟ್ಗಳಿಗೆ ತಲುಪಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications