ಕರ್ನಾಟಕದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ಟೆಕ್ಕಿಗಳಿಂದ ಹೂಡಿಕೆ ಹೆಚ್ಚು
ಬೆಂಗಳೂರು, ಏಪ್ರಿಲ್ 13: ಕರ್ನಾಟಕದಲ್ಲಿ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವ ಬಹುತೇಕ ಮಂದಿ ಪದವೀಧರರು ಮತ್ತು ಐಟಿ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿರುವವರೇ ಆಗಿದ್ದಾರೆ. ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆಯಾಗುತ್ತಿರುವುದು ಗಣನೀಯವಾಗಿ ಹೆಚ್ಚಿದೆ ಎಂದು ಕಾಯಿನ್ಡಿಸಿಎಕ್ಸ್(CoinDCX) ಅಂಕಿ ಅಂಶ ಮೂಲಕ ವರದಿ ನೀಡಿದೆ.
ಈ ಅಂಕಿ ಅಂಶಗಳ ಪ್ರಕಾರ, ಬಹುಪಾಲು ಹೂಡಿಕೆದಾರರು 35 ವರ್ಷಕ್ಕಿಂತ ಕೆಳಗಿನವರು. ಕ್ರಿಪ್ಟೊಕರೆನ್ಸಿಯಲ್ಲಿ ಆರಂಭಿಕವಾಗಿ ಹೂಡಿಕೆ ಮಾಡುತ್ತಿರುವವರು ವಂಚನೆಗೆ ಒಳಗಾಗಬಾರದು ಎನ್ನುವುದನ್ನು ಖಾತರಿಪಡಿಸುವ ಸಲುವಾಗಿ, ಕಾಯಿನ್ಡಿಸಿಎಕ್ಸ್, ಅತ್ಯಧಿಕ ಸುರಕ್ಷಾ ಲಕ್ಷಣಗಳನ್ನು ಹೊಂದಿರುವ ಕ್ರಿಪ್ಟೊ ಆಧರಿತ ಸುಲಭ ಹೂಡಿಕೆ ಪ್ಲಾಟ್ಫಾರಂ ಕಾಯಿನ್ಡಿಸಿಎಕ್ಸ್ ಗೋ ಆರಂಭಿಸಿದೆ.
ಕಾಯಿನ್ಡಿಸಿಎಕ್ಸ್ ಸಿಇಓ ಸುಮಿತ್ ಗುಪ್ತಾ ಅವರ ಪ್ರಕಾರ, ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಗರಗಳು ಕ್ರಿಪ್ಟೋ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಪ್ರಮಾಣ ಹೆಚ್ಚುತ್ತಿರುವ ಕೆಲ ನಗರಗಳಾಗಿವೆ. ಈ ನಗರಗಳ ಮಹಿಳೆಯರು ಕೂಡಾ ಹೆಚ್ಚು ಹೆಚ್ಚಾಗಿ ಕ್ರಿಪ್ಟೊ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಿದ್ದು, ಪೈಚಾರ್ಟ್ನ 20% ದಷ್ಟು ಮಂದಿ ಮಹಿಳೆಯರು.

ಕಾಯಿನ್ಡಿಸಿಎಕ್ಸ್ ಇತ್ತೀಚೆಗೆ ಕಾಯಿನ್ಡಿಸಿಎಕ್ಸ್ ಗೋ ಎಂಬ ಆ್ಯಪ್ ಬಿಡುಗಡೆ ಮಾಡಿದ್ದು, ಇದರ ಮೂಲಕ ಕ್ರಿಪ್ಟೊ ಬಗ್ಗೆ ಜ್ಞಾನ ಹೊಂದಿಲ್ಲದವರು ಮತ್ತು ತಮ್ಮ ಹೂಡಿಕೆಗಳು ಸುರಕ್ಷಿತ ಮತ್ತು ಸುಭದ್ರವಾಗಿರಬೇಕು ಎಂಬ ಕಳಕಳಿ ಹೊಂದಿರುವವರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದೆ.
ಕಾಯಿನ್ಡಿಸಿಎಕ್ಸ್ ಗೋ ಆ್ಯಪ್, ಆ್ಯಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳಿಗೆ ಲಭ್ಯವಿದ್ದು, ಇದನ್ನು ಕ್ರಿಪ್ಟೊ ಕ್ಷೇತ್ರಕ್ಕೆ ಆಗಮಿಸುವ ಹೊಸ ಬಳಕೆದಾರರಿಗಾಗಿ ಇದನ್ನು ಮುಕ್ತಗೊಳಿಸಿದ ಬಳಿಕ 1,50,000ಕ್ಕೂ ಅಧಿಕ ಬಾರಿ ಡೌನ್ಲೋಡ್ ಮಾಡಿಕೊಳ್ಳಲಾಗಿದೆ.
ಇಂದು ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ನಾಲ್ಕು ಸಾವಿರಕ್ಕೂ ಅಧಿಕ ಕ್ರಿಪ್ಟೊ ಆಸ್ತಿಗಳ ಪೈಕಿ ಅತ್ಯುತ್ತಮ ಎನಿಸಿದ 14ನ್ನು ಮಾತ್ರ ಈ ಆ್ಯಪ್ ಬಳಕೆದಾರರಿಗಾಗಿ ಪ್ಲಾಟ್ಫಾರಂನಲ್ಲಿ ಸೇರಿಸಿಕೊಂಡಿದೆ.
ಕೋವಿಡ್-19 ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಕ್ರಿಪ್ಟೊ ಉದ್ಯಮ ಮಹತ್ವದ ವಹಿವಾಟು ಬೆಳವಣಿಗೆಯನ್ನು ಕಂಡಿದೆ. ಹೆಚ್ಚು ಹೆಚ್ಚು ಜಾಗತಕ ಹೂಡಿಕೆ ಸಂಸ್ಥೆಗಳು ಮತ್ತು ಹೂಡಿಕೆದಾರರು ಕಳೆದ ಕೆಲ ತಿಂಗಳುಗಳಲ್ಲಿ ಕ್ರಿಪ್ಟೊ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಈ ಎಲ್ಲದರ ಪೈಕಿ ಬಿಟ್ಕಾಯಿನ್ ಮುಂಚೂಣಿಯಲ್ಲಿದೆ. ಇಂದು ಇದು ಸುಮಾರು 1.3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಜಾಗತಿಕವಾಗಿ ಹಲವು ಅರ್ಥಶಾಸ್ತ್ರಜ್ಞರು ಮತ್ತು ಹೂಡಿಕೆದಾರರು ಬಿಟ್ಕಾಯಿನ್ ಡಿಜಿಟಲ್ ಚಿನ್ನ ಎಂದು ಅಭಿಪ್ರಾಯಪಡುತ್ತಾರೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications