4,500 ಕೋಟಿಗೆ ಇಳಿದಿದೆ ಸ್ವಿಟ್ಜರ್ ಲೆಂಡ್ ನಲ್ಲಿನ ಭಾರತೀಯರ ಕಪ್ಪು ಹಣ
ಪೊಲೀಸರ ಜೀಪ್ ಬರುವಾಗ ಭೋಂ ಎಂದು ಶಬ್ದ ಮಾಡಿ ಬರುತ್ತದಲ್ಲಾ, ಹಾಗಾಗಿದೆ ನೋಡಿ ಕೇಂದ್ರ ಸರಕಾರದ ಸ್ಥಿತಿ. ಸ್ವಿಟ್ಜರ್ ಲೆಂಡ್ ನ ಬ್ಯಾಂಕ್ ಗಳಲ್ಲಿ ಭಾರತೀಯ ಇಟ್ಟಿದ್ದಾರೆ ಎನ್ನಲಾದ ಕಪ್ಪು ಹಣದ ಮೊತ್ತ 2016ರಲ್ಲಿ ಭಾರತೀಯ ರುಪಾಯಿಗಳಲ್ಲೇ ಹೇಳುವುದಾದರೆ 4,500 ಕೋಟಿಗೆ ಇಳಿದಿದೆಯಂತೆ.
ಇದು ದಾಖಲೆ ಮೊತ್ತಕ್ಕೆ ಇಳಿಕೆ ಕಂಡಿದೆ ಎಂಬುದು ಸುದ್ದಿ. ಒಟ್ಟಾರೆಯಾಗಿ ಜಗತ್ತಿನ ನಾನಾ ದೇಶಗಳ ಕಪ್ಪು ಹಣ ಖದೀಮರು ಆ ದೇಶದಲ್ಲಿ ಇಟ್ಟಿರುವ ಮೊತ್ತ 96 ಲಕ್ಷ ಕೋಟಿಗೂ ಸ್ವಲ್ಪ ಹೆಚ್ಚು. ಇನ್ನು ಗುರುವಾರ ಭಾರತೀಯರು ಬಚ್ಚಿಟ್ಟಿರುವ ಕಪ್ಪು ಹಣದ ಮೊತ್ತ ಇಷ್ಟು ಎಂದು ಸ್ವಿಟ್ಜರ್ ಲೆಂಡ್ ದೇಶದವರೇ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಭಾರತೀಯರು ಅಲ್ಲಿಟ್ಟಿದ್ದ ಮೊತ್ತ ಕಳೆದ ವರ್ಷವೇ ಶೇ ನಲವತ್ತೈದರಷ್ಟು ಕಡಿಮೆ ಆಗಿದೆ. ಈ ರೀತಿ ಇಲ್ಲಿವರೆಗೆ ಇಟ್ಟಿದ್ದ ಮೊತ್ತದ ಪೈಕಿಯೇ ಇದು ಕನಿಷ್ಠ ಎಂದು ಕೂಡ ತಿಳಿಸಲಾಗಿದೆ.

ಸತತ ಮೂರನೇ ವರ್ಷ ಈ ರೀತಿ ಕಪ್ಪು ಹಣದ ಮೊತ್ತ ಕಡಿಮೆ ಆಗುತ್ತಿದೆ. ಭಾರತದೊಂದಿಗೆ ಒಪ್ಪಂದಕ್ಕೆ ಬಂದಿರುವ ಅಲ್ಲಿನ ಬ್ಯಾಂಕ್ ಗಳು ಮುಂದಿನ ವರ್ಷ ಅಲ್ಲ, ಅದಕ್ಕೂ ಮುಂದಿನ ವರ್ಷ ಕಪ್ಪು ಹಣದ ಬಗ್ಗೆ ದಾಖಲೆ ಹಂಚಿಕೊಳ್ಳುತ್ತೇವೆ ಎಂದಿವೆ.
ಭಾರತದ ಸುಪ್ರೀಂ ಕೋರ್ಟ್ ನ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡವನ್ನೇ ರಚಿಸಲಾಗಿದೆ. ಅದರ ಕೆಲಸ ಏನೆಂದರೆ ಸ್ವಿಟ್ಜರ್ ಲೆಂಡ್ ಸೇರಿದಂತೆ ಅಂಥ ದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ಹೊರ ತೆಗೆಯುವುದು. ಅವರೇನೋ ಪ್ರಕರಣ ಅದು-ಇದು ಅಂತೇನೋ ದಾಖಲಿಸಿದರೂ ಸಾಕ್ಷ್ಯ ಪುರಾವೆ ಮೂಲಕ ಸಾಬೀತು ಪಡಿಸಲು ಸಾಧ್ಯವಾಗಿದ್ದು ಕೆಲವೇ.
ಇನ್ನು ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪು ಹಣ ತಂದರೆ ದೇಶದ ಪ್ರತಿ ಪ್ರಜೆಯ ಖಾತೆಗೆ ಐದು ಲಕ್ಷ ರುಪಾಯಿ ಹಾಕಬಹುದು ಎಂಬುದು ಬಿಜೆಪಿಯವರ ಮಾತಾಗಿತ್ತು. ಇದೇ ಸ್ಥಿತಿ ನೋಡಿದರೆ ಪ್ರತಿ ಪ್ರಜೆಗೆ ನೂರು ಗ್ರಾಂ ಕಳ್ಳೇಬೀಜ ಕೂಡ ಸಿಗಲ್ಲ ಅನ್ನಿಸುತ್ತೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications