ಸ್ವಿಸ್ ಬ್ಯಾಂಕ್ ಆದಾಯ ಏರಿಕೆ, ಭಾರತೀಯರ ಹೂಡಿಕೆ ಇಳಿಕೆ
ಜ್ಯೂರಿಚ್, ಜೂ.19: ಸ್ವಿಟ್ಜರ್ಲೆಂಡ್ ನ ವಿವಿಧ ಬ್ಯಾಂಕ್ ಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಹೂಡಿಕೆ ಮಾಡುವ ಪ್ರಮಾಣ ಶೇ 10ರಷ್ಟು ತಗ್ಗಿದೆ ಎಂದು ವರದಿ ಬಂದಿದೆ.
ಸ್ವಿಟ್ಜರ್ಲೆಂಡ್ ನ ಬ್ಯಾಂಕ್ಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣದ ಮೊತ್ತ ಕಳೆದ ವರ್ಷ 10 ಶೇ.ದಷ್ಟು ಕಡಿಮೆಯಾಗಿದೆ.
ಭಾರತೀಯರು ಇರಿಸಿದ ಹಣ 203 ಕೋಟಿ ಸ್ವಿಸ್ ಫ್ರಾಂಕ್ನಿಂದ 181.5 ಕೋಟಿ ಸ್ವಿಸ್ ಫ್ರಾಂಕ್ (ಸುಮಾರು 12,615 ಕೋಟಿ ರೂ.)ಗೆ ಕುಸಿದಿದ್ದು, 21.5 ಕೋಟಿ ಸ್ವಿಸ್ ಫ್ರಾಂಕ್ ನಷ್ಟು ಕಡಿಮೆಯಾಗಿದೆ ಎಂದು ಆ ದೇಶದ ಕೇಂದ್ರೀಯ ಬ್ಯಾಂಕ್ ಎಸ್ಎನ್ಬಿ ಬಿಡುಗಡೆ ಮಾಡಿದ ಹೊಸ ಅಂಕಿಅಂಶಗಳು ಹೇಳಿವೆ.
ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯರು ಹೊಂದಿರುವ ಎರಡನೆ ಅತಿ ಕನಿಷ್ಠ ಮೊತ್ತವಾಗಿದೆ. 2013ರಲ್ಲಿ ಈ ಮೊತ್ತ 40 ಶೇ.ದಷ್ಟು ಏರಿಕೆಯಾಗಿತ್ತು.

ಇತರೆ ದೇಶಗಳ ಜನರು ಸ್ವಿಸ್ ಬ್ಯಾಂಕ್ಗಳಲ್ಲಿ ಇರಿಸಿರುವ ಹಣ 2013ರ ಕೊನೆಯ ವೇಳೆಗೆ ಇದ್ದ 90ಲಕ್ಷ ಕೋಟಿ ರೂ.ಯಿಂದ 2014ರಲ್ಲಿ 103 ಲಕ್ಷ ಕೋಟಿ ರೂ.ಗೆ ಏರಿದೆ. 2012ರಲ್ಲಿ ಸ್ವಿಸ್ ಬ್ಯಾಂಕ್ನಲ್ಲಿನ ಭಾರತೀಯ ಠೇವಣಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಕಡಿಮೆಯಾಗಿತ್ತು. ಅಂದರೆ, 8,530 ಕೋಟಿ ರೂ. ಠೇವಣಿ ಆ ವರ್ಷ ಇತ್ತು ಹಾಗೂ ಅದು ಅತ್ಯಂತ ಕನಿಷ್ಠ ಮೊತ್ತವಾಗಿದೆ.
ಆದಾಯ ಏರಿಕೆ: 2014ರಲ್ಲಿ ಸ್ವಿಸ್ ಬ್ಯಾಂಕ್ಗಳ ಆದಾಯದಲ್ಲಿ ಭಾರೀ ಏರಿಕೆಯಾಗಿದೆ. ಸ್ವಿಟ್ಜರ್ಲೆಂಡ್ ನ 275 ಬ್ಯಾಂಕ್ಗಳ ಪೈಕಿ 246 ಬ್ಯಾಂಕ್ಗಳು ವಾರ್ಷಿಕ ಲಾಭ ದಾಖಲಿಸಿವೆ ಎಂದು ದೇಶದ ಕೇಂದ್ರೀಯ ಬ್ಯಾಂಕ್ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್ಎನ್ಬಿ) ಪ್ರಕಟಿಸಿದೆ. ಈ ಬ್ಯಾಂಕ್ಗಳ ಒಟ್ಟು ಲಾಭ 2013ರಲ್ಲಿ ಇದ್ದ 1190 ಕೋಟಿ ಸ್ವಿಸ್ ಫ್ರಾಂಕ್ನಿಂದ 2014ರಲ್ಲಿ 1420 ಕೋಟಿ ಸ್ವಿಸ್ ಫ್ರಾಂಕ್ಗೆ ಏರಿಕೆಯಾಗಿದೆ.
ಉಳಿದ 29 ಬ್ಯಾಂಕ್ಗಳು ವಾರ್ಷಿಕ ನಷ್ಟವನ್ನು ದಾಖಲಿಸಿವೆ. ಇವುಗಳ ಒಟ್ಟು ನಷ್ಟ 2013ರಲ್ಲಿದ್ದ 140 ಕೋಟಿ ಸ್ವಿಸ್ ಫ್ರಾಂಕ್ನಿಂದ 680 ಕೋಟಿ ಸ್ವಿಸ್ ಫ್ರಾಂಕ್ಗೆ ಏರಿದೆ.
ಕಪ್ಪು ಹಣ ಕುರಿತಂತೆ ದಾಖಲೆ ಒದಗಿಸುವಂತೆ ಎಸ್ ಎನ್ ಬಿಗೆ ಭಾರತ ಮತೊಮ್ಮೆ ಮನವಿ ಸಲ್ಲಿಸಿದೆ. ಭಾರತದ ವಿಶೇಷ ತನಿಖಾ ದಳ ತನಿಖೆ ತೀವ್ರಗೊಳಿಸಿದ್ದರಿಂದ ಹೂಡಿಕೆ ಪ್ರಮಾಣ ತಗ್ಗಿದೆ. 2012 ಹಾಗೂ 2011ರಲ್ಲಿ ಹೂಡಿಕೆಯಲ್ಲಿ ಭಾರತೀಯರೇ ಮುಂದಿದ್ದರು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications