2020ರ ವೇಳೆಗೆ ಭಾರತದಲ್ಲಿ 100 ಕೋಟಿ ಮೊಬೈಲ್ ಬಳಕೆದಾರರು!
ಮೊಬೈಲ್ ಫೋನ್ ಗಳ ಬೆಲೆಗಳಲ್ಲಿನ ಇಳಿಕೆ, ನೆಟ್ ವರ್ಕ್ ಕವರೇಜ್ ಉತ್ತಮ ಆಗುತ್ತಿರುವುದರಿಂದ ಭಾರತದಲ್ಲಿ 2020ರ ವೇಳೆಗೆ ನೂರು ಕೋಟಿ ಮೊಬೈಲ್ ಬಳಕೆದಾರರು ಆಗಲಿದ್ದಾರೆ ಎಂದು ಹೊಸ ಅಧ್ಯಯನವೊಂದರ ವರದಿ ತಿಳಿಸಿದೆ.
ಬೆಂಗಳೂರು, ಅಕ್ಟೋಬರ್ 27: ಮೊಬೈಲ್ ಫೋನ್ ಗಳ ಬೆಲೆಗಳಲ್ಲಿನ ಇಳಿಕೆ, ನೆಟ್ ವರ್ಕ್ ಕವರೇಜ್ ಉತ್ತಮ ಆಗುತ್ತಿರುವುದರಿಂದ ಭಾರತದಲ್ಲಿ 2020ರ ವೇಳೆಗೆ ನೂರು ಕೋಟಿ ಮೊಬೈಲ್ ಬಳಕೆದಾರರು ಆಗಲಿದ್ದಾರೆ ಎಂದು ಹೊಸ ಅಧ್ಯಯನವೊಂದರ ವರದಿ ತಿಳಿಸಿದೆ. ಜೂನ್ 2016ರ ಲೆಕ್ಕಾಚಾರದ ಪ್ರಕಾರ 61.60 ಕೋಟಿ ಮೊಬೈಲ್ ಬಳಕೆದಾರರು ಭಾರತದಲ್ಲಿದ್ದಾರೆ.
ದೇಶವು ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ನ ಮಾರುಕಟ್ಟೆಯಂತೆ. 'ಈಗ ದೇಶದ ಅರ್ಧದಷ್ಟು ಜನ ಮೊಬೈಲ್ ಸೇವೆ ಬಳಸುತ್ತಿದ್ದಾರೆ. ಮೊಬೈಲ್ ಫೋನ್ ಗಳ ಬೆಲೆಗಳಲ್ಲಿನ ಇಳಿಕೆ, ನೆಟ್ ವರ್ಕ್ ಕವರೇಜ್ ಉತ್ತಮ ಆಗುತ್ತಿರುವುದರಿಂದ 2020ರ ವೇಳೆಗೆ ಇನ್ನೂ 33 ಕೋಟಿ ಈಗಿನ ಸಂಖ್ಯೆಗೆ ಸೇರ್ಪಡೆಯಾಗಬಹುದು' ಎಂದು ವರದಿಯಲ್ಲಿ ಹೇಳಲಾಗಿದೆ.[ಐಫೋನ್ ಗಾಗಿ ಚಲಿಸುವ ರೈಲಿನಿಂದ ಹಾರಿದ ವಿದ್ಯಾರ್ಥಿ]

ಜಿಎಸ್ ಎಂಎ ಮೊಬೈಲ್ ಬಳಸುವ ವ್ಯಕ್ತಿಯನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುವ ಸಾಧ್ಯತೆಯೂ ಇದೆ. 2020ರ ವೇಳೆಗೆ 3ಜಿ, 4ಜಿ ಮೊಬೈಲ್ ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ 67 ಕೋಟಿಗೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಅವಧಿಯಲ್ಲಿ 4ಜಿ ನೆಟ್ ವರ್ಕ್ ಬಳಕೆ ಮಾಡುವವರ ಸಂಖ್ಯೆ 28 ಕೋಟಿ ತಲುಪುವ ಅಂದಾಜಿದೆ. 2015ರಲ್ಲಿ ಈ ಸಂಖ್ಯೆ 30 ಲಕ್ಷ ಇತ್ತು. ಇನ್ನು 2016-2020ರ ಮಧ್ಯೆ ಟೆಲಿಕಾಂ ವಲಯದಲ್ಲಿ 2.3 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.[ಮೈಸೂರಿನ ಸಂಪೂರ್ಣ ಮಾಹಿತಿ ಈಗ ಅಂಗೈಯಲ್ಲಿ!]
2015ರಲ್ಲಿ ಭಾರತದ ಜಿಡಿಪಿಗೆ ಮೊಬೈಲ್ ಫೋನ್ ಇಂಡಸ್ಟ್ರಿ ಕೊಡುಗೆ ಶೇ 6.5ರಷ್ಟು. ಅಂದರೆ 9 ಲಕ್ಷ ಕೋಟಿ ರುಪಾಯಿ. ಇದು 2020ರ ವೇಳೆಗೆ 14 ಲಕ್ಷ ಕೋಟಿ ರುಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಮೊಬೈಲ್ ಇಂಡಸ್ಟ್ರಿ ನೇರ ಹಾಗೂ ಪರೋಕ್ಷವಾಗಿ ನೀಡುತ್ತಿರುವ ಕೊಡುಗೆಯ ಮೊತ್ತವನ್ನು ಕೊಡಲಾಗಿದೆ.
ಮೊಬೈಲ್ ಆಪರೇಟರ್ ಗಳು ಹಾಗೂ ಪರಿಸರ ವ್ಯವಸ್ಥೆಯು ಅಂದಾಜು 22 ಲಕ್ಷ ಮಂದಿಗೆ ನೇರವಾಗಿ ಉದ್ಯೋಗ ನೀಡಿದೆ. ಇನ್ನು ಹೆಚ್ಚುವರಿ 18 ಲಕ್ಷ ಉದ್ಯೋಗವನ್ನು ಮೊಬೈಲ್ ಇಂಡಸ್ಟ್ರಿ ಮೇಲೆ ಅವಲಂಬಿತವಾಗಿರುವ ಇತರ ಚಟುವಟಿಕೆಗಳು ಒದಗಿಸುತ್ತಿವೆ. ಒಟ್ಟಾರೆ 2015ರಲ್ಲಿ ಮೊಬೈಲ್ ಇಂಡಸ್ಟ್ರಿ 40 ಲಕ್ಷ ಉದ್ಯೋಗ ನೀಡಿದೆ.
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications