ಭಾರತದ ಮೊಟ್ಟ ಮೊದಲ ಪೇಮೆಂಟ್ ವಾಚ್: ವೇಗವಾಗಿ, ಸುರಕ್ಷಿತವಾಗಿ ವಾಚ್ನಲ್ಲೇ ಬಿಲ್ ಪಾವತಿಸಿ
ನವದೆಹಲಿ, ಸೆಪ್ಟೆಂಬರ್ 17: ನಿಮಗೆ ಇನ್ಮುಂದೆ ಯಾವುದಾದರು ಬಿಲ್ ಪಾವತಿಸಲು, ಶಾಪಿಂಗ್ ತೆರಳಿದ್ದಾಗ ಹಣ ಪಾವತಿಸಲು ಡೆಬಿಟ್ ಕಾರ್ಡ್ ಇಲ್ಲವೇ ಯುಪಿಐ ಆಧಾರಿತ ಆ್ಯಪ್ಗಳ ಅವಶ್ಯಕತೆ ಬರದು. ಏಕೆಂದರೆ ನಿಮ್ಮ ಒಂದು ಕೈಗಡಿಯಾರ ಈ ಎಲ್ಲಾ ಕೆಲಸವನ್ನು ಮಾಡಲಿದೆ.
ಆಶ್ಚರ್ಯವಾಗ್ತಿದ್ಯಾ.. ಹೌದು ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ಹಾಗೂ ಗಡಿಯಾರ ನಿರ್ಮಾಣದ ದೈತ್ಯ ಕಂಪನಿ ಟೈಟಾನ್ ಸೇರಿಕೊಂಡು ಹೀಗೊಂದು ಸ್ಮಾರ್ಟ್ ಕೈಗಡಿಯಾರವನ್ನು ಪರಿಚಯಿಸಿದ್ದು, 'ಟೈಟಾನ್ ಪೇ' ಎಂದು ಹೆಸರಿಡಲಾಗಿದೆ.
ಟೈಟಾನ್ ಪೇ ಮೂಲಕ ನೀವು ಯಾವುದೇ ಸಂಪರ್ಕವಿಲ್ಲದೆ ಸುರಕ್ಷಿತವಾಗಿ ಹಣ ಪಾವತಿಸಬಹುದಾಗಿದೆ. ಇದಕ್ಕಾಗಿಯೇ ಟೈಟಾನ್ ಹಣ ಪಾವತಿಯನ್ನು ಬೆಂಬಲಿಸುವ 5 ಕೈಗಡಿಯಾರಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಎಸ್ಬಿಐ ಬ್ಯಾಂಕ್ ಕೈ ಜೋಡಿಸಿದೆ.

ನೀವು ಯಾವುದೇ ವಸ್ತು ಅಥವಾ ಸೇವೆಗೆ ಹಣ ಪಾವತಿಗಾಗಿ ನೀವು ಕೌಂಟರ್ ಬಳಿಗೆ ಹೋದಾಗ, ನೀವು ಕೇವಲ PoS ಯಂತ್ರದ ಬಳಿ ಹೋಗಿ Titan Pay Powered Watch ಮೇಲೆ ಟ್ಯಾಪ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕಾಂಟಾಕ್ಟ್ ಲೆಸ್ ಹಣ ಪಾವತಿಯಾಗಲಿದೆ. ಸಾಮಾನ್ಯವಾಗಿ WiFi ಸೌಲಭ್ಯವಿರುವ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಯಾಗುವ ರೀತಿ ಇದರಲ್ಲಿಯೂ ಕೂಡ ಹಣ ಪಾವತಿಯಾಗಲಿದೆ. ಆದರೆ, ಕೇವಲ ಎಸ್ಬಿಐ ಡೆಬಿಟ್ ಕಾರ್ಡ್ ಹೊಂದಿದವರಿಗಾಗಿ ಮಾತ್ರ ಈ ಸೌಲಭ್ಯ ನೀಡಲಾಗಿದೆ.
ಎಸ್ಬಿಐ ಡೆಬಿಟ್ ಕಾರ್ಡ್ ಹೊಂದಿರುವವರು ಮಾತ್ರ ಟೈಟಾನ್ ಪೇ ಕೈಗಡಿಯಾರದ ಸೌಲಭ್ಯವನ್ನು ಪಡೆಯಬಹುದು. ನೀವು 2,000 ರೂಪಾಯಿಗಳವರೆಗಿನ ಹಣ ಪಾವತಿಯನ್ನು ಇದರಲ್ಲಿ ಟ್ಯಾಪ್ ಮಾಡುವ ಮೂಲಕ ನಿರ್ವಹಿಸಬಹುದು.
ಟೈಟಾನ್ ಈ ಹೊಸ ಕೈಗಡಿಯಾರದ ಸರಣಿ ಪುರುಷರಿಗಾಗಿ ಮೂರು ರೂಪಾಂತರಗಳನ್ನು ಮತ್ತು ಮಹಿಳೆಯರಿಗಾಗಿ ಎರಡು ರೂಪಾಂತರಗಳನ್ನು ಬಿಡುಗಡೆ ಮಾಡಲಾಗಿದೆ. ಟೈಟಾನ್ ಪೇ ಕೈಗಡಿಯಾರದ ಬೆಲೆ 2,995, ರಿಂದ 5,995 ರೂ. ನಿಗದಿಪಡಿಸಲಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications