ವಿಡಿಯೋಕಾನ್ ನ 75 ಕೋಟಿ ವಹಿವಾಟಿಗೆ 650 ಕೋಟಿ ಸಾಲ ಕೊಟ್ಟ ಐಸಿಐಸಿಐ
ನವದೆಹಲಿ, ಏಪ್ರಿಲ್ 04: ವಿಡಿಯೋಕಾನ್ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದೀಪಕ್ ಕೋಚಾರ್ ಗೆ ನೋಟಿಸ್ ಜಾರಿಗೊಳಿಸಿದೆ.
ದೀಪಕ್ ಕೋಚಾರ್, ಐಸಿಐಸಿಐ ಬ್ಯಾಂಕ್ ಎಂಡಿ ಹಾಗೂ ಸಿಇಒ ಚಂದಾ ಕೋಚಾರ್ ಪತಿಯಾಗಿದ್ದು, ಐಟಿ ಕಾಯ್ದೆ ಸೆಕ್ಷನ್ 131 ರ ಅಡಿಯಲ್ಲಿ ನೋಟಿಸ್ ಕಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ದೀಪಕ್ ಕೋಚಾರ್ ಗೆ ವೈಯಕ್ತಿಕ ಫೈನಾನ್ಸ್ ವಿವರ, ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು, ಸಂಸ್ಥೆಯ ಆರ್ಥಿಕ ವಿವರಗಳನ್ನೂ ಸಲ್ಲಿಸಲು ಸೂಚನೆ ನೀಡಲಾಗಿದೆ. ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಇನ್ನೂ ಅನೇಕರಿಗೆ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ವೀಡಿಯೋಕಾನ್ ಅಲ್ಲಿರುವ ಐದು ಕಂಪನಿಗಳ ಪೈಕಿ ಒಂದು ಕಂಪನಿ , ಇವಾನ್ಸ್ ಫ್ರೇಸರ್ ಅಂಡ್ ಕಂಪನಿ ಇಂಡಿಯಾ ಲಿಮಿಟೆಡ್ 2012ರಲ್ಲಿ ಐಸಿಐಸಿಐ ಬ್ಯಾಂಕ್ನಿಂದ 650 ಕೋಟಿ ಸಾಲ ಪಡೆದಿದೆ. 2011ರಲ್ಲಿ ಕಂಪನಿಯ ವಹಿವಾಟು ಕೇವಲ 75 ಕೋಟಿ ಮಾತ್ರ ಹಾಗಿರುವಾಗ ತನ್ನ ವಹಿವಾಟಿಗಿಂತ ಹತ್ತು ಪಟ್ಟು ಹೆಚ್ಚಿನ ಸಾಲವನ್ನು ವಿಡಿಯೋಕಾನ್ ಪಡೆದಿದೆ.
ಐಸಿಐಸಿಐ ಬ್ಯಾಂಕ್ ಸಾಲ ನೀಡುವಾಗ ದಾಖಲೆಗಳನ್ನು ಪರಿಶೀಲಿಸಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಒಂದೊಮ್ಮೆ ಸರಿಯಾಗಿ ದಾಖಲೆಗಳನ್ನು ಪರಿಶೀಲಿಸಿದ್ದರೆ ಆದಾಯ, ವಹಿವಾಟಿಗಿಂತ ಒಂಭತ್ತು ಪಟ್ಟು ಸಾಲ ಅಂದರೆ ಹಿಂದಿರುಗಿ ನೀಡಲು ಸಾಧ್ಯವೇ ಇಲ್ಲದ ಮೊತ್ತದ ಸಾಲವನ್ನು ಬ್ಯಾಂಕ್ ನೀಡಲು ಸಾಧ್ಯವಾಗುತ್ತಿರಲಿಲ್ಲ.
ಸಿಬಿಐ ಇದೀಗ ವಿಡಿಯೋಕಾನ್ ಕಂಪನಿ ಹಾಗೂ ಐಸಿಐಸಿಐ ಬ್ಯಾಂಕ್ ನಡುವಿನ ಒಪ್ಪಂದವನ್ನು ಪರಿಶೀಲಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕ ದಾಖಲಾತಿ ಪ್ರಕಾರ ಸಾಲಕ್ಕೆ ಮೇಲಧಿಕಾರಿಗಳಿಂದ ಒಪ್ಪಿಗೆ ಸಿಕ್ಕಿತ್ತು ಎಂಬ ವಿಷ್ಯ ಗೊತ್ತಾಗಿದೆ. ಚಂದಾ ಕೊಚ್ಚಾರ್ ಕುಟುಂಬ ಹಾಗೂ ವಿಡಿಯೋಕಾನ್ ಗ್ರೂಪ್ ಚೇರ್ಮೆನ್ ವೇಣುಗೋಪಾಲ್ ಧೂತ್ ಮಧ್ಯೆ ಸ್ವೀಟ್ ಡೀಲ್ ನಡೆದಿದೆ ಎನ್ನಲಾಗಿದೆ. ಚಂದಾ ಕೊಚ್ಚಾರ್ ಪತಿ ದೀಪಕ್ ವಿರುದ್ಧ ಸಿಬಿಐ ಈಗಾಗಲೇ ದೂರ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಶುರು ಮಾಡಿದೆ.

2008 ಡಿಸೆಂಬರ್: ವಿಡಿಯೋಕಾನ್ ಗ್ರೂಪ್ನ ವೇಣು ಗೋಪಾಲ್ ಧೂತ್ ಮತ್ತು ದೀಪಕ್ ಕೊಚ್ಚಾರ್ ಸೇರಿ ಎನ್ಯುು ಪವರ್ ರಿನೀವೆಬಲ್ಸ್ ಪ್ರೈ.ಲಿ..(ಎನ್ಆರ್ಪಿಎಲ್) ಸ್ಥಾಪಿಸುತ್ತಾರೆ. ಇದರಲ್ಲಿ ಶೇಕಡ 50 ಪಾಲುದಾರಿಕೆ ಧೂತ್ ಮತ್ತು ಕುಟುಂಬಸ್ಥರದ್ದು. ಇನ್ನುಳಿದ ಶೇಕಡ 50 ಪಾಲು ದೀಪಕ್ ಕೊಚ್ಚಾರ್ ಮತ್ತು ಅವರ ತಂದೆ, ಚಂದಾ ಕೊಚ್ಚಾರ್ ಸಹೋದರನ ಪತ್ನಿಯ ಮಾಲೀಕತ್ವದ ಪೆಸಿಫಿಕ್ ಕ್ಯಾಪಿಟಲ್ನದ್ದು.
2009 ಜನವರಿ: ಎನ್ಆರ್ಪಿಎಲ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಧೂತ್, ತನ್ನ ಬಳಿ ಇದ್ದ 24,999 ಷೇರುಗಳನ್ನು ಕೊಚ್ಚಾರ್ಗೆ ರೂ. 2.5 ಲಕ್ಷಕ್ಕೆ ವರ್ಗಾಯಿಸಿದರು.
2010 ಮಾರ್ಚ್: ಎನ್ಆರ್ಪಿಎಲ್ಗೆ 64 ಕೋಟಿ ರೂ.(ಪರಿ ವರ್ತನೆಯಾಗಬಲ್ಲ ಡಿಬೆಂಚರ್) ಸಾಲ ನೀಡಿದ ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಟೆಡ್- ಈ ಕಂಪನಿಯ ಶೇಕಡ 99.9 ಮಾಲೀಕತ್ವ ಧೂತ್ರದ್ದು. ಇನ್ನೊಂದಿಷ್ಟು ಷೇರುಗಳನ್ನು ಕೊಚ್ಚಾರ್ಗೆ ವರ್ಗಾಯಿಸುವ ಮೂಲಕ ಸುಪ್ರೀಂ ಎನರ್ಜಿಯಲ್ಲಿ ಧೂತ್ ಪಾಲುದಾರಿಕೆ ಶೇಕಡ 94.99ಕ್ಕೆ ಇಳಿಕೆಯಾಗುತ್ತದೆ.
2010 ನವೆಂಬರ್: ಸುಪ್ರೀಂ ಎನರ್ಜಿಯ ಸಂಪೂರ್ಣ ಮಾಲೀಕತ್ವವನ್ನು ಧೂತ್ ತಮ್ಮ ಸಹವರ್ತಿ ಮಹೇಶ್ ಚಂದ್ರ ಪುಂಗ್ಲಿಯಾಗೆ ವರ್ಗಾಯಿಸಿದರು.
2012: ಸೆಪ್ಟೆಂಬರ್ನಿಂದ 2013ರ ಏಪ್ರಿಲ್ ಅವಧಿಯಲ್ಲಿ ಪುಂಗ್ಲಿಯಾ ತಮ್ಮ ಪಾಲನ್ನು ಪಿನಾಕಲ್ ಎನರ್ಜಿ(ಟ್ರಸ್ಟ್)ಗೆ ಕೇವಲ ರೂ.9 ಲಕ್ಷಕ್ಕೆ ವರ್ಗಾಯಿಸಿದರು. ಈ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ದೀಪಕ್ ಕೊಚ್ಚಾರ್. ಪರಿಣಾಮ, ಎನ್ ಆರ್ಪಿಎಲ್ಗೆ ಸುಪ್ರೀಂ ಎನರ್ಜಿ ನೀಡಿದ್ದ 64 ಕೋಟಿ ರೂ. ಸಾಲ ಮೂರು ವರ್ಷದೊಳಗೆ ಪಿನಾಕಲ್ ಎನರ್ಜಿಯ ವ್ಯವಹಾರ ದೊಂದಿಗೆ ವಿಲೀನವಾಗಿ 'ಸಾಲ'ದ ಹೊರೆ ತಪ್ಪಿತು.
2017: 'ಸ್ವೀಟ್ ಡೀಲ್' ಪರಿವರ್ತನೆಯಾದ ಬಳಿಕ ವಿಡಿಯೋಕಾನ್ ಗ್ರೂಪ್ಗೆ ಐಸಿಐಸಿಐ ಬ್ಯಾಂಕ್ ಕೊಟ್ಟ ಸಾಲದಲ್ಲಿ ರೂ.2,810 ಕೋಟಿ(86%) ಮರುಪಾವತಿಯಾಗದೇ ಉಳಿದಿತ್ತು. ಇದನ್ನು ಬ್ಯಾಂಕ್ ಅನುತ್ಪಾದಕ ಆಸ್ತಿ ಪಟ್ಟಿ(ಎನ್ ಪಿಎ)ಗೆ ಸೇರಿಸಿದ್ದಾಗಿ ಘೋಷಿಸಿತು.
ಐಸಿಐಸಿಐ ಬ್ಯಾಂಕ್ಗೆ 58.9 ಕೋಟಿ ರೂ.ದಂಡ
ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಜಾರಿಗೊಳಿಸಿದ ಮಾರ್ಗದರ್ಶಿ ಸೂತ್ರಗಳನ್ನು ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಐಸಿಐಸಿಐ ಬ್ಯಾಂಕ್ಗೆ 58.9 ಕೋಟಿ ರೂ. ದಂಡ ವಿಧಿಸಲಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 47ಎ(1)(ಸಿ) ಪ್ರಕಾರ ಆರ್ಬಿಐ ಈ ಅಧಿಕಾರ ಚಲಾಯಿಸಿದ್ದು, ನಿಯಮ ಉಲ್ಲಂಘನೆಗೆ ವಿಧಿಸಿದ ಗರಿಷ್ಠ ದಂಡ ಇದಾಗಿರಬಹುದು ಎಂದು ಹೇಳಲಾಗುತ್ತಿದೆ.
ಎನ್ಆರ್ಪಿಎಲ್ ಮತ್ತು ಸುಪ್ರೀಂ ಎನರ್ಜಿಯ ಆಡಳಿತ ಮಂಡಳಿಗೆ 2009ರಲ್ಲೇ ರಾಜೀನಾಮೆ ನೀಡಿದ್ದು, ಸದ್ಯ ತೈಲ, ಅನಿಲ ಮತ್ತು ಟೆಲಿಕಾಂ ಮುಂತಾದ ದೊಡ್ಡ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆ ಕಂಪನಿಗಳ ಮೇಲೆ ನನಗೆ ಹಿಡಿತ ಇಲ್ಲ. ವೇಣುಗೋಪಾಲ್ ಧೂತ್ ಹೇಳಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications