ಜಿಎಸ್ ಟಿ ಜಾರಿಯಾದ ಮೇಲೆ ಆನ್ ಲೈನ್ ಷಾಪಿಂಗ್ ಹೇಗಿರಲಿದೆ?
ಇನ್ನೇನು ನಾಲ್ಕು ದಿನ ಕಳೆದು ಬೆಳಗಾಗುವುದರೊಳಗೆ ಜಿಎಸ್ ಟಿ ಜಾರಿ ಆಗುತ್ತದೆ. ಇ ಕಾಮರ್ಸ್ ಕಂಪೆನಿಗಳು ತಮ್ಮ ದಾಸ್ತಾನಿನಲ್ಲಿರುವ ವಸ್ತುಗಳ ಮಾರಾಟಕ್ಕೆ ಭಾರೀ ಪ್ರಯತ್ನ ಮಾಡುತ್ತಿವೆ. ಗ್ರಾಹಕರಿಗೆ ಶೇ ಇಪ್ಪತ್ತೈದರಿಂದ ತೊಂಬತ್ತರಷ್ಟು ರಿಯಾಯಿತಿ ಕೊಡುವ ಆಮಿಷ ಒಡ್ಡುತ್ತಿವೆ.
ಆದರೆ, ಜುಲೈ ಒಂದರಿಂದ ಜಿಎಸ್ ಟಿ ಜಾರಿಯಾದ ಮೇಲೆ ಆನ್ ಲೈನ್ ಷಾಪಿಂಗ್ ದುಬಾರಿ ಆಗಲಿದೆ. ಸದ್ಯಕ್ಕೆ ಇ ಕಾಮರ್ಸ್ ವೆಬ್ ಸೈಟ್ ಗಳು ಯಾವುದೇ ರೂಪದಲ್ಲಿ ತೆರಿಗೆ ಹಾಕುತ್ತಿಲ್ಲ. ಜಿಎಸ್ ಟಿ ಜಾರಿಯಾದ ಮೇಲೆ ಶೇ ಒಂದರಷ್ಟು ತೆರಿಗೆ ಸಂಗ್ರಹಿಸಿ, ಆ ವೆಬ್ ಸೈಟ್ ನಲ್ಲಿ ಹಾಕಿದ ಪಟ್ಟಿಯಲ್ಲಿರುವ ಮಾರಾಟಗಾರರಿಗೆ ಕೊಡ್ತಾರೆ.
ಈ ಕಾರಣಕ್ಕೆ ಬೆಲೆಯ ಮೇಲೆ ಪರಿಣಾಮ ಬೀರಿ, ನಿಮ್ಮ ಆನ್ ಲೈನ್ ಷಾಪಿಂಗ್ ದುಬಾರಿ ಆಗಲಿದೆ. ಸದ್ಯಕ್ಕೇನೋ ಈ ನಿರ್ಧಾರ ಮುಂದೂಡಲಾಗಿದೆ. ಆದರೆ ಮುಂಬರುವ ದಿನಗಳಲ್ಲಂತೂ ಜಾರಿಗೂ ಬರುವ ಸಾಧ್ಯತೆಗಳಿದ್ದು, ದುಬಾರಿ ಆಗಲಿದೆ. ಆದರೆ ಜಿಎಸ್ ಟಿ ಜಾರಿ ಆದ ಮೇಲೆ ವಸ್ತುಗಳು ನಿಮ್ಮನ್ನು ತಲುಪವ ವೇಗ ಹೆಚ್ಚಾಗಲಿದೆ.
ಏಕೆಂದರೆ ತುಂಬ ಪೇಪರ್ ವರ್ಕ್ ಗಳಿಲ್ಲ. ಅಂದರೆ ಒಂದೊಂದು ರಾಜ್ಯಕ್ಕೆ ಒಂದೊಂದು ರೀತಿಯ ತೆರಿಗೆ ಅಂತಿಲ್ಲ. ನೀವು ಬೆಂಗಳೂರಿನಲ್ಲಿದ್ದು, ನಿಮಗೆ ಮಾರಾಟ ಮಾಡುವ ವ್ಯಕ್ತಿ ದೆಹಲಿಯಲ್ಲಿದ್ದರೆ ಪ್ರತ್ಯೇಕ ಬಿಲ್, ಒಂದಿಷ್ಟು ಕಾಗದ-ಪತ್ರಗಳನ್ನು ತಯಾರು ಮಾಡಬೇಕಾಗ್ತಿತ್ತು. ಆದರೆ ಇನ್ನು ಅಂಥ ಕೆಲಸಗಳು ಇರಲ್ಲವಾದ್ದರಿಂದ ವಸ್ತುಗಳು ಬೇಗ ಗ್ರಾಹಕರನ್ನು ತಲುಪುತ್ತವೆ.

ಇನ್ನು ಮುಂದೆ ಪುಕ್ಕಟೆ, ರಿಯಾಯಿತಿಗಳು ಇರಲ್ಲ
ಭಯಂಕರ ರಿಯಾಯಿತಿಗಳು ಮತ್ತು ಪುಕ್ಕಟೆ ಆಫರ್ ಗಳಿಗಾಗಿ ನೀವು ಕಾಯುತ್ತಿದ್ದಿರಿ ಅನ್ನೋದಾದರೆ ಇನ್ನು ಮುಂದೆ ಅಂಥ ಅವಕಾಶಗಳು ಸಿಗೋದು ಕಷ್ಟ. ಏಕೆಂದರೆ ಅವುಗಳಿಗೆ ಹೆಚ್ಚುವರಿ ತೆರಿಗೆಗಳು ಬೀಳುತ್ತವೆ. ಇ ಕಾಮರ್ಸ್ ಕಂಪೆನಿಗಳು ಸರಬರಾಜುದಾರರಿಂದ ಖರೀದಿಸುವ ವಸ್ತುಗಳ ಮೇಲೆ ತೆರಿಗೆ ಪಾವತಿಸಬೇಕು ಆದ್ದರಿಂದ ಹಲವು ಸಂದರ್ಭದಲ್ಲಿ ರಿಯಾಯಿತಿ ಕೊಡುವುದು ಸಾಧ್ಯವಾಗಲಿಕ್ಕಿಲ್ಲ.

ಅಂಥ ಪೋರ್ಟಲ್ ಗಳಿಗೆ ಯಾವ ನಿಯಮ
ನೀವು ಅಮೆಜಾನ್, ಇ ಬೇ ಅಂಥ ಪೋರ್ಟಲ್ ಗಳಿಂದ ವಸ್ತು ಖರೀದಿಸಿದರೆ ಅವರು ವಿದೇಶಿ ನೋಟು ಬಳಸಿ ವ್ಯವಹಾರ ಮಾಡುತ್ತಾರೆ. ಅಂಥ ವ್ಯವಹಾರದವರಿಗೆ ಸರಕಾರದ ನಿಯಮಗಳು ಯಾವ ರೀತಿ ಇರುತ್ತವೆ ಎಂಬುದು ಗೊತ್ತಾಗಬೇಕಿದೆ.

ವಾಪಸ್ ಅಥವಾ ರದ್ದು ಕಷ್ಟ
ಖರೀದಿ ಮಾಡಿದ ವಸ್ತುಗಳನ್ನು ವಾಪಸ್ ಮಾಡುವುದಾಗಲೀ ಅಥವಾ ರದ್ದು ಮಾಡುವುದಾಗಲಿ ತುಂಬ ಸವಾಲಿನ ಕೆಲಸ ಆಗುತ್ತದೆ.

ಮೊದಲಿಗೆ ತೆರಿಗೆ ಪಾವತಿಸಬೇಕು
ಇ ಕಾಮರ್ಸ್ ಕಂಪೆನಿಗಳಿಗೆ ಶೇ ಹದಿನೆಂಟರಷ್ಟು ವಸ್ತುಗಳ ವಾಪಸಾತಿ ಅಥವಾ ಆರ್ಡರ್ ರದ್ದು ಮಾಡುವುದು ಇರುತ್ತದೆ. ಈಗ ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್ (ಟಿಡಿಎಸ್) ಅಂತ ಆಗಿಬಿಟ್ಟರೆ ಇ ಕಾಮರ್ಸ್ ಕಂಪೆನಿಗಳು ಮೊದಲಿಗೆ ತೆರಿಗೆ ಹಣವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ಆರ್ಡರ್ ರದ್ದಾದರೆ ಅಥವಾ ವಾಪಸ್ ಆದರೆ ಆ ನಂತರ ಸರಕಾರ ತೆರಿಗೆ ಹಣ ರೀಫಂಡ್ ಮಾಡುತ್ತದೆ. ಈ ಕಾರಣಕ್ಕೆ ಕಂಪೆನಿಗಳಿಗೆ ಹಣಕಾಸು ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಸವಾಲಾಗುತ್ತದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications