ಮಾಧ್ಯಮಗಳಿಗೂ ನೋಟು ನಿಷೇಧದ ಬಿಸಿ, ಹಿಂಜರಿತವೋ ಆರ್ಥಿಕ ಹೊಡೆತವೋ!
ಮುಂಬೈ, ಜನವರಿ 16: ಈ ಪರಿಸ್ಥಿತಿಯ ವಿಶ್ಲೇಷಣೆ ಹೇಗೆ ಮಾಡುವುದು ಅನ್ನೋದೇ ಸ್ವಲ್ಪ ಮಟ್ಟಿಗೆ ಗೊಂದಲಮಯವಾಗಿದೆ. ಅಪನಗದೀಕರಣದಿಂದ ಈ ವಲಯಕ್ಕೆ ಹೊಡೆತ ಬಿತ್ತು, ಆ ವಲಯಕ್ಕೆ ಹೊಡೆತ ಬಿತ್ತು ಅಂತ ಸುದ್ದಿ ಪ್ರಕಟಿಸುವ ಮಾಧ್ಯಮಗಳಿಗೇ ದೊಡ್ಡ ಹೊಡೆತ ಬಿದ್ದಿರುವ ವಿಚಾರ ಇದು.
ನೋಟು ನಿಷೇಧದಿಂದ ಪ್ರತಿಷ್ಠಿತ ಪತ್ರಿಕೆ 'ಹಿಂದೂಸ್ತಾನ್ ಟೈಮ್ಸ್'ಗೆ ಬಿಸಿ ತಾಗಿದೆ. ಅಲ್ಲಿನ ಕೆಲವು ಹಿರಿಯ ಉದ್ಯೋಗಿಗಳಿಗೆ ಕೆಲಸ ಬಿಡುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಬರುತ್ತಿದೆ. ಒಟ್ಟಿನಲ್ಲಿ ಸದ್ಯದ ಸನ್ನಿವೇಶ ಆತಂಕಕಾರಿಯಾಗಿದೆ. ಇತ್ತೀಚೆಗೆ ಎಚ್ ಟಿ ಮೀಡಿಯಾ ಗ್ರೂಪ್ ನಿಂದ ಅದರ ಬ್ಯುಸಿನೆಸ್ ಬ್ಯೂರೋ ಮುಚ್ಚಲಾಗಿದೆ.[ಮೈಸೂರು: ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ 'ಸುಧರ್ಮಾ' ಉಳಿಯಲಿ...]

ಮೂಲಗಳ ಪ್ರಕಾರ ಹಿಂದೂಸ್ತಾನ್ ಟೈಮ್ಸ್ ನ ವಾಣಿಜ್ಯ ಪುಟಗಳನ್ನು 'ಮಿಂಟ್'ನಿಂದಲೇ ಮಾಡಲಾಗುತ್ತದೆ. ಬಿಜಿನೆಸ್ ಡೆಸ್ಕ್ ನ ಮುಖ್ಯಸ್ಥ ಸುವೀನ್ ಸಿನ್ಹಾ ಅವರಿಗೆ ಕಂಪನಿ ಬಿಡುವಂತೆ ತಿಳಿಸಿ ಆಗಿತ್ತು. ಹಿರಿಯ ಸಹಾಯಕ ಸಂಪಾದಕ ಸನ್ನಿ ಸೇನ್, ಸುಚೇತನಾ ರಾಯ್ ಅವರನ್ನು ಎಚ್ ಟಿ ಆನ್ ಲೈನ್ ಗೆ ವರ್ಗಾವಣೆ ಮಾಡಲಾಗಿದೆ. ಮಹುವಾ ಸಹಾಯಕ ಸಂಪಾದಕ ವೆಂಕಟೇಶ್ ಅವರನ್ನು ಪೊಲಿಟಿಕಲ್ ಬ್ಯುರೋಗೆ ವರ್ಗಾವಣೆ ಮಾಡಲಾಗಿದೆ.
ಇನ್ನು ಕನ್ನಡದ ಮಾಧ್ಯಮಗಳಲ್ಲಿ ಕೂಡ ಖರ್ಚಿಗೆ ಕಡಿವಾಣ ಹಾಕುವಂತೆ ಸೂಚಿಸಲಾಗಿದೆ. ಹೊಸದಾಗಿ ನೇಮಕಾತಿ ಬೇಡ, ಅನಗತ್ಯವಾಗಿ ಹೆಚ್ಚುವರಿ ಪುಟಗಳು ಬೇಡ, ಜಾಹೀರಾತು ಪ್ರಮಾಣದಲ್ಲಿ ಕಡಿಮೆಯಾಗಿ, ಆದಾಯವೂ ತಾರುಮಾರಾಗಿದೆ ಎಂಬ ಮಾತುಗಳೆಲ್ಲ ಸಾಮಾನ್ಯವಾಗಿದೆ.
-
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ












Click it and Unblock the Notifications