Get Updates
Get notified of breaking news, exclusive insights, and must-see stories!

10 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಚಿಂತನೆ? ಇಲ್ಲಿದೆ ಮಾಹಿತಿ

ಪಡಿತರ ಚೀಟಿಯಲ್ಲಿ ತಪ್ಪು ಮಾಹಿತಿ ಸೇರಿಸಿದವರಿಗೆ ಆಹಾರ ವಿತರಣೆ ರದ್ದಾಗುವ ಸಾಧ್ಯತೆ ಇದೆ. ಪಡಿತರ ಚೀಟಿಗಳಲ್ಲಿ ತಪ್ಪು ಮಾಹಿತಿ ಕಂಡು ಬಂದ ಹಿನ್ನಲೆಯಲ್ಲಿ ಇನ್ನು ಮುಂದೆ ಅನರ್ಹ ಪಡಿತರ ಚೀಟಿದಾರರಿಗೆ ಉಚಿತ ಗೋಧಿ, ಕಾಳು ಮತ್ತು ಅಕ್ಕಿ ವಿತರಣೆಯಾಗುವುದಿಲ್ಲ.

ಹೌದು, ದೇಶಾದ್ಯಂತ ಆಹಾರ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಸರಿ ಸುಮಾರು 10 ಲಕ್ಷ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ರಾಜ್ಯದ ಆಯಾ ಸರ್ಕಾರಗಳು ಯೋಜಿಸುತ್ತಿದೆ. ಪರಿಶೀಲನೆ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಸ್ತುತ 80 ಕೋಟಿಗೂ ಹೆಚ್ಚು ಭಾರತೀಯ ನಾಗರಿಕರು ಪಡಿತರ ಚೀಟಿ ಹೊಂದಿರುವವರ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ, ಈ ಪಡಿತರ ಯೋಜನೆಯಲ್ಲಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳು ಈ ಯೋಜನೆಗೆ ಅರ್ಹರಲ್ಲ ಎಂದು ತಿಳಿದುಬಂದಿದೆ.

ತೆರಿಗೆ ಪಾವತಿಸುವವರ ಪಡಿತರ ಚೀಟಿ ರದ್ದು?

ತೆರಿಗೆ ಪಾವತಿಸುವವರ ಪಡಿತರ ಚೀಟಿ ರದ್ದು?

ದೇಶದಾದ್ಯಂತ ಸರ್ಕಾರದಿಂದ ಈವರೆಗೆ ಗುರುತಿಸಿರುವ 10 ಲಕ್ಷ ಫಲಾನುಭವಿಗಳಿಗೆ ಉಚಿತ ಗೋಧಿ, ಧಾನ್ಯ ಮತ್ತು ಅಕ್ಕಿ ವಿತರಣೆಯಾಗುವುದಿಲ್ಲ, ಇಂತಹ ಅನರ್ಹ ಪಡಿತರ ಚೀಟಿದಾರರ ಪಟ್ಟಿಯನ್ನು ಸ್ಥಳೀಯ ಪಡಿತರ ವಿತರಕರಿಗೆ ಕಳುಹಿಸುವಂತೆ ಸರ್ಕಾರಗಳಿಂದ ಸೂಚಿಸಿದ್ದು, ನಕಲಿ ಫಲಾನುಭವಿಗಳ ಹೆಸರನ್ನು ನಮೂದಿಸಿ ಅಂತಹ ರೇಷನ್‌ ಕಾರ್ಡ್‌ ಹೊಂದಿರುವವರ ವರದಿಯನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತಾರೆ. ಮಾಹಿತಿಯನ್ನು ಪರಿಶೀಲಿಸಿದ ನಂತರ ಅಂತಹ ಫಲಾನುಭವಿಗಳ ಪಡಿತರ ಚೀಟಿಗಳನ್ನು ಇಲಾಖೆ ರದ್ದುಪಡಿಸುತ್ತದೆ. ಎನ್‌ಎಫ್‌ಎಸ್‌ಎ ಪ್ರಕಾರ, ಆದಾಯ ತೆರಿಗೆ ಪಾವತಿಸುವವರನ್ನು ಪಡಿತರ ಚೀಟಿ ಹೊಂದುವುದನ್ನು ನಿಷೇಧಿಸಲಾಗುವುದು.

ಭೂಮಿ ಹೊಂದಿದವರಿಗೆ ಪಡಿತರ ಚೀಟಿ ರದ್ದು?

ಭೂಮಿ ಹೊಂದಿದವರಿಗೆ ಪಡಿತರ ಚೀಟಿ ರದ್ದು?

ಇದಲ್ಲದೆ, ಹೆಚ್ಚು ಭೂಮಿ ಹೊಂದಿರುವ ಜನರಿಗೆ ಪಡಿತರ ಚೀಟಿಯ ಪ್ರಯೋಜನ ಸಿಗುವುದಿಲ್ಲ. ಉಚಿತವಾಗಿ ಪಡಿತರ ಮಾರಾಟ ಮಾಡುವ ಮೂಲಕ ಅಕ್ರಮ ದಂಧೆ ನಡೆಸುತ್ತಿರುವ ಕೆಲವರನ್ನು ಕೂಡ ಸರ್ಕಾರ ಗುರುತಿಸಿದೆ. ಅವರ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲಾಗುವುದು ರಾಜ್ಯದ ಅನೇಕ ಸರ್ಕಾರಗಳು ಹೇಳಿಕೊಂಡಿವೆ. ಇನ್ನು ಉತ್ತರ ಪ್ರದೇಶದಲ್ಲಿ ಪಡಿತರ ಚೀಟಿಗಳ ದುರ್ಬಳಕೆ ಹೆಚ್ಚಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಪಡಿತರ ವಿತರಣೆಯಲ್ಲಿ ಸರ್ಕಾರ ವಿಫಲ?

ಪಡಿತರ ವಿತರಣೆಯಲ್ಲಿ ಸರ್ಕಾರ ವಿಫಲ?

ಕೇರಳದಲ್ಲಿ ಇತ್ತೀಚೆಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ಅಗತ್ಯವಿರುವ ಪಡಿತರ ಚೀಟಿ ಹೊಂದಿರುವ ಜನರಿಗೆ ಉಚಿತವಾಗಿ ವಿತರಿಸಲು ಕೇಂದ್ರ ಸರ್ಕಾರ ಮಂಜೂರು ಮಾಡಿದ 13,000 ಟನ್ ಅಕ್ಕಿಯನ್ನು ವಿತರಿಸಲು ಸರ್ಕಾರ ವಿಫಲವಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಆದ್ಯತೆಯ ಹಳದಿ ಮತ್ತು ಗುಲಾಬಿ ಪಡಿತರ ಚೀಟಿದಾರರು ಪ್ರತಿ ತಿಂಗಳು ಐದು ಕಿಲೋಗ್ರಾಂಗಳಷ್ಟು ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಾರೆ. ಆದರೆ, ಸೆಪ್ಟೆಂಬರ್‌ನಲ್ಲಿ ಸುಮಾರು 5,000 ಟನ್‌ಗಳ ಕೊರತೆ ಮತ್ತು ಅಕ್ಟೋಬರ್‌ನಲ್ಲಿ 8,000 ಟನ್‌ಗಳಿಗಿಂತ ಹೆಚ್ಚು ಕೊರತೆ ಕಂಡುಬಂದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮುಖ್ಯಸ್ಥರು ಈ ವ್ಯತ್ಯಾಸವನ್ನು ಬಹಿರಂಗಪಡಿಸಿದ್ದಾರೆ. ಇಷ್ಟು ಪ್ರಮಾಣದಲ್ಲಿ ಅಕ್ಕಿ ವಿತರಿಸಿದ್ದರೆ 27 ಲಕ್ಷ ಕಾರ್ಡುದಾರರಿಗೆ ಸಾಕಷ್ಟು ಅಕ್ಕಿ ಸಿಗುತ್ತಿತ್ತು ಎಂದು ವರದಿಯಾಗಿದೆ.

ಪಡಿತರ ಅಂಗಡಿಗಳಿಗೆ ಅಕ್ಕಿ ಸಾಗಣೆ ವಿಳಂಬ

ಪಡಿತರ ಅಂಗಡಿಗಳಿಗೆ ಅಕ್ಕಿ ಸಾಗಣೆ ವಿಳಂಬ

1.54 ಕೋಟಿ ಸದಸ್ಯರನ್ನು ಹೊಂದಿರುವ ಕೇರಳವು ಹಳದಿ ಮತ್ತು ಗುಲಾಬಿ ವಿಭಾಗಗಳಲ್ಲಿ 41 ಲಕ್ಷ ಕಾರ್ಡ್‌ಗಳನ್ನು ಹೊಂದಿದೆ. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಎನ್‌ಎಫ್‌ಎಸ್‌ಎ ಗೋದಾಮುಗಳಿಂದ ಇಲಾಖೆ ವ್ಯಾಪ್ತಿಯ ಪಡಿತರ ಅಂಗಡಿಗಳಿಗೆ ಅಕ್ಕಿ ಸಾಗಣೆ ವಿಳಂಬವಾಗಿ ಹಲವು ಕಾರ್ಡುದಾರರಿಗೆ ಪೂರ್ಣ ಪ್ರಮಾಣದ ಅಕ್ಕಿ ವಿತರಣೆಯಾಗಿಲ್ಲ. ಇದರಿಂದ ಅಂಗಡಿಗಳಲ್ಲಿ ದಾಸ್ತಾನು ಇದ್ದ ಅಕ್ಕಿಯನ್ನು ಕಾರ್ಡುದಾರರು ಪಡೆದುಕೊಂಡರು. ಕಾರ್ಡುದಾರರು ಅಕ್ಟೋಬರ್‌ನಲ್ಲಿ ಉಳಿದ ಭಾಗವನ್ನು ಪಡೆಯುವ ನಿರೀಕ್ಷೆಯಿದೆ. ಆದರೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿಂದಿನ ಭಾಗವನ್ನು ಮೊದಲು ಅಕ್ಕಿ ಪಡೆಯದ ವ್ಯಕ್ತಿಗಳಿಗೆ ಮಾತ್ರ ವಿತರಿಸಲು ನಿರ್ಧರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+