ಪೆಟ್ರೋಲ್ ದರ ಏರಿಕೆ, ಹಳೆ ನಿಯಮ ಮತ್ತೆ ಜಾರಿಗೆ ತರಲು ಚಿಂತನೆ
ದೇಶದ ಕೆಲವು ನಗರಗಳಲ್ಲಿ ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ಪೆಟ್ರೋಲ್- ಡೀಸೆಲ್ ದರ ತಲುಪಿದ ನಂತರ ಇದೀಗ ಎಚ್ಚೆತ್ತಿರುವ ಸರಕಾರ ಗ್ರಾಹಕರ ರಕ್ಷಣೆಗೆ ಮುಂದಾಗುವಂತೆ ಕಾಣುತ್ತಿದೆ. ದಿನದಿನಕ್ಕೂ ಹೆಚ್ಚುತ್ತಿರುವ ಇಂಧನ ಬೆಲೆಗೆ ಪರಿಹಾರ ಎಂಬಂತೆ ಈ ಹಿಂದೆ ಇದ್ದ ನಿಯಮವನ್ನೇ ಮತ್ತೆ ಜಾರಿಗೆ ತರಲು ಚಿಂತಿಸುತ್ತಿದೆ.
ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿನ ಏರಿಕೆ ಬಗ್ಗೆ ಸುದ್ದಿಯಾದ ನಂತರ ಚಿಲ್ಲರೆ ಮಾರಾಟ ದರವನ್ನು ಹತೋಟಿಯಲ್ಲಿಡಬೇಕು ಎಂಬ ಕಾರಣಕ್ಕೆ ಸರಕಾರ ಮಧ್ಯಪ್ರವೇಶಿಸುವ ಸಾಧ್ಯತೆ ಗೋಚರಿಸುತ್ತಿದೆ. ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಮೂರು ವರ್ಷದ ಇದ್ದ ದರಕ್ಕೆ ಸಮನಾಗಿ ಈಗಿನ ಬೆಲೆ ಬಂದು ನಿಂತಿದೆ.

ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 79.48 ರುಪಾಯಿ ತಲುಪಿದೆ. 2014ರ ಆಗಸ್ಟ್ ನಲ್ಲಿ ಈ ದರ ಇತ್ತು. ಅದೇ ರೀತಿ ಪ್ರತಿ ಲೀಟರ್ ಗೆ ಡೀಸೆಲ್ ದರ ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ರು. 61.37 ಹಾಗೂ ರು. 61.84 ಇದೆ. ಪೆಟ್ರೋಲ್-ಡೀಸೆಲ್ ನ ಚಿಲ್ಲರೆ ಮಾರಾಟ ದರ ನಿರಂತರವಾಗಿ ಏರಿಕೆ ಕಂಡಿದೆ.
ಜೂನ್ ನಲ್ಲಿ ಯಾವಾಗ ಬೆಲೆ ಪರಿಷ್ಕರಣೆ ನಿತ್ಯವೂ ಆಗಬೇಕು ಎಂದು ತೀರ್ಮಾನಿಸಲಾಯಿತೋ ಆಗಿನಿಂದ ಸಣ್ಣ ಪ್ರಮಾಣದಲ್ಲಿ ಬಹುತೇಕ ಎಲ್ಲ ದಿನವೂ ಏರಿಕೆಯಾಗಿದೆ. ಈ ಹಿಂದೆ ದರವನ್ನು ಸರಕಾರ ತನ್ನ ಹತೋಟಿಯಲ್ಲಿ ಇರಿಸಿಕೊಂಡಿದ್ದಾಗ ಬೆಲೆ ಏರಿಕೆ ಅನ್ನೋದು ತುಂಬ ದೊಡ್ಡ ಸಂಗತಿಯಾಗಿತ್ತು. ಆದರೆ ಏಳು ವರ್ಷಗಳ ಹಿಂದೆ ಸರಕಾರ ತೈಲ ಬೆಲೆಯನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತು.
ಆ ನಂತರ ಮೂರು ವರ್ಷ ಕಚ್ಚಾ ತೈಲ ದರದಲ್ಲೂ ಏರಿಕೆ ಕಂಡು, ಪೆಟ್ರೋಲ್ ನ ಬೆಲೆಯಲ್ಲೂ ಏರಿಕೆಯಾಯಿತು. ಆದರೆ ಆ ಮೇಲೆ ಕಚ್ಚಾ ತೈಲ ದರ ಕುಸಿಯಲು ಆರಂಭವಾಯಿತು. ಆದರೂ ಪೆಟ್ರೋಲ್ ಹಾಗೂ ಡೀಸೆಲ್ ದರ ತುಂಬ ವ್ಯತ್ಯಾಸ ಏನೂ ಆಗಲಿಲ್ಲ. ಒಂದೋ ಸ್ಥಿರವಾಗಿರುತ್ತಿತ್ತು ಅಥವಾ ಸ್ವಲ್ಪ ಏರಿಕೆಯಾಗುತ್ತಿತ್ತು.
ಬೆಲೆ ಪರಿಷ್ಕರಣೆ ನಿತ್ಯವೂ ಮಾಡಲು ಆರಂಭಿಸಿದ ಮೇಲೆ ಜುಲೈ ಒಂದರಿಂದ ಈಚೆಗೆ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ರು.7.29 ಹೆಚ್ಚಾಗಿ ರು.70.38 (ಸೆಪ್ಟೆಂಬರ್ 13,2017 ಬುಧವಾರ) ತಲುಪಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications