Gold Price: ₹80,000 ತಲುಪುತ್ತಾ ಚಿನ್ನ? ₹1 ಲಕ್ಷದ ಸನಿಹದಲ್ಲಿ ಬೆಳ್ಳಿ ಬೆಲೆ
ಜೂನ್ 4ರಿಂದ ಚಿನ್ನದ ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಜೂನ್ 4ರಂದು 100 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 7000 ರೂಪಾಯಿ ಹೆಚ್ಚಿದ್ದರೆ, ಜೂನ್ 5ರಂದು 3000 ರೂಪಾಯಿಗಳ ಅಲ್ಪ ಕುಸಿತ ಕಂಡಿತ್ತು.
ಚಿನ್ನದ ಬೆಲೆ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆ ಇರುವಾಗಲೇ ಜೂನ್ 6ರಂದು ಮತ್ತೆ 100 ಗ್ರಾಂ ಚಿನ್ನದ ಬೆಲೆ 7000 ರೂಪಾಯಿ ಹೆಚ್ಚಾಗಿತ್ತು, ಜೂನ್ 7ರಂದು ಶುಕ್ರವಾರ ಕೂಡ ಚಿನ್ನದ ಬೆಲೆ 3300 ರೂಪಾಯಿ ಏರಿಕೆ ಕಂಡಿದೆ.

ಶುಕ್ರವಾರ 22 ಕ್ಯಾರೆಟ್ ಚಿನ್ನ ಅಂದರೆ ಆಭರಣ ಚಿನ್ನದ ಬೆಲೆ 100 ಗ್ರಾಂಗೆ 3000 ರೂಪಾಯಿ ಹೆಚ್ಚಾಗಿದೆ. ಗುರುವಾರ ₹ 6,73,000 ಇದ್ದ ದರ ಶುಕ್ರವಾರ ₹ 6,76,000 ಗಳಿಗೆ ಏರಿಕೆಯಾಗಿದೆ.
ಗುರುವಾರ ₹ 7,34,200 ಇದ್ದ 100 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಶುಕ್ರವಾರ 3300 ರೂಪಾಯಿ ಏರಿಕೆಯಾಗಿದ್ದು ₹ 7,37,500 ರಂತೆ ಮಾರಾಟವಾಗಿದೆ. ಅಂದರೆ ಪ್ರತಿ ಗ್ರಾಂ ಚಿನ್ನದ ಬೆಲೆ 33 ರೂಪಾಯಿ ಹೆಚ್ಚಾಗಿದೆ.
ಎರಡು ದಿನದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 110 ರೂಪಾಯಿ ಏರಿಕೆಯಾಗಿದ್ದರೆ. 22 ಕ್ಯಾರೆಟ್ ಚಿನ್ನದ ಬೆಲೆ 100 ರೂಪಾಯಿ ಹೆಚ್ಚಾಗಿದೆ. ಇದು ಆಭರಣ ಪ್ರಿಯರು, ಹೂಡಿಕೆದಾರರ ತಲೆಬಿಸಿ ಹೆಚ್ಚಿಸಿದೆ.
ಇನ್ನೊಂದು ತಿಂಗಳಿನಲ್ಲಿ ₹80,000?
ಸದ್ಯ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹ 73,750 ಇದೆ, ಕಳೆದ ಮೂರು ದಿನದಂತೆ ಏನಾದರೂ ಬೆಲೆ ಹೆಚ್ಚಳವಾದರೆ ಇನ್ನೊಂದು ತಿಂಗಳಿನಲ್ಲಿ ₹80,000 ತಲುಪಿದರೂ ಅಚ್ಚರಿ ಪಡಬೇಕಿಲ್ಲ.
ಆಭರಣ ಚಿನ್ನ (22 ಕ್ಯಾರೆಟ್) 10 ಗ್ರಾಂಗೆ ₹ 67,600 ಇದ್ದು, ಇದು ಕೂಡ ಶೀಘ್ರದಲ್ಲೇ ₹70,000 ತಲುಪಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
1 ಲಕ್ಷದತ್ತ ಬೆಳ್ಳಿ ದರ
ಇನ್ನು ಬೆಳ್ಳಿ ಬೆಲೆ ಕೂಡ ಹೆಚ್ಚಳವಾಗುತ್ತಿದ್ದು ₹1 ಲಕ್ಷದತ್ತ ದಾಪುಗಾಲು ಇಟ್ಟಿದೆ. ಬೆಂಗಳೂರಿನಲ್ಲಿ ಶುಕ್ರವಾರ ಚಿನ್ನದ ದರ ಕೆಜಿಗೆ 2500 ರೂಪಾಯಿ ಹೆಚ್ಚಳವಾಗಿದ್ದು, 96,000 ರೂಪಾಯಿ ತಲುಪಿದೆ. ಇದೇ ರೀತಿ ದರ ಹೆಚ್ಚಳ ಮುಂದುವರೆದರೆ ಕೆಲವೇ ದಿನಗಳಲ್ಲಿ ಬೆಳ್ಳಿ ಬೆಲೆ 1 ಲಕ್ಷ ರೂಪಾಯಿ ದಾಟುವ ಮೂಲಕ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ












Click it and Unblock the Notifications