ಸ್ಟಾರ್ಟ್ ಅಪ್ ನಿಂಜಾಕಾರ್ಟ್ ನಲ್ಲಿ ಫ್ಲಿಪ್ ಕಾರ್ಟ್, ವಾಲ್ ಮಾರ್ಟ್ ಹೂಡಿಕೆ
ಬೆಂಗಳೂರು, ಡಿಸೆಂಬರ್ 11: ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಕಂಪನಿಗಳು ವಿನೂತನ ಸ್ಟಾರ್ಟ್ ಅಪ್ ಕಂಪನಿ ನಿಂಜಾಕಾರ್ಟ್ ನಲ್ಲಿ ಜಂಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ನಿಂಜಾಕಾರ್ಡ್ ಬಿ2ಬಿ ಪೂರೈಕೆಯ ಸ್ಟಾರ್ಟ್ ಅಪ್ ಕಂಪನಿಯಾಗಿದೆ.
ಈ ಮೂರು ಪಾಲುದಾರರು ದೇಶಾದ್ಯಂತದ ಚಿಲ್ಲರೆ ಮಾರಾಟಗಾರರು ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಉತ್ಪನ್ನಗಳನ್ನು ಪೂರೈಸುವ ಹಾಗೂ ಆ ಮೂಲಕ ರೈತರಿಗೆ ಉದ್ಯೋಗವಕಾಶ ಕಲ್ಪಿಸುವ ಗುರಿ ಹೊಂದಿದ್ದಾರೆ.
ನಿಂಜಾಕಾರ್ಟ್ ನೊಂದಿಗೆ ಪಾಲುದಾರಿಕೆ ಹೊಂದುವುದರಿಂದ ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಕಂಪನಿಗಳಿಗೆ, ವಾಲ್ ಮಾರ್ಟ್ ಇಂಡಿಯಾದ ಉತ್ತಮ ದರದ ಬಿ2ಬಿ ಕ್ಯಾನ್ ಆಂಡ್ ಕ್ಯಾರಿ ಮಳಿಗೆಗಳಿಗೆ ಮತ್ತು ಫ್ಲಿಪ್ ಕಾರ್ಟ್ ನ ಆನ್ ಲೈನ್ ದಿನಸಿ ವ್ಯವಹಾರ ಸೂಪರ್ ಮಾರ್ಟ್ ಗಲಿಗೆ ನೇರವಾಗಿ ಸರಕುಗಳನ್ನು ಪೂರೈಕೆ ಮಾಡುವ ಅವಕಾಶ ಲಭಿಸಲಿದೆ. ಈ ಹೂಡಿಕೆಯಿಂದ ನಿಂಜಾಕಾರ್ಟ್ ನ ಗ್ರಾಹಕರು ಕೂಡ ಹೆಚ್ಚಾಗಲಿದ್ದು, ಹೊಸ ನಗರಗಳನ್ನು ತಲುಪಲು ಸಾಧ್ಯವಾಗುತ್ತದೆ.

2015ರಲ್ಲಿ ಆರಂಭಗೊಂಡಿರುವ ನಿಂಜಾಕಾರ್ಟ್ ದೇಶಾದ್ಯಂತ 200 ಸಂಗ್ರಹ ಕೇಂದ್ರಗಳೂ, 1200 ದಾಸ್ತಾನು ಕೇಂದ್ರಗಳನ್ನು ಹೊಂದಿದೆ. ಇದು ಪ್ರತಿನಿತ್ಯ 1,400 ಟನ್ ಗಳಷ್ಟು ತಾಜಾ ಆಹಾರ ಉತ್ಪನ್ನಗಳ ವಹಿವಾಟು ನಡೆಸುತ್ತದೆ.
ಈ ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸಿರುವ ಫ್ಲಿಪ್ ಕಾರ್ಟ್ ಸಮೂಹದ ಸಿಇಓ ಕಲ್ಯಾಣ್ ಕೃಷ್ಣಮೂರ್ತಿ, ದೇಶೀಯ ಇ-ಕಾಮರ್ಸ್ ಕಂಪನಿಯಾಗಿ, ಸ್ಥಳೀಯ ಸಮಸ್ಯೆಗಳಿಗೆ ತಂತ್ರಜ್ಞಾನಗಳ ಮೂಲಕ ಸ್ಪಂದಿಸುವುದು ಹಾಗೂ ಬದಲಾವಣೆಗಳನ್ನು ತರುವುದು ನಮ್ಮ ಸಹಜ ಗುಣವಾಗಿದೆ.
ಕಳೆದ ಕೆಲ ವರ್ಷಗಳಿಂದ ನಾವು ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸುವುದು, ಸ್ಥಳೀಯ ರೈತರು, ಉತ್ಪಾದಕರು ಮತ್ತು ಆಹಾರ ಸಂಸ್ಕರಣೆ ಮಾಡುವವರನ್ನು ಬೆಂಬಲಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗುವುದರ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗ ದೊರೆತಿದೆ. ನಿಂಜಾಕಾರ್ಟ್ ನಲ್ಲಿ ನಮ್ಮ ಕಂಪನಿ ನಮ್ಮ ಮೌಲ್ಯಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಭಾರತದ ಜೀವನ ಶೈಲಿ ಸುಧಾರಣೆಗೆ ತಂತ್ರಜ್ಞಾನ ಆಧಾರಿತ ಬದ್ಧತೆಯನ್ನು ಕೂಡ ಹಂಚಿಕೊಳುತ್ತಿದೆ'' ಎಂದರು.
ನಿಂಜಾಕಾರ್ಟ್ ನ ಸಿಇಒ ಮತ್ತು ಸಹ ಸಂಸ್ಥಾಪಕ ತಿರುಕುಮಾರನ್ ನಾಗರಾಜನ್, ನಿಂಜಾಕಾರ್ಟ್ ಆಹಾರವನ್ನು ಜನರಿಗೆ ಕೈಗಟುವ ದರದಲ್ಲಿ ಸುರಕ್ಷಿತ ಹಾಗೂ ಸುಲಭವಾಗಿ ದೊರಕುವಂತೆ ಮಾಡಲು ಬಯಸುತ್ತದೆ. ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ನಮ್ಮೊಂದಿಗೆ ಕೈಜೋಡಿಸಿರುವುದು ಸಂತಸ ತಂದಿದೆ. ಅವರ ಬೆಂಬಲದಿಂದ ನಾವು ರೈತರು, ಚಿಲ್ಲರೆ ವ್ಯಾಪಾರಿಗಳೂ ಹಾಗೂ ರೆಸ್ಟೋರೆಂಟ್ ಪಾಲುದಾರರ ಜೀವನವನ್ನು ಕೂಡ ಸುಧಾರಿಸುವ ಸಾಧ್ಯತೆಯನ್ನು ಕಾಣುತ್ತಿದ್ದೇವೆ'' ಎಂದರು.
ವಾಲ್ ಮಾರ್ಟ್ ಇಂಡಿಯಾದ ಸಿಇಒ ಹಾಗೂ ಅಧ್ಯಕ್ಷ ಕ್ರಿಶ್ಲರ್, "ನಿಂಜಾಕಾರ್ಟ್ ನ ಹೊಲದಿಂದ ನೇರವಾಗಿ ಆಹಾರವನ್ನು ಗ್ರಾಹಕರಿಗೆ ಪೂರೈಸುವ ಉದ್ದೇಶ, ವಾಲ್ ಮಾರ್ಟ್ ನ ಉದ್ದೇಶದೊಂದಿಗ ತಳುಕು ಹಾಕಿಕೊಂಡಿದೆ. ನಾವು 2023ರ ವೇಳೆಗೆ ನಮ್ಮ ಕಾಶ್ ಆಂಡ್ ಕ್ಯಾರಿ ಮಳಿಗೆಗಳಿಂದ ಶೇ. 25ರಷ್ಟು ಆಹಾರ ಪದಾರ್ಥವನ್ನು ನೇರವಾಗಿ ರೈತರಿಗೆ ಪೂರೈಸುವ ಗುರಿ ಹೊಂದಿದ್ದೇವೆ.
ಇದು ಅವರಿಗ ಮಾರುಕಟ್ಟೆಯ ಸಂಪರ್ಕ ಕಲ್ಪಿಸುವುದರ ಜೊತೆಗೆ ಸಾಗಾಣಿಕೆಯ ವೆಚ್ಚ ಉಳಿತಾಯವಾಗುತ್ತದೆ. ನಿಂಜಾಕಾರ್ಟ್ ನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಸಣ್ಣ ರೈತರಿಗೆ ಇನ್ನಷ್ಟು ನೆರವಾಗುತ್ತದೆ ಮತ್ತು ಗ್ರಾಮಿಣ ಆದಾಯದ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ ಎಂದು ವಿಶ್ವಾಸವಿದೆ'' ಎಂದರು. ಈ ವ್ಯವಹಾರಗಳು 2019ರ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications