ಕಾಂಗ್ನಿಜೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾದ ಟೆಕ್ಕಿಗಳು
ಅಮೆರಿಕದ ಉದ್ಯೋಗ ನೀತಿ, ವೀಸಾ ನೀತಿಯ ಫಲವಾಗಿ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯರನ್ನು ಉದ್ಯೋಗದಿಂದ ಹೊರದಬ್ಬಲು ಮುಂದಾಗಿರುವ ಆತಂಕ ಸುದ್ದಿ ಬಂದಿದೆ. ಕಾಂಗ್ನಿಜೆಂಟ್ ಸಂಸ್ಥೆ 6000 ಮಂದಿಯನ್ನು ಮನೆಗೆ ಕಳಿಸುವ ಸಾಧ್ಯತೆಯಿದೆ.
ಬೆಂಗಳೂರು, ಮೇ 09:ಕಾಂಗ್ನಿಜೆಂಟ್ ಸಂಸ್ಥೆ 6000 ಮಂದಿ ಭಾರತೀಯ ಉದ್ಯೋಗಿಗಳನ್ನು ಯು ಎಸ್ ಟೀಂನಿಂದ ಹೊರ ತಬ್ಬುವ ಸುದ್ದಿ ಹೊರ ಬರುತ್ತಿದ್ದಂತೆ, ಚೆನ್ನೈನ ಘಟಕದಲ್ಲಿ ಆತಂಕ ಹೆಚ್ಚಾಗಿದೆ. ಎರಡು ಐಟಿ ಉದ್ಯೋಗಿಗಳ ಹಿತರಕ್ಷಣಾ ಸಂಘಟನೆಗಳು ಕಾಂಗ್ನಿಜೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿವೆ.
ಐಟಿ ಸಂಘಟನೆಗಳಾದ FITE ಹಾಗೂ ನ್ಯೂ ಡೆಮಾಕ್ರಾಟಿಕ್ ಲೇಬರ್ ಫ್ರಂಟ್ (NDLF) ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಉದ್ಯೋಗಿಗಳನ್ನು ಕಾರ್ಯಕ್ಷಮತೆ ಅಧಾರದ ಮೇಲೆ ತೆಗೆದು ಹಾಕುವುದು ಸರಿಯಲ್ಲ ಎಂದು ವಾದಿಸಿವೆ. 2,60,000 ಉದ್ಯೋಗಿಗಳ ಪೈಕಿ ಶೇ 5ರಷ್ಟು ಉದ್ಯೋಗಗನ್ನು ಮನೆಗೆ ಕಳಿಸಿತ್ತು.
ನ್ಯೂ ಡೆಮಾಕ್ರಾಟಿಕ್ ಲೇಬರ್ ಫ್ರಂಟ್ ಸದ್ಯ ತಮಿಳುನಾಡು ಹಾಗೂ ಪುದುಚೇರಿಯಲ್ಲಿದ್ದು, ಶೀಘ್ರದಲ್ಲೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ತನ್ನ ಘಟಕ ಅರಂಭಿಸಲು ಮುಂದಾಗಿದೆ.

ಅಮೆರಿಕದ ಉದ್ಯೋಗ ನೀತಿ, ವೀಸಾ ನೀತಿಯ ಫಲವಾಗಿ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯರನ್ನು ಉದ್ಯೋಗದಿಂದ ಹೊರದಬ್ಬಲು ಮುಂದಾಗಿರುವ ಆತಂಕ ಸುದ್ದಿ ಬಂದಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಎಂಬ ಮಂತ್ರ ಪಠಿಸುತ್ತಿರುವ ಎಂಎನ್ ಸಿ ಕಂಪನಿಗಳ ಸಲಿಗೆ ಭಾರತದ ಇನ್ಫೋಸಿಸ್, ವಿಪ್ರೋ ಹಾಗೂ ಟಿಸಿಎಸ್ ಕೂಡಾ ತಲೆದೂಗಲು ಆರಂಭಿಸಿವೆ.
ಈಗ ಕಾಂಗ್ನಿಜೆಂಟ್ ಸಂಸ್ಥೆ 6000 ಮಂದಿ ಭಾರತೀಯ ಉದ್ಯೋಗಿಗಳನ್ನು ಯು ಎಸ್ ನಿಂದ ಮನೆಗೆ ಕಳಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ. ಆದರೆ, ಇದು ಪ್ರತಿವರ್ಷ ನಡೆಯುವ ಪ್ರಕ್ರಿಯೆ ಇದಕ್ಕೂ ಅಮೆರಿಕದ ಉದ್ಯೋಗ ನೀತಿಗೂ ಸಂಬಂಧವಿಲ್ಲ ಎಂದು ಕಾಂಗ್ನಿಜೆಂಟ್ ಸ್ಪಷ್ಟನೆ ನೀಡಿದೆ.
ಆದರೆ, ಕಂಪನಿ ವಿರುದ್ಧ ಉದ್ಯೋಗಿಗಳ ಒಕ್ಕೂಟ ತಿರುಗಿ ಬೀಳಲು ಮುಂದಾಗಿದೆ. ಈ ಹಿಂದೆ ಚೆನ್ನೈನ ಟಿಸಿಎಸ್ ಕಂಪನಿಯ ಉದ್ಯೋಗಿಯನ್ನು ಕಡಿಮೆ ಕಾರ್ಯಕ್ಷಮತೆ ಹೆಸರಿನಲ್ಲಿ ಕೆಲಸದಿಂದ ವಜಾಗೊಳಿಸಿದ್ದು ಭಾರಿ ವಿವಾದ ಎಬ್ಬಿಸಿತ್ತು. ಉದ್ಯೋಗಿ ಪರ ತೀರ್ಪು ನೀಡಿದ್ದ ಹೈಕೋರ್ಟ್, ಐಟಿ ಕಂಪನಿಗಳನ್ನು ಕೈಗಾರಿಕಾ ವ್ಯಾಜ್ಯ ಕಾಯ್ದೆಯಡಿಗೆ ತರಲು ಸಾಧ್ಯವೇ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications