ತಮಿಳುನಾಡಿನ ನಷ್ಟ, ಕರ್ನಾಟಕದ ಲಾಭ, ಏನಿದು ಬಿಜಿನೆಸ್?
ಬೆಂಗಳೂರು, ಏ.21: ಹತ್ತಿ, ಜೋಳ, ನೆಲಗಡೆ, ಧಾನ್ಯಗಳನ್ನು ಬೆಳೆಯುವ ಭೂಮಿಯಲ್ಲಿ ಕೋಲಾ ಕಂಪನಿಯ ಬಾಟ್ಲಿಂಗ್ ಘಟಕ ತಲೆ ಎತ್ತಿ ನಿಲ್ಲುವ ಕಾಲ ಸನ್ನಿಹಿತವಾಗಿದೆ. ತಮಿಳುನಾಡಿಗೆ 'ನೀರು' ಕೊಟ್ಟ ಕರ್ನಾಟಕಕ್ಕೆ ಈಗ ಅಮೆರಿಕದ 'ಕೋಲಾ' ಬೋನಸ್ ಆಗಿ ಸಿಗುತ್ತಿದೆ. ತಮಿಳುನಾಡಿನ ಕೈಗಾರಿಕಾ ಪ್ರದೇಶದಲ್ಲಿ ಅಂಗಡಿ ಬಾಗಿಲು ಮುಚ್ಚಿರುವ ಕೋಕಾ ಕೋಲಾ ಕಂಪನಿ ಈಗ ಯಾದಗಿರಿಯತ್ತ ಮುಖ ಮಾಡಿದೆ.
ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಘಟಕ ಸ್ಥಾಪನೆ ಮಾಡಲು ಕೋಕಾ ಕೋಲಾ ಕಂಪನಿ ಆರ್ಜಿ ಹಾಕುತ್ತಲೇ ಇತ್ತು. ಅದರೆ, ಬೆಂಗಳೂರಿನ ಹೊರಗೆ ಮೂಲ ಸೌಕರ್ಯ ಕೊರತೆ ಇರುವುದರಿಂದ ಜೊತೆಗೆ ಕೋಲಾ ಘಟಕಕ್ಕೆ ಹೆಚ್ಚಿನ ನೀರಿನ ಸೌಲಭ್ಯ ಒದಗಿಸಬೇಕಾಗಿರುವುದರಿಂದ ಕೋಲಾ ಕಂಪನಿ ಆರ್ಜಿಯನ್ನು ಸರ್ಕಾರ ಮುಂದೂಡುತ್ತಾ ಬಂದಿತ್ತು.
2014ರ ಕೊನೆಗೆ ಯಾದಗಿರಿಯಲ್ಲಿ 250 ಎಕರೆ ಕೊಟ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಈಗ ಬಂಪರ್ ಬೆಳೆ ಸಿಗುವ ಸಾಧ್ಯತೆಯಿದೆ.[ಕೋಲಾ ಕಂಪನಿ ಕೈಗೆ 250 ಎಕರೆ ಭೂಮಿ]

ತಮಿಳುನಾಡಿನಿಂದ ಪ್ಯಾಕ್ ಅಪ್: ತಮಿಳುನಾಡು ರಾಜ್ಯ ಕೈಗಾರಿಕಾ ಪ್ರಚಾರ ಕಾರ್ಪೊರೇಷನ್ (SIPCOT) ನಿಂದ ಕೋಕಾಕೋಲಾ ಸಂಸ್ಥೆಗೆ ನೀಡಿದ್ದ 71.34 ಎಕರೆ ಭೂಮಿಯನ್ನು ರದ್ದುಪಡಿಸಲಾಗಿದೆ. ಸಿಪ್ಕೋಟ್ ವ್ಯವಸ್ಥಾಪಕ ನಿರ್ದೇಶಕ ಆರ್ ಸೆಲ್ವರಾಜ್ ಅವರು ಹಿಂದೂಸ್ತಾನ್ ಕೋಕಾಕೋಲಾ ಸಂಸ್ಥೆ(HCCB) ಗೆ ಪತ್ರ ಬರೆದು ರಾಜ್ಯದಿಂದ ಪ್ಯಾಕ್ ಅಪ್ ಮಾಡುವಂತೆ ಸೂಚಿಸಿದ್ದಾರೆ. [ಕರ್ನಾಟಕ ಬಂದ್ : ಮೇಕೆದಾಟು ಯೋಜನೆ ವಿವಾದವೇನು?]
ಚೆನ್ನೈಮಲೈ, ಪೆರುಂದುರೈನಲ್ಲಿ ದಕ್ಕಿದ್ದ ಭೂಮಿಯಲ್ಲಿ ಕೋಕಾಕೋಲಾ ಕಂಪನಿ ಮಣ್ಣು ಪರೀಕ್ಷೆ ಮಾಡಲು ಹೋಗಿ ಸ್ಥಳೀಯರಿಂದ ವಿರೋಧ ಕಟ್ಟಿಕೊಂಡಿತ್ತು. ತಮಿಳುನಾಡಿನಲ್ಲಿ 500 ಕೋಟಿ ರು ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿದ್ದ ಕೋಕಾ ಕೋಲಾ ಈಗ ಕರ್ನಾಟಕದಲ್ಲಿ 1000 ಕೋಟಿ ರು ಪ್ಲಸ್ ಮೊತ್ತ ಹೂಡಿಕೆ ಮಾಡಲು ಮುಂದಾಗಿದೆ.
ಯಾದಗಿರಿ ಜಿಲ್ಲೆಯ ಕಡೆಚೂರು, ಬಳಿಯಾಳ ಪ್ರದೇಶದ 3,330 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಈ ಪೈಕಿ 250 ಎಕರೆ ಕೋಕಾ ಕೋಲಾ ಕಂಪನಿ ಪಾಲಾಗಲಿದೆ. ಮೂಲಗಳ ಪ್ರಕಾರ ಭೂ ಮಾಲೀಕರಿಗೆ ಪ್ರತಿ ಎಕರೆ 7.5 ಲಕ್ಷ (ರಸ್ತೆ ಬದಿ ಜಮೀನಿಗೆ) ರಿಂದ 6 ಲಕ್ಷ ರು ಪರಿಹಾರ ನೀಡಲಾಗುತ್ತಿದೆ. [ನರ್ಮದಾ ಒಡಲು ಬರಿದು ಮಾಡುತ್ತಿರುವ ಕೋಲಾ]
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಮಾತನಾಡಿ, ಕೋಕಾ ಕೋಲಾ ಕಂಪನಿ ರಾಜ್ಯದಲ್ಲಿ ಸುಮಾರು 1000 ಕೋಟಿ ರು ಹೂಡಿಕೆ ಮಾಡಲು ಮುಂದಾಗಿರುವುದನ್ನು ದೃಢಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications