Q4:ಬಾಷ್ ತೆರಿಗೆ ನಂತರದ ಲಾಭ 482 ಕೋಟಿ ರು ಗಳಿಕೆ
ಬೆಂಗಳೂರು, ಮೇ 20:ಜಾಗತಿಕ ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆದಾರ ಸಂಸ್ಥೆ ಬಾಷ್ ಲಿಮಿಟೆಡ್ 2020-21 ನೇ ಹಣಕಾಸು ಸಾಲಿನಲ್ಲಿ ಕಾರ್ಯಾಚರಣೆಗಳ ಮೂಲಕ ಒಟ್ಟು 9,718 ಕೋಟಿ ರೂಪಾಯಿಗಳ (1.12 ಬಿಲಿಯನ್ ಯೂರೋಗಳು) ಆದಾಯವನ್ನು ಗಳಿಸಿದೆ. ಆದಾಗ್ಯೂ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 1.3% ರಷ್ಟು ಕಡಿಮೆ ದಾಖಲಾಗಿದೆ. ಹೊರತಾದ ಉತ್ಪನ್ನಗಳ ತೆರಿಗೆ ಪೂರ್ವ ಲಾಭ(ಪಿಬಿಟಿ) 19.9% ರಷ್ಟು ಕುಸಿದಿದ್ದು, 1,311 ಕೋಟಿ ರೂಪಾಯಿಗಳನ್ನು ಗಳಿಸಿದೆ. 2020-21 ನೇ ಹಣಕಾಸು ಸಾಲಿನಲ್ಲಿ ಕಾರ್ಯಾಚರಣೆಗಳಿಂದ ಹೊರತಾದ ಉತ್ಪನ್ನಗಳ ಮುನ್ನ ಆದಾಯ ಪಿಬಿಟಿ 13.5% ಕ್ಕೆ ತಲುಪಿದೆ.
2020-21 ನೇ ಹಣಕಾಸು ಸಾಲಿನಲ್ಲಿ ಬಾಷ್ ಲಿಮಿಟೆಡ್ ವಿವಿಧ ಪುನರ್ ರಚನೆ, ಪುನರ್ ಕೌಶಲ್ಯ ಮತ್ತು ಪುನರ್ ನಿಯೋಜನೆ ಉಪಕ್ರಮಗಳಿಗಾಗಿ 743 ಕೋಟಿ ರೂಪಾಯಿಗಳ ಅವಕಾಶವನ್ನು ಕಲ್ಪಿಸಿಕೊಂಡಿತ್ತು. ಹೊರತಾದ ಉತ್ಪನ್ನಗಳ ನಂತರದ ಪಿಬಿಟಿ 567 ಕೋಟಿ ರೂಪಾಯಿಗಳಾಗಿತ್ತು ಅಥವಾ ಕಾರ್ಯಾಚರಣೆಗಳ 5.8% ಒಟ್ಟು ಆದಾಯವಾಗಿತ್ತು. ತೆರಿಗೆ ನಂತರದ ಲಾಭವು(ಪಿಎಟಿ) 482 ಕೋಟಿ ರೂಪಾಯಿಗಳಾಗಿದೆ.ಪಿಎಟಿ ಕಾರ್ಯಾಚರಣೆಗಳಿಂದ ಒಟ್ಟು ಆದಾಯದ 10.7% ರಷ್ಟು ದಾಖಲಾಗಿದೆ. 2020-21 ನೇ ಹಣಕಾಸು ಸಾಲಿನಲ್ಲಿ ಆಡುಗೋಡಿ ಕ್ಯಾಂಪಸ್ ಅನ್ನು ಸ್ಮಾರ್ಟ್ ಕ್ಯಾಂಪಸ್ ಅನ್ನಾಗಿ ಪರಿವರ್ತನೆ ಮಾಡುವಂತಹ ಪ್ರಮುಖ ಕಾರ್ಯಗಳಿಗಾಗಿ 246 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ.
ಈ ಹಣಕಾಸು ಸಾಲಿನ ಫಲಿತಾಂಶದ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಚಾರ್ಯ, ''2020 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೂನ್ಯ ಮಾರಾಟದ ಸನಿಹ ಇದ್ದಾಗ್ಯೂ ಕೃಷಿ ಕ್ಷೇತ್ರ ಅದರಲ್ಲೂ ಪ್ರಮುಖವಾಗಿ ಟ್ರಾಕ್ಟರ್ ವ್ಯವಹಾರದಲ್ಲಿ ಬೇಡಿಕೆ ಹೆಚ್ಚಾಗಿ ಕಂಡುಬಂದಿತ್ತು. 2020-21 ನೇ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಿಂದ ಉದ್ಯಮವು ಚೇತರಿಕೆ ಕಾಣಲಾರಂಭಿಸಿತು. ಆದಾಗ್ಯೂ, ಮಾರುಕಟ್ಟೆಯಲ್ಲಿ ಅನಿಶ್ಚಿತತೆಯಿದ್ದ ಪರಿಣಾಮ ಮುಂದುವರಿದಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಜಾಲದಲ್ಲಿ ಏರಿಳಿತಗಳು ಮತ್ತು ಅನಿಶ್ಚಿತತೆಗಳು ಮುಂದುವರಿದ ಪರಿಣಾಮವು ಆಟೋ ಕ್ಷೇತ್ರದ ಮೇಲೆ ಬೀರಿತು. ಇದಲ್ಲದೇ, ಪವರ್ ಟೂಲ್ಸ್ ವಿಭಾಗ ವಿಶೇಷವಾಗಿ ನಿರ್ಮಾಣ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಕಂಡಿದ್ದೇವೆ'' ಎಂದು ತಿಳಿಸಿದರು.

ಮಾರ್ಚ್ 31, 2021 ಕ್ಕೆ ಕೊನೆಗೊಂಡ 4 ನೇ ತ್ರೈಮಾಸಿಕದಲ್ಲಿ ಬಾಷ್ ಲಿಮಿಟೆಡ್ ಕಾರ್ಯಾಚರಣೆಗಳಿಂದ ಒಟ್ಟು 3,218 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದ್ದು, ಇದು ಹಿಂದಿನ ವರ್ಷದ 4 ನೇ ತ್ರೈಮಾಸಿಕಕ್ಕೆ ಹೋಲಿಸಿದರೆ 43.8 % ರಷ್ಟು ಹೆಚ್ಚಾಗಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಪಿಬಿಟಿ 640 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಇದೇ ಅವಧಿಗಿಂತ 77.2 % ಹೆಚ್ಚಾಗಿದೆ.
Recommended Video
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications