ಬ್ಯ್ಲಾಕ್ ಬೆರಿಯಿಂದ 4500 ಉದ್ಯೋಗ ಕಡಿತ
ಬೆಂಗಳೂರು, ಸೆ.21 : ಸ್ಮಾರ್ಟ್ ಫೋನ್ ಗಳ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭುತ್ವ ಹೊಂದಿರುವ ಬ್ಲ್ಯಾಕ್ ಬೆರಿ ತನ್ನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳಲು ಮುಂದಾಗಿದೆ. ಜಾಗತಿಕವಾಗಿ ಶೇ 40 ರಷ್ಟು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುತ್ತಿದೆ.
ಬ್ಲ್ಯಾಕ್ ಬೆರಿ ಸಂಸ್ಥೆ ಉದ್ಯೋಗ ಕಡಿತ ಸುದ್ದಿ ಹೊರಬೀಳುತ್ತಿದ್ದಂತೆ ಬ್ಲ್ಯಾಕ್ ಬೆರಿ ಷೇರುಗಳು ಶೇ 23 ರಷ್ಟು ಕುಸಿತ ಕಂಡು 8.11 ಯುಎಸ್ ಡಾಲರ್ ಗೆ ಇಳಿದಿತ್ತು. ಈ ಸಮಯಕ್ಕೆ 8.725 ಯುಎಸ್ ಡಾಲರ್ ನಂತೆ ಶೇ 17.06 ರಷ್ಟು ಕುಸಿತ ಕಂಡಿದೆ. ದಿನಪೂರ್ತಿ ಇದೇ ಪ್ರಮಾಣದಲ್ಲಿ ಕುಸಿತ ಕಾಣುವಂತೆ ಕಾಣುತ್ತದೆ.
ಕೆನಡಾ ಮೂಲದ ಕಂಪನಿ ಈ ತ್ರೈಮಾಸಿಕದಲ್ಲಿ ಸುಮಾರು 950 ಮಿಲಿಯನ್ ಡಾಲರ್ ನಿಂದ 995 ಮಿಲಿಯನ್ ಡಾಲರ್ ಕಳೆದುಕೊಳ್ಳುವ ಭೀತಿಯಲ್ಲಿದೆ. ಪ್ರತಿಸ್ಪರ್ಧಿಗಳ ಜತೆ ಪೈಪೋಟಿ ನಡೆಸಲು ಬ್ಲ್ಯಾಕ್ ಬೆರಿ ವಿಫಲವಾಗಿದೆ.

ಸುಮಾರು 3 ಬಿಲಿಯನ್ ಆದಾಯ ಅಂದಾಜಿಸಲಾಗಿತ್ತು ಆದರೆ 1.6 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಇದೆ. ಶೇ 47 ರಿಂದ 51 ನಷ್ಟ ಅನುಭವಿಸುವ ಸಾಧ್ಯತೆಯಿದೆ.
ಸಂಸ್ಥೆ ಕಾರ್ಯನಿರ್ವಹಣೆ ವೆಚ್ಚ ಸರಿದೂಗಿಸಲು 2015ರ ಹೊತ್ತಿಗೆ ಜಾಗತಿಕವಾಗಿ ಸುಮಾರು 7000 ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಲಾಗಿದೆ. ಇದರ ಮೊದಲ ಹಂತವಾಗಿ 4500 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಮುಂದಾಗಿದೆ.
1999ರಿಂದ ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಬೆಳಗುತ್ತಿರುವ ಬ್ಲ್ಯಾಕ್ ಬೆರಿ 2007ರಲ್ಲಿ ಆಪಲ್ ಸಂಸ್ಥೆ ಐಫೋನ್ ಎದುರು ಹಾಗೂ ನಂತರ ಸ್ಯಾಮ್ ಸಂಗ್ ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ವಿರುದ್ಧ ಸೆಣಸಾಟ ನಡೆಸಿದೆ.
ಬ್ಲ್ಯಾಕ್ ಬೆರಿ Z 10 ಹಾಗೂ Q10 ಹೊಸ ವಿನ್ಯಾಸ ಬ್ಲ್ಯಾಕ್ ಬೆರಿ ಹೊಸ ಆಪರೇಟಿಂಗ್ ಸಿಸ್ಟಮ್ ಜತೆಗೆ ಸ್ಮಾರ್ತ್ ಫೋನ್ ಗಳು ಮಾರುಕಟ್ಟೆಗೆ ಬಂದಿವೆಯಾದರೂ ಪ್ರತಿಸ್ಪರ್ಧಿ ವಿರುದ್ಧ ರೇಸ್ ನಲ್ಲಿ ಹಿಂದೆ ಬಿದ್ದಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications