ಶೇ. 56 ಮಂದಿಗೆ ಅರ್ಧದಲ್ಲೇ ದೂರವಾಣಿ ಕರೆ ಕಡಿತ ಸಮಸ್ಯೆ, ಯಾಕೆ ಹೀಗೆ?
ನವದೆಹಲಿ, ಸೆಪ್ಟೆಂಬರ್ 05: ಭಾರತದಾದ್ಯಂತ ಅರ್ಧಕ್ಕಿಂತಲೂ ಹೆಚ್ಚು ದೂರವಾಣಿ ಬಳಕೆದಾರರಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಾಗಲೇ ಕರೆ ಕಡಿತಗೊಂಡು ಸಂವಹನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸುತ್ತಿದೆ.
ಭಾರತದಲ್ಲಿ 56 ಪ್ರತಿಶತದಷ್ಟು ಜನರು ತಾವು ತೀವ್ರ ಕರೆ ಡ್ರಾಪ್ ಮತ್ತು ಕರೆ ಸಂಪರ್ಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆನ್ಲೈನ್ ಪ್ಲಾಟ್ಫಾರ್ಮ್ ಲೋಕಲ್ ಸರ್ಕಲ್ಸ್ ಸೋಮವಾರ ವರದಿಯಲ್ಲಿ ತಿಳಿಸಿದೆ. ಭಾರತದಾದ್ಯಂತ ನಡೆಸಿದ ಈ ಸಮೀಕ್ಷೆಯಲ್ಲಿ 339 ಜಿಲ್ಲೆಗಳನ್ನು ಒಳಗೊಂಡು ಶೋಧ ನಡೆಸಿ ಈ ವರದಿ ನೀಡಿದೆ.
ಸಮೀಕ್ಷೆಯ ಪ್ರಕಾರ, ಶೇಕಡಾ 82 ರಷ್ಟು ಜನರು ನೆಟ್ವರ್ಕ್ ಸಮಸ್ಯೆಗಳನ್ನು ನಿವಾರಿಸಲು ಡೇಟಾ ಅಥವಾ ವೈಫೈ ಕರೆಗಳನ್ನು ಮಾಡುತ್ತಿದ್ದಾರೆ. ಶೇ 56 ರಷ್ಟು ನಾಗರಿಕರು ತಾವು ತೀವ್ರ ಕಾಲ್ ಕನೆಕ್ಟ್ ಮತ್ತು ಕಾಲ್ ಡ್ರಾಪ್ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳುತ್ತಾರೆ" ಎಂದು ಹೇಳಿದೆ. ಕಳೆದ 3 ತಿಂಗಳುಗಳಲ್ಲಿ ಅವರ ಮೊಬೈಲ್ ಫೋನ್ ಕರೆಗಳಲ್ಲಿ ಸರಿಸುಮಾರು ಎಷ್ಟು ಪ್ರತಿಶತದಷ್ಟು ಕೆಟ್ಟ ಸಂಪರ್ಕ ಅಥವಾ ಕರೆ ಡ್ರಾಪ್ ಸಮಸ್ಯೆಗಳಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ 37 ಪ್ರತಿಶತದಷ್ಟು ಜನರು ತಮ್ಮ ಕರೆಗಳಲ್ಲಿ 20-50 ಪ್ರತಿಶತದಷ್ಟು ಸಮಸ್ಯೆಯನ್ನು ಅನುಭವಿಸಿದ್ದಾರೆ ಎಂದು ಹೇಳಿದರು.

ಕರೆ ಸಂಪರ್ಕ ಮತ್ತು ಕಡಿತ ಕುರಿತ ಪ್ರಶ್ನೆಗೆ 8,364 ಉತ್ತರಗಳು ಬಂದಿವೆ. ಒಟ್ಟು 91 ಪ್ರತಿಶತದಷ್ಟು ಜನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಉತ್ತರಿಸುತ್ತಿದ್ದಾರೆ. ಆದರೆ 56 ಪ್ರತಿಶತದಷ್ಟು ಜನರು ಕರೆ ಕಡಿತ ವಿಷಯದಲ್ಲಿ ಸಮಸ್ಯೆ ತೀವ್ರವಾಗಿದೆ ಎಂದು ಹೇಳಿದ್ದಾರೆ. ಕರೆಯ ಗುಣಮಟ್ಟವನ್ನು ಕೇಂದ್ರೀಕರಿಸಿರುವ ಸಮೀಕ್ಷೆಯು 31,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಇದು ಶ್ರೇಣಿ 1 ರಿಂದ 42 ಪ್ರತಿಶತವನ್ನು ಒಳಗೊಂಡಿದೆ. ಶ್ರೇಣಿ 2 ರಿಂದ ಶೇ. 31 ಮತ್ತು ಶ್ರೇಣಿ 3, 4 ಮತ್ತು ಗ್ರಾಮಾಂತರ ಜಿಲ್ಲೆಗಳಿಂದ ಶೇ. 27ರಷ್ಟು ಎಂದು ವರದಿ ತಿಳಿಸಿದೆ.
ಆದಾಗ್ಯೂ, ಪ್ರತಿ ಪ್ರಶ್ನೆಗೆ ಪ್ರತಿಕ್ರಿಯೆಗಳ ಸಂಖ್ಯೆ ವಿಭಿನ್ನವಾಗಿತ್ತು. ಕಳೆದ 3 ತಿಂಗಳುಗಳಲ್ಲಿ ಮೊಬೈಲ್ ಧ್ವನಿ ಸೇವೆಗಳನ್ನು ಬಳಸುವಾಗ ನಾಗರಿಕರು ಹೆಚ್ಚು ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಪ್ರತಿಕ್ರಿಯಿಸಿದವರಲ್ಲಿ 45 ಪ್ರತಿಶತದಷ್ಟು ಜನರು "ಕಾಲ್ ಡ್ರಾಪ್ಸ್" ಅನ್ನು ಉಲ್ಲೇಖಿಸಿದ್ದಾರೆ ಮತ್ತು 42 ಪ್ರತಿಶತದಷ್ಟು ಜನರು "ಕಾಲ್ ಕನೆಕ್ಟ್ ವೈಫಲ್ಯಗಳನ್ನು" ಸೂಚಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ಪ್ರಕಾರ, ಶೇಕಡಾ 78 ರಷ್ಟು ನಾಗರಿಕರು ಕೆಟ್ಟ ಸಂಪರ್ಕದ ಹೊರತಾಗಿಯೂ 30 ಸೆಕೆಂಡುಗಳಲ್ಲಿ ಸ್ವಯಂಚಾಲಿತ ಕರೆ ಡ್ರಾಪ್ ಅನ್ನು ಅನುಭವಿಸಿಲ್ಲ ಎಂದು ಹೇಳಿದ್ದಾರೆ. ಜನರು ತಮ್ಮ ಸಂವಹನಕ್ಕಾಗಿ ಒಟ್ಟಾರೆಯಾಗಿ, ಡೇಟಾ ಅಥವಾ ವೈಫೈ ಸಂಪರ್ಕವನ್ನು ಹೊಂದಿರುವ 82 ಪ್ರತಿಶತ ನಾಗರಿಕರು ಆಗಾಗ್ಗೆ ಡೇಟಾ ಅಥವಾ ವೈಫೈ ಕರೆಗಳನ್ನು ಮಾಡುತ್ತಿದ್ದಾರೆ. ಏಕೆಂದರೆ ಅವರು ಸಾಮಾನ್ಯ ಮೊಬೈಲ್ ನೆಟ್ವರ್ಕ್ನಲ್ಲಿ ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications