ಫಲಿತಾಂಶ ಬರುವವರೆಗೂ ಪ್ರಜ್ಞಾ ಸಿಂಗ್ ಠಾಕೂರ್ ಮೌನವ್ರತ
ಭೋಪಾಲ್, ಮೇ 20: ಲೋಕಸಭೆ ಚುನಾವಣೆ ಫಲಿತಾಂಶ ಬರುವವರೆಗೂ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮೌನ ವ್ರತ ಆಚರಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಭೋಪಾಲ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಾದ್ವಿ ಅವರು ಫಲಿತಾಂಶ ಬರುವವರೆಗೂ ಮೌನ ವ್ರತ ಆಚರಿಸುತ್ತಿದ್ದಾರೆ, ಚುನಾವಣೆಯಲ್ಲಿ ಗೆಲುವು ಧಕ್ಕಲೆಂದು ಅವರು ಮೌನವ್ರತಕ್ಕೆ ಮೊರೆಹೋಗಿದ್ದಾರೆ ಎನ್ನಲಾಗಿದೆ.
ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಇತ್ತೀಚೆಗೆ ನಾಥೂರಾಮ್ ಗೋಡ್ಸೆ ಬಗ್ಗೆ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಗುರಿಯಾಗಿದ್ದರು, ಬಿಜೆಪಿ ರಾಷ್ಟ್ರಾಧ್ಯಕ್ಷರೇ ಹೇಳಿಕೆಯನ್ನು ಖಂಡಿಸಬೇಕಾಗಿ ಬಂದಿತು, ಪಕ್ಷಕ್ಕೂ ತೀವ್ರ ಮುಖಭಂಗ ತಂದಿತ್ತು, ಬಿಜೆಪಿಯು ಸಾದ್ವಿ ಅವರ ಮೇಲೆ ಶಿಸ್ತು ಕ್ರಮವನ್ನು ಜರುಗಿಸಲು ಸಹ ಯೊಚಿಸಿದೆ.

ಈ ಎಲ್ಲಾ ಬೆಳವಣಿಗೆಗಳ ನಂತರ ಸಾದ್ವಿ ಅವರು ಮೌನವ್ರತಕ್ಕೆ ಮೊರೆ ಹೋಗಿದ್ದಾರೆ. ವಿವಾದಿತ ಹೇಳಿಕೆಗಳ ಮೂಲಕ ಹೆಸರಾಗಿರುವ ಅವರು ಫಲಿತಾಂಶದ ವರೆಗೂ ಆದರೂ ಮಾಧ್ಯಮಗಳು ಮತ್ತು ವಿವಾದದಿಂದ ದೂರ ಉಳಿಯಲೆಂದು ಮೌನವ್ರತ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸಾದ್ವಿ ಪ್ರಜ್ಞಾ ಸಿಂಗ್ ಅವರು ಕಾಂಗ್ರೆಸ್ನ ದಿಗ್ವಿಜಯ್ ಸಿಂಗ್ ಅವರನ್ನು ಎದುರಿಸಲಿದ್ದಾರೆ. ಸಂಜೋತಾ ಎಕ್ಸ್ಪ್ರೆಸ್ ದುರಂತ ಪ್ರಕರಣದ ಆರೋಪಿ ಆಗಿರುವ ಅವರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು, ಆದರೂ ಅವರಿಗೆ ಟಿಕೆಟ್ ನೀಡಲಾಯಿತು.












Click it and Unblock the Notifications